What are the daily predictions for all 12 zodiac signs / ಶಿವಮೊಗ್ಗ / ಮಲೆನಾಡು ಟುಡೆ ಸುದ್ದಿ / ಪರಾಭವ ನಾಮ ಸಂವತ್ಸರ, ಉತ್ತರಾಯಣ,ವಸಂತ ಋತುವಿನ ಚೈತ್ರ ಮಾಸದ ,ಶುಕ್ಲ ಪಕ್ಷದ ಪಂಚಮಿ ತಿಥಿಯು ರಾತ್ರಿ 9.50 ರವರೆಗೆ ಇರಲಿದ್ದು, ತದನಂತರ ಷಷ್ಠಿ ತಿಥಿ ಆರಂಭವಾಗಲಿದೆ. ಕೃತ್ತಿಕಾ ನಕ್ಷತ್ರ ರಾತ್ರಿ 11.57 ರವರೆಗೆ ಮುಂದುವರಿಯಲಿದ್ದು, ಬಳಿಕ ರೋಹಿಣಿ ನಕ್ಷತ್ರ ಪ್ರವೇಶವಾಗಲಿದೆ.ರಾತ್ರಿ 9.42 ರಿಂದ 11.11 ರವರೆಗೆ ಅಮೃತ ಘಳಿಗೆ, ಬೆಳಿಗ್ಗೆ 7.30 ರಿಂದ 9.00 ರವರೆಗೆ ರಾಹುಕಾಲ ಹಾಗೂ ಬೆಳಿಗ್ಗೆ 10.30 ರಿಂದ 12.00 ರವರೆಗೆ ಯಮಗಂಡ ಕಾಲವಿರಲಿದೆ.
ಹವಾಮಾನ ಮುನ್ಸೂಚನೆ! ಶಿವಮೊಗ್ಗ : ಇನ್ನೈದು ದಿನ ಗುಡುಗು, ಗಾಳಿ, ಮಳೆ!
ಇವತ್ತಿನ ರಾಶಿಭವಿಷ್ಯ
ಮೇಷ / ಉದ್ಯೋಗ ಹಾಗೂ ವ್ಯಾಪಾರ ಕ್ಷೇತ್ರಗಳಲ್ಲಿ ಈ ದಿನ ಸಾಮಾನ್ಯವಾಗಿರಲಿದೆ.ಖರ್ಚು ವೆಚ್ಚ ಹೆಚ್ಚಾಗುವ ಸಾಧ್ಯತೆಗಳಿವೆ. ಕುಟುಂಬದ ಸದಸ್ಯರಿಂದ ಹೆಚ್ಚಿನ ಒತ್ತಡ, ಆಸ್ತಿ ವಿಚಾರದಲ್ಲಿ ವಿವಾದ. ಪ್ರಯಾಣ ಮುಂದೂಡುವರು, ಅನಾರೋಗ್ಯ ಕಾಡಲಿವೆ.

ವೃಷಭ / ಮುಖ್ಯವಾದ ಮಾಹಿತಿಯೊಂದು ಲಭ್ಯವಾಗಲಿದ್ದು, ದೇವಾಲಯಗಳಿಗೆ ಭೇಟಿ ನೀಡುವರು.ಗೃಹ ಹಾಗೂ ವಾಹನ ಖರೀದಿಯ ಯೋಗವಿದೆ. ಸಮಾಜದ ಗಣ್ಯ ವ್ಯಕ್ತಿಗಳೊಂದಿಗಿನ ಮಾತುಕತೆ ಯಶಸ್ವಿ. ಆದಾಯವು ತೃಪ್ತಿದಾಯಕ, ವ್ಯಾಪಾರಸ್ಥರು ಉತ್ತಮ ಲಾಭ ಗಳಿಸಲಿದ್ದಾರೆ ಹಾಗೂ ಉದ್ಯೋಗಿಗಳಲ್ಲಿ ಹೊಸ ಉತ್ಸಾಹ ಮೂಡಲಿದೆ.
ಮಿಥುನ / ದೈನಂದಿನ ಕೆಲಸಗಳಲ್ಲಿ ಅಡೆತಡೆ, ಆದಾಯಕ್ಕಿಂತ ಖರ್ಚು ಜಾಸ್ತಿ. ಸಹೋದರರು ಹಾಗೂ ಸ್ನೇಹಿತರೊಂದಿಗೆ ಭಿನ್ನಾಭಿಪ್ರಾಯ ಉಂಟಾಗುವ ಸಾಧ್ಯತೆಗಳಿದೆ. ದಿಢೀರ್ ಪ್ರಯಾಣ ಕೈಗೊಳ್ಳಬೇಕಾಗಿ ಬರಬಹುದು. ವ್ಯಾಪಾರಸ್ಥರು ಪ್ರತಿಯೊಂದು ಹೆಜ್ಜೆಯನ್ನೂ ಎಚ್ಚರಿಕೆಯಿಂದ ಇಡಬೇಕಾಗಿದ್ದು, ಉದ್ಯೋಗಿಗಳಿಗೆ ಕೆಲಸದ ಹೊರೆ ಹೆಚ್ಚಾಗಲಿದೆ.
ಕರ್ಕಾಟಕ / ವಾಹನ ಸೌಕರ್ಯ ಒದಗಿಬರಲಿದೆ. ಪ್ರಮುಖವಾದ ಸಂದೇಶವೊಂದು ಕೈಸೇರಲಿದೆ, ಉದ್ಯೋಗ ಅರಸುತ್ತಿರುವವರ ಪ್ರಯತ್ನಗಳಿಗೆ ಮುನ್ನಡೆ ಸಿಗಲಿದೆ. ಆರ್ಥಿಕವಾಗಿ ಧನಲಾಭ, ವ್ಯಾಪಾರದಲ್ಲಿ ಲಾಭದ ನಿರೀಕ್ಷೆ ಹಾಗೂ ಉದ್ಯೋಗಿಗಳಿಗೆ ಈ ದಿನ ಯಶಸ್ಸು ಸಿಗಲಿದೆ.

ಸಿಂಹ / ಉದ್ಯೋಗದ ಪ್ರಯತ್ನ ಇಂದು ಫಲ ನೀಡಲಿದ್ದು, ಆಪ್ತರಿಂದ ಶುಭ ವಾರ್ತೆ ಆಲಿಸುವಿರಿ. ಬಂಧು ಮಿತ್ರರ ಸಂಪೂರ್ಣ ಸಹಕಾರ ದೊರೆಯಲಿದೆ. ಆದಾಯದ ಮೂಲ ವಿಸ್ತಾರವಾಗಲಿದ್ದು, ವ್ಯಾಪಾರಸ್ಥರು ತಮ್ಮ ವ್ಯವಹಾರಗಳಿಗೆ ಹೊಸ ಬಂಡವಾಳವನ್ನು ಹೂಡಿಕೆ ಮಾಡಲಿದ್ದಾರೆ ಮತ್ತು ಉದ್ಯೋಗಿಗಳಿಗೆ ಈ ದಿನ ಶುಭದಿನ.
ಸೌದೆ ಒಲೆಯಲ್ಲಿ ಸಿದ್ಧವಾಯಿತು ಬಿರಿಯಾನಿ: ಶಿವಮೊಗ್ಗದಲ್ಲಿ ಅಪ್ಪು ಜನ್ಮದಿನ ಹೇಗಿತ್ತು ಗೊತ್ತಾ,
ಕನ್ಯಾ/ ಒತ್ತಡಗಳು ಹೆಚ್ಚಾಗಲಿದ್ದು, ಕಾರ್ಯ ಸಾಧನೆಗಾಗಿ ಹೆಚ್ಚು ಶ್ರಮದ ಅಗತ್ಯವಿದೆ. ಕೇಲವು ಕಷ್ಟದ ಪರಿಸ್ಥಿತಿ ಎದುರಾಗಲಿದೆ. ಆರೋಗ್ಯದಲ್ಲಿ ಏರುಪೇರು ಸಾಧ್ಯತೆ , ಪುಣ್ಯಕ್ಷೇತ್ರಗಳ ದರ್ಶನ. ವ್ಯಾಪಾರಸ್ಥರಿಗೆ ಸಾಮಾನ್ಯ ದಿನ, ಉದ್ಯೋಗಿಗಳಿಗೆ ಶ್ರಮದದಿನ
What are the daily predictions
ತುಲಾ /ಉದ್ಯೋಗ ಹಾಗೂ ವ್ಯಾಪಾರದಲ್ಲಿ ಒತ್ತಡವನ್ನು ಎದುರಿಸಲಿದ್ದು, ಖರ್ಚು ಅಧಿಕವಾಗಿರಲಿವೆ. ದೂರದ ಊರುಗಳಿಗೆ ಪ್ರಯಾಣ ,ಕೆಲಸಗಳಲ್ಲಿ ವಿಘ್ನ ಎದುರಾಗಲಿವೆ. ಮನಸ್ತಾಪಗಳು ಉಂಟಾಗುವ ಸಾಧ್ಯತೆ ಇದೆ.
ವೃಶ್ಚಿಕ /ವ್ಯವಹಾರಗಳಲ್ಲಿ ಪ್ರಗತಿ ಕಂಡುಬರಲಿದ್ದು, ಮನೆಯಲ್ಲಿ ನಡೆಯುವ ಶುಭ ಕಾರ್ಯಗಳಿಗಾಗಿ ಹಣ ವ್ಯಯಿಸಲಿದ್ದೀರಿ. ನಿರೀಕ್ಷೆಗಳು ವಾಸ್ತವ ರೂಪವನ್ನು ಪಡೆದುಕೊಳ್ಳಲಿದ್ದು, ಕುಟುಂಬದ ಸದಸ್ಯರೊಂದಿಗೆ ಹೊಂದಾಣಿಕೆ ಮೂಡಲಿದೆ. ವಾಹನ ಯೋಗ, ಉದ್ಯೋಗದಲ್ಲಿರುವವರಿಗೆ ಸಂತೋಷದ ಸುದ್ದಿ.

ಧನುಸ್ಸು / ಹೊಸ ವ್ಯಕ್ತಿಗಳ ಪರಿಚಯ, ವಿವಿಧ ಕಡೆಗಳಿಂದ ಆಹ್ವಾನ ಬರಲಿವೆ. ಕೈಗೊಂಡ ಕಾರ್ಯಗಳಲ್ಲಿ ಯಶಸ್ಸು ಸಿಗಲಿದೆ, ಛಲದಿಂದ ಮುನ್ನುಗ್ಗಲಿದ್ದೀರಿ. ವ್ಯಾಪಾರಸ್ಥರಿಗೆ ಲಾಭ ಉದ್ಯೋಗಿಗಳಿಗೆ ಒತ್ತಡದಿಂದ ಬಿಡುವು ಸಿಗಲಿದೆ.
ಅಡಿಕೆ ರೇಟಿನಲ್ಲಿ ಹೊಸ ಟ್ರೆಂಡ್! ಮಾರ್ಕೆಟ್ವೈಸ್ ಅಡಿಕೆ ದರದ ಫುಲ್ ಮಾಹಿತಿ ಓದಿ
ಮಕರ /ಶ್ರಮ ಹಾಗೂ ಖರ್ಚು ನಿಭಾಯಿಸಬೇಕಾಗಿದ್ದು, ದೂರ ಪ್ರಯಾಣ ಎದುರಾಗಲಿದೆ. ನಿಗದಿತ ಕೆಲಸ ವಿಳಂಬವಾಗಲಿವೆ. ಲೆಕ್ಕಾಚಾರಗಳಲ್ಲಿ ತಪ್ಪಾಗಬಹುದು ವ್ಯಾಪಾರಸ್ಥರಿಗೆ ಧನಲಾಭ ಶ್ರಮದಾಯಕ ಉದ್ಯೋಗಿಗಳಿಗೆ ಸಿಗಬೇಕಾಗಿದ್ದ ಅವಕಾಶ ಕೈತಪ್ಪಬಹುದು
ಕುಂಭ / ಅನಿರೀಕ್ಷಿತ ಪ್ರಯಾಣ, ಆದಾಯದ ಮಿತಿ ಮೀರಿ ಖರ್ಚು ಎದುರಾಗಲಿವೆ. ಕೌಟುಂಬಿಕ ಸಮಸ್ಯೆ, ಎಚ್ಚರಿಕೆ ವಹಿಸುವುದು ಅಗತ್ಯವಾಗಿದೆ. ವ್ಯಾಪಾರಸ್ಥರಿಗೆ ನಿರುತ್ಸಾಹ, ಉದ್ಯೋಗಿಗಳಿಗೆ ಒತ್ತಡ ಸಮಸ್ಯೆಯಾಗಲಿದೆ.
ಮೀನ / ಉತ್ತಮ ಲಾಭವನ್ನು ಗಳಿಸುವರು, ಕೈಹಾಕಿದ ಕೆಲಸಗಳಲ್ಲಿ ಯಶಸ್ಸು ಲಭಿಸಲಿದ್ದು, ದೇವಾಲಯಗಳಿಗೆ ಭೇಟಿ ನೀಡುವರು, ವ್ಯಾಪಾರಸ್ಥರು ಹೊಸ ಹೂಡಿಕೆ ಮಾಡುವರು ಉದ್ಯೋಗಿಗಳಿಗೆ ಈ ದಿನವು ಅತ್ಯಂತ ಉತ್ಸಾಹಭರಿತವಾಗಿರಲಿದೆ.
ಮಲೆನಾಡು ಟುಡೆ ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ದ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಸುದ್ದಿಗಳಿಂದ ಸ್ತಳೀಯ ವಿಶೇಷ ವಿಡಿಯೋ ಸುದ್ದಿಗಳನ್ನು ನೀವು ನೋಡಬಹುದು…ಇಲ್ಲಿದೆ ಅವುಗಳ ಲಿಂಕ್ Facebook , whatsapp , whatsapp chanel instagram, youtube, telegram , ನಮ್ಮದು ಅಧಿಕೃತವಾದ ಮತ್ತು ಉತ್ಪ್ರೇಕ್ಷೆಗಳಲ್ಲಿದ ನೈಜ ಸುದ್ದಿಯ ಸಂಸ್ಥೆ. ನಮ್ಮ ಬಗ್ಗೆ google business, ನಲ್ಲಿ ಮಾಹಿತಿ ಪಡೆಯಬಹುದು. ಅಲ್ಲದೆ malenadu today epaper malenadutoday web ನಲ್ಲಿ ಆಯಾ ದಿನದ ಈ ಪೇಪರ್ಗಳನ್ನು ಕ್ಲಿಕ್ ಮಾಡಿ ಓದಬಹುದು.


