ಕುವೆಂಪು ವಿವಿಯಲ್ಲಿ NSUI ಬೃಹತ್ ಪ್ರತಿಭಟನೆ: ಕುಲಪತಿ ಕಚೇರಿ ವಸ್ತುಗಳು ಧ್ವಂಸ, ಘೇರಾವ್
ಶಂಕರಘಟ್ಟದ ಕುವೆಂಪು ವಿಶ್ವವಿದ್ಯಾಲಯದಲ್ಲಿ ಆಡಳಿತಾತ್ಮಕ ವೈಫಲ್ಯಗಳನ್ನು ವಿರೋಧಿಸಿ ಇಂದು ಎನ್.ಎಸ್.ಯು.ಐ ಕಾರ್ಯಕರ್ತರು ಬೃಹತ್ ಪ್ರತಿಭಟನೆ ನಡೆಸಿದರು.
ಏಕಾಏಕಿ ವಿಶ್ವವಿದ್ಯಾಲಯದ ಆವರಣದೊಳಗೆ ನುಗ್ಗಿದ ಪ್ರತಿಭಟನಾಕಾರರು, ಅಲ್ಲಿದ್ದ ಹೂವಿನ ಕುಂಡಗಳು ಹಾಗೂ ಕುರ್ಚಿಗಳನ್ನು ಧ್ವಂಸಗೊಳಿಸಿದರು. ನಂತರ ಕುಲಪತಿ ಪ್ರೊ. ಶರತ್ ಅನಂತಮೂರ್ತಿ ಅವರ ಕಚೇರಿ ಮುಂದೆ ಜಮಾಯಿಸಿ, ‘ಬೇಕು ಬೇಕು ನ್ಯಾಯ ಬೇಕು’ ಎಂದು ಘೋಷಣೆಗಳನ್ನು ಕೂಗುತ್ತಾ ಕುಲಪತಿಗಳಿಗೆ ಘೇರಾವ್ ಹಾಕಿದರು.
ಪರಿಸ್ಥಿತಿ ಕೈಮೀರುತ್ತಿರುವುದನ್ನು ಗಮನಿಸಿದ ಕುಲಪತಿಗಳು, ತಕ್ಷಣವೇ ವಿಶ್ವವಿದ್ಯಾಲಯದ ಎಲ್ಲಾ ಪ್ರವೇಶ ದ್ವಾರಗಳನ್ನು ಮುಚ್ಚುವಂತೆ ಸಿಬ್ಬಂದಿಗೆ ಸೂಚಿಸಿದರು. ಅಷ್ಟೇ ಅಲ್ಲದೆ, ಈ ಕೃತ್ಯದಲ್ಲಿ ಭಾಗಿಯಾದ ಎಲ್ಲರ ವಿರುದ್ಧವೂ ಕಠಿಣ ಕಾನೂನು ಕ್ರಮ ಕೈಗೊಳ್ಳುವುದಾಗಿ ಅವರು ಎಚ್ಚರಿಕೆ ನೀಡಿದರು.
#KuvempuUniversity, #NSUIProtest, #Shivamogga, #Shankaraghatta, #StudentProtest, #Vandalism, #UniversityCrisis, #EducationNews, #KarnatakaNews, #VCSharathAnanthamurthy, #JusticeForStudents, #MalnadToday, #UniversityAdministration, #BreakingNewsShivamogga
