ಜೆಡಿಎಸ್ನಲ್ಲಿ ಸಿದ್ದರಾಮಯ್ಯ ಆಪರೇಷನ್/ ವೈಎಸ್ವಿ ದತ್ತ ಸದ್ಯದಲ್ಲಿಯೇ ಕಾಂಗ್ರೆಸ್ಗೆ
ಈ ಹಿಂದೆ ಸಿದ್ದರಾಮಯ್ಯರವರ ಜೊತೆಗೆ ಕಡೂರು ಮಾಜಿ ಶಾಸಕ ವೈಎಸ್ವಿ ದತ್ತರವರು ಕಾಣಿಸಿಕೊಂಡಾಗಲೇ ಅವರು ಕಾಂಗ್ರೆಸ್ಗೆ ಹೋಗುತ್ತಾರಾ ಎಂಬ ಪ್ರಶ್ನೆ ಬಂದಿತ್ತು. ಇದೀಗ ಈ ಪ್ರಶ್ನೆಗೆ ಉತ್ತರ ಸಿಕ್ಕಿದೆ. ಜೆಡಿಎಸ್ನಿಂದ ಹೊರಬರುವುದು ಖಚಿತ ಎಂಬುದಾಗಿ ವೈಎಸ್ವಿ ದತ್ತರವರು ಮಾತನಾಡಿದ್ದಾರೆ.
ಈ ಹಿಂದೆ ವಿಪಕ್ಷ ನಾಯಕ ಸಿದ್ದರಾಮಯ್ಯರವರ ಜೊತೆಗೆ ಕಡೂರು ಮಾಜಿ ಶಾಸಕ ವೈಎಸ್ವಿ ದತ್ತರವರು ಕಾಣಿಸಿಕೊಂಡಾಗಲೇ ಅವರು ಕಾಂಗ್ರೆಸ್ಗೆ ಹೋಗುತ್ತಾರಾ ಎಂಬ ಪ್ರಶ್ನೆ ಬಂದಿತ್ತು. ಇದೀಗ ಈ ಪ್ರಶ್ನೆಗೆ ಉತ್ತರ ಸಿಕ್ಕಿದೆ. ಜೆಡಿಎಸ್ನಿಂದ ಹೊರಬರುವುದು ಖಚಿತ ಎಂಬುದಾಗಿ ವೈಎಸ್ವಿ ದತ್ತರವರು ಮಾತನಾಡಿದ್ದಾರೆ.
ಇದನ್ನು ಸಹ ಓದಿ : bhadravati BREAKING NEWS / ಭದ್ರಾವತಿ ರೌಡಿಗಳ ಮನೆಗಳ ಮೇಲೆ ಪೊಲಿಸರ ರೇಡ್
ಕ್ಷೇತ್ರ ಹಾಗೂ ತಮ್ಮನ್ನ ನಂಬಿದವರಿಗಾಗಿ ಕಾಂಗ್ರೆಸ್ ಸೇರುವ ಸಾಧ್ಯತೆಯನ್ನು ತೆರೆದಿಟ್ಟಿದ್ದಾರೆ. ಈ ನಿಟ್ಟಿನಲ್ಲಿ ಮಾತನಾಡಿರುವ ಅವರು, ಈ ಸಂಬಂಧ ವಿಪಕ್ಷ ನಾಯಕ ಸಿದ್ದರಾಮಯ್ಯರ ಜೊತೆಯಲ್ಲಿ ಎರಡು ಮೂರು ಭಾರಿ ಮಾತನಾಡಿದ್ದು, ಅವರೊಂದಿಗೆ ವಿಸ್ತೃತ ಚರ್ಚೆ ನಡೆಸಿದ್ದೇನೆ. ಇನ್ನೊಂದರೆಡು ಭಾರಿ ಚರ್ಚಿಸಿ ಅಂತಿಮ ನಿರ್ಣಯ ತಿಳಿಸುತ್ತೇನೆ. ಈ ಸಂಬಂಧ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಜೊತೆಗು ಚರ್ಚಿಸಿದ್ದೇನೆ ಎಂದಿದ್ದಾರೆ. ಕ್ಷೇತ್ರದಲ್ಲಿ ಜೆಡಿಎಸ್ನ ಪ್ರಭಾವ ಕಡಿಮೆಯಾಗಿದ್ದು, ಕಾರ್ಯಕರ್ತರು ಅತಂತ್ರರಾಗದೇ ಅವರಿಗೊಂದು ನೆಲೆ ಒದಗಿಸಬೇಕಿದೆ. ಈ ಚುನಾವಣೆ ನನ್ನ ಕೊನೆಯ ಚುನಾವಣೆ ಎಂದಿದ್ದಾರೆ.
ಮತ್ತಷ್ಟು ಸುದ್ದಿಗಳಿಗಾಗಿ ನಮ್ಮ ವಾಟ್ಸ್ಯಾಪ್ ಗ್ರೂಪ್ನ ಲಿಂಕ್ಗೆ ಕ್ಲಿಕ್ ಮಾಡಿ : Whatsapp