ಜೆಡಿಎಸ್​ನಲ್ಲಿ ಸಿದ್ದರಾಮಯ್ಯ ಆಪರೇಷನ್​/ ವೈಎಸ್​ವಿ ದತ್ತ ಸದ್ಯದಲ್ಲಿಯೇ ಕಾಂಗ್ರೆಸ್​ಗೆ

ಈ ಹಿಂದೆ ಸಿದ್ದರಾಮಯ್ಯರವರ ಜೊತೆಗೆ ಕಡೂರು ಮಾಜಿ ಶಾಸಕ ವೈಎಸ್​ವಿ ದತ್ತರವರು ಕಾಣಿಸಿಕೊಂಡಾಗಲೇ ಅವರು ಕಾಂಗ್ರೆಸ್​ಗೆ ಹೋಗುತ್ತಾರಾ ಎಂಬ ಪ್ರಶ್ನೆ ಬಂದಿತ್ತು. ಇದೀಗ ಈ ಪ್ರಶ್ನೆಗೆ ಉತ್ತರ ಸಿಕ್ಕಿದೆ. ಜೆಡಿಎಸ್​ನಿಂದ ಹೊರಬರುವುದು ಖಚಿತ ಎಂಬುದಾಗಿ ವೈಎಸ್​​ವಿ ದತ್ತರವರು ಮಾತನಾಡಿದ್ದಾರೆ.

ಜೆಡಿಎಸ್​ನಲ್ಲಿ ಸಿದ್ದರಾಮಯ್ಯ ಆಪರೇಷನ್​/ ವೈಎಸ್​ವಿ ದತ್ತ ಸದ್ಯದಲ್ಲಿಯೇ ಕಾಂಗ್ರೆಸ್​ಗೆ

ಈ ಹಿಂದೆ ವಿಪಕ್ಷ ನಾಯಕ ಸಿದ್ದರಾಮಯ್ಯರವರ ಜೊತೆಗೆ ಕಡೂರು ಮಾಜಿ ಶಾಸಕ ವೈಎಸ್​ವಿ ದತ್ತರವರು ಕಾಣಿಸಿಕೊಂಡಾಗಲೇ ಅವರು ಕಾಂಗ್ರೆಸ್​ಗೆ ಹೋಗುತ್ತಾರಾ ಎಂಬ ಪ್ರಶ್ನೆ ಬಂದಿತ್ತು. ಇದೀಗ ಈ ಪ್ರಶ್ನೆಗೆ ಉತ್ತರ ಸಿಕ್ಕಿದೆ. ಜೆಡಿಎಸ್​ನಿಂದ ಹೊರಬರುವುದು ಖಚಿತ ಎಂಬುದಾಗಿ ವೈಎಸ್​​ವಿ ದತ್ತರವರು ಮಾತನಾಡಿದ್ದಾರೆ.

ಇದನ್ನು ಸಹ ಓದಿ : bhadravati BREAKING NEWS / ಭದ್ರಾವತಿ ರೌಡಿಗಳ ಮನೆಗಳ ಮೇಲೆ ಪೊಲಿಸರ ರೇಡ್​

ಕ್ಷೇತ್ರ ಹಾಗೂ ತಮ್ಮನ್ನ ನಂಬಿದವರಿಗಾಗಿ ಕಾಂಗ್ರೆಸ್​ ಸೇರುವ ಸಾಧ್ಯತೆಯನ್ನು ತೆರೆದಿಟ್ಟಿದ್ದಾರೆ. ಈ ನಿಟ್ಟಿನಲ್ಲಿ ಮಾತನಾಡಿರುವ ಅವರು, ಈ ಸಂಬಂಧ ವಿಪಕ್ಷ ನಾಯಕ ಸಿದ್ದರಾಮಯ್ಯರ ಜೊತೆಯಲ್ಲಿ ಎರಡು ಮೂರು ಭಾರಿ ಮಾತನಾಡಿದ್ದು, ಅವರೊಂದಿಗೆ ವಿಸ್ತೃತ ಚರ್ಚೆ ನಡೆಸಿದ್ದೇನೆ. ಇನ್ನೊಂದರೆಡು ಭಾರಿ ಚರ್ಚಿಸಿ ಅಂತಿಮ ನಿರ್ಣಯ ತಿಳಿಸುತ್ತೇನೆ. ಈ ಸಂಬಂಧ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಜೊತೆಗು ಚರ್ಚಿಸಿದ್ದೇನೆ ಎಂದಿದ್ದಾರೆ. ಕ್ಷೇತ್ರದಲ್ಲಿ ಜೆಡಿಎಸ್​ನ ಪ್ರಭಾವ ಕಡಿಮೆಯಾಗಿದ್ದು, ಕಾರ್ಯಕರ್ತರು ಅತಂತ್ರರಾಗದೇ ಅವರಿಗೊಂದು ನೆಲೆ ಒದಗಿಸಬೇಕಿದೆ. ಈ ಚುನಾವಣೆ ನನ್ನ ಕೊನೆಯ ಚುನಾವಣೆ ಎಂದಿದ್ದಾರೆ. 

ಮತ್ತಷ್ಟು ಸುದ್ದಿಗಳಿಗಾಗಿ ನಮ್ಮ ವಾಟ್ಸ್ಯಾಪ್​ ಗ್ರೂಪ್​ನ ಲಿಂಕ್​ಗೆ ಕ್ಲಿಕ್ ಮಾಡಿ :  Whatsapp