ಶಿವಮೊಗ್ಗ  ಕೇಂದ್ರ ಕಾರಾಗೃಹದಲ್ಲಿಯೇ ಎಸ್ಐಟಿಯಿಂದ ಚಿನ್ನಯ್ಯ ನ  ವಿಚಾರಣೆ, ಕಾರಣ..? 

ಹಂಚಿಕೊಳ್ಳಿ
WhatsApp Facebook X Telegram
SIT
SIT

ಧರ್ಮಸ್ಥಳದಲ್ಲಿ ಶವ ಹೂತಿಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ಎದುರಿಸುತ್ತಿರುವ ಮಾಸ್ಕ್ ಮ್ಯಾನ್ ಎಂದೇ ಗುರುತಿಸಲ್ಪಟ್ಟಿದ್ದ ಚಿನ್ನಯ್ಯ, ಬೆಳ್ತಂಗಡಿ  ಹೆಚ್ಚುವರಿ ನ್ಯಾಯಾಲಯದಲ್ಲಿ ನೀಡಿದ ಸ್ಫೋಟಕ ಹೇಳಿಕೆಯು ಪ್ರಕರಣಕ್ಕೆ ಹೊಸ ತಿರುವು ನೀಡಿದೆ. ತಾನು ಇನ್ನೂ ಹತ್ತು ಶವಗಳನ್ನು ಹೂತಿಟ್ಟಿರುವುದಾಗಿ ಚಿನ್ನಯ್ಯ ನ್ಯಾಯಾಲಯದ ಮುಂದೆ ಹೇಳಿಕೆ ನೀಡಿದ ಹಿನ್ನೆಲೆಯಲ್ಲಿ, ವಿಶೇಷ ತನಿಖಾ ದಳದ (SIT) ಅಧಿಕಾರಿಗಳು ಆತನನ್ನು ಮತ್ತೆ ವಿಚಾರಣೆಗೊಳಪಡಿಸಲು ಮುಂದಾಗಿದ್ದಾರೆ.

SIT ಎರಡು ದಿನಗಳ ಕಾಲ ವಿಚಾರಣೆ:

ಈ ಹಿನ್ನೆಲೆಯಲ್ಲಿ, ಎಸ್ಐಟಿ ಅಧಿಕಾರಿಗಳ ತಂಡವು ಇಂದು ಶಿವಮೊಗ್ಗದ ಸೊಗಾನೆ ಬಳಿ ಇರುವ ಕೇಂದ್ರ ಕಾರಾಗೃಹಕ್ಕೆ ಆಗಮಿಸಿದೆ. ಎಸ್ಐಟಿ ಎಸ್ಪಿ ಜಿತೇಂದ್ರಕುಮಾರ್​ ಅವರ ನೇತೃತ್ವದಲ್ಲಿರುವ ತಂಡವು ಬೆಳ್ತಂಗಡಿ ಕೋರ್ಟ್‌ನಿಂದ ಅನುಮತಿ ಪಡೆದಿದ್ದು, ಚಿನ್ನಯ್ಯನನ್ನು ಇಂದು ಮತ್ತು ನಾಳೆ ಎರಡು ದಿನಗಳ ಕಾಲ ವಿಚಾರಣೆ ನಡೆಸುವ ಸಾಧ್ಯತೆ ಇದೆ.

ಕೋರ್ಟ್‌ನಲ್ಲಿ ಚಿನ್ನಯ್ಯ ನೀಡಿದ 10 ಶವಗಳನ್ನು ಹೂತಿಟ್ಟಿರುವ ಹೇಳಿಕೆ ನಿಜವೇ ಅಥವಾ ಸುಳ್ಳೇ ಎಂಬುದರ ಕುರಿತು ಅಧಿಕಾರಿಗಳು ಪ್ರಶ್ನಿಸಲಿದ್ದಾರೆ.

SIT

 

 

ವಿಷಯಗಳು:
ಹಂಚಿಕೊಳ್ಳಿ
WhatsApp Facebook X Telegram
Prathapa thirthahalli
ಲೇಖಕರ ಬಗ್ಗೆ

Prathapa thirthahalli

Malenadu Today Contributor