soraba : ಜೋಳದ ತೆನೆಗೆ ಬೆಂಕಿ ಕೊಟ್ಟ ದುಷ್ಕರ್ಮಿಗಳು | 2 ಲಕ್ಷ ರೂಪಾಯಿ ಮೌಲ್ಯದ ಜೋಳ ಸುಟ್ಟು ಕರಕಲು

prathapa thirthahalli
Prathapa thirthahalli - content producer

ಕಟಾವು ಮಾಡಿದ ಜೋಳದ ತೆನೆಗೆ ದುಷ್ಕರ್ಮಿಗಳು ಬೆಂಕಿ ಕೊಟ್ಟು ಸುಟ್ಟಿರುವ ಘಟನೆ ಸೊರಬ ತಾಲೂಕಿನ ಆನವಟ್ಟಿಯಲ್ಲಿ ನಡೆದಿದ್ದು, ಘಟನೆ ಸಂಬಂಧ ಆನವಟ್ಟಿ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

soraba : ಏನಿದು ಪ್ರಕರಣ

ಬಸವರಾಜ್​ ಎಂಬ ರೈತ ಕೊಪ್ಪದಾಳ್ ಗ್ರಾಮದಿಂದ ತಾವು ಬೆಳೆದ ಜೋಳವನ್ನು ಕಟಾವು ಮಾಡಿಕೊಂಡು ಬಂದು ತಮ್ಮ ಜಮೀನಿನಲ್ಲಿ ಹಾಕಿಕೊಂಡಿದ್ದರು, ಹಾಗೆಯೇ ಅಂದು ಅದೇ ಜಾಗದಲ್ಲಿ ಮಲಗಿ ಜೋಳವನ್ನು ಕಾದಿದ್ದರು. ಆದರೆ ಬೆಳಿಗ್ಗೆ ಬಸವರಾಜ್ ಯಾವುದೋ ಕೆಲಸಕ್ಕೆಂದು​ ಮನೆಗೆ ಹೋಗಿ ಬರುವುದರ ಒಳಗೆ ಯಾರೋ ದುಷ್ಕರ್ಮಿಗಳು ಜೋಳದ ತೆನೆಗೆ ಬೆಂಕಿ ಕೊಟ್ಟಿದ್ದಾರೆ. ಇದರಿಂದಾಗಿ 2 ಲಕ್ಷ ಮೌಲ್ಯದ ಬೆಳೆ ನಾಶವಾಗಿದ್ದು, ದುಷ್ಕರ್ಮಿಗಳನ್ನು ಕೂಡಲೇ ಬಂಧಿಸಿ ಎಂದು ರೈತ ಬಸವರಾಜ್ ಆನವಟ್ಟಿ  ಪೊಲೀಸ್​ ಠಾಣೆಯಲ್ಲಿ​ ದೂರನ್ನು ನೀಡಿದ್ದಾರೆ.

 

TAGGED:
Share This Article