shivamogga short news / ಶಿವಮೊಗ್ಗದಲ್ಲಿ ನಡೆದ ವಿವಿಧ ಘಟನೆಗಳಿಗೆ ಸಂಬಂಧಿಸಿದಂತೆ ಸಂಕ್ಷಿಪ್ತವಾಗಿ ವರದಿ ನೀಡುವ ಪ್ರಯತ್ನವೇ ಮಲೆನಾಡು ಟುಡೆಯ ಚಟ್ ಪುಟ್ ಸುದ್ದಿ. ಇವತ್ತಿನ ವರದಿಯನ್ನು ಗಮನಿಸುವುದಾದರೆ, ವಿವರ ಹೀಗಿದೆ.

shivamogga short news / ಫೈನಾನ್ಸ್ ಕಂಪನಿ ವಿರುದ್ಧ ಆರೋಪ
ಶಿವಮೊಗ್ಗದ ಫೈನಾನ್ಸ್ ಕಂಪನಿಯ ಅಧಿಕಾರಿಗಳು ಹಾಗು ಸಿಬ್ಬಂದಿ ವಿರುದ್ಧ ವಂಚನೆ ಪ್ರಕರಣವೊಂಧು ದಾಖಲಾಗಿದೆ. ಈ ಸಂಬಂಧ ತುಂಗಾನಗ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಒಂದು ಫೈನಾನ್ಸ್ ಕಂಪನಿಯಲ್ಲಿದ್ದುಕೊಂಡು ಮತ್ತೊಂದು ಕಂಪನಿ ಮೂಲಕ ಸಾಲ ಕೊಡಿಸುತ್ತಿದ್ದ ಅರೋಪದಡಿಯಲ್ಲಿ ಈ ಎಫ್ಐಆರ್ ದಾಳಲಾಗಿದೆ.
ಮಾತ್ರೆ ನುಂಗಿದ್ದ ಮಹಿಳೆ ಸಾವು
ಮಹಿಳೆಯೊಬ್ಬರು ಮಾತ್ರೆ ನುಂಗಿದ ಬೆನ್ನಲ್ಲೆ ನಿತ್ರಾಣಗೊಂಡು, ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿರುವ ಬಗ್ಗೆ ತೀರ್ಥಹಳ್ಳಿಯಲ್ಲಿ ವರದಿಯಾಗಿದೆ. ತೀರ್ಥಹಳ್ಳಿ ಪೊಲೀಸರು ವಿಚಾರಣೆ ನಡೆಸ್ತಿದ್ದಾರೆ. ಇಲ್ಲಿನ ನಿವಾಸಿಯೊಬ್ಬರು ಕಳೆದ ಮೇ 1 ರಂದು ಮನೆಯಲ್ಲಿ ಜಗಳ ಎದುರಿಸಿದ್ದರು. ಆ ಬಳಿಕ ಮಾತ್ರೆಯೊಂದನ್ನು ತೆಗೆದುಕೊಂಡಿದ್ದರು. ಪರಿಣಾಮ ಅಸ್ವಸ್ಥಗೊಂಡಿದ್ದ ಅವರು, ತದನಂತರ ಚಿಕಿತ್ಸೆಗೆ ಸ್ಪಂದಿಸದೆ ಸಾವನ್ನಪ್ಪಿದ್ದಾರೆ.

ಹಿಂದೂ ಕಾರ್ಯಕರ್ತರು ಟಾರ್ಗೆಟ್
ಮಂಗಳೂರಿನಲ್ಲಿ ನಡೆದ ಹಿಂದೂಕಾರ್ಯಕರ್ತ ಸುಹಾಸ್ ಶೆಟ್ಟಿ ಕೊಲೆ ಪ್ರಕರಣವನ್ನು ಖಂಡಿಸಿದ, ಸಂಸದ ಬಿವೈ ರಾಘವೇಂದ್ರರವರು ಹಿಂದೂ ಕಾರ್ಯಕರ್ತರನ್ನು ಟಾರ್ಗೆಟ್ ಮಾಡಿ ಕೊಲೆ ಮಾಡಲಾಗುತ್ತಿದೆ. ಈ ಸರ್ಕಾರದಲ್ಲಿ ಹಿಂದೂಗಳಿಗೆ ರಕ್ಷಣೆ ಇಲ್ಲದಂತಾಗಿದೆ ಎಂದು ದೂರಿದ್ದಾರೆ. ಸರ್ಕಾರ, ಸಾರ್ವಜನಿಕರನ್ನು ರಕ್ಷಣೆ ಮಾಡಲು ಸಂಪೂರ್ಣವಾಗಿ ವಿಫಲವಾಗಿದೆ. ಇದನ್ನು ನಾನು ಖಂಡಿಸುತ್ತೇನೆ ಎಂದಿದ್ದಾರೆ. ಅಲ್ಲದೆ ಮುಂದೆ ಈ ರೀತಿ ಆಗದಂತೆ ನೋಡಿಕೊಳ್ಳಬೇಕು. ಸರ್ಕಾರವು ಪ್ರಕರಣವನ್ನು ಬಹಳ ಗಂಭೀರವಾಗಿ ಪರಿಗಣಿಸಿ ಕ್ರಮ ವಹಿಸಬೇಕು ಎಂದು ಆಗ್ರಹಿಸಿದ್ದಾರೆ.