ಶಿವಮೊಗ್ಗ ಜಿಲ್ಲಾಧಿಕಾರಿ ಡಾ.ಆರ್.ಸೆಲ್ವಮಣಿ ವರ್ಗಾವಣೆ! ನೂತನ ಡಿಸಿ ಗುರುದತ್ತ ನಾರಾಯಣ ಹೆಗಡೆ

Shimoga Deputy Commissioner Dr R Selvamani transferred New DC Gurudatta Narayana Hegde

ಶಿವಮೊಗ್ಗ ಜಿಲ್ಲಾಧಿಕಾರಿ ಡಾ.ಆರ್.ಸೆಲ್ವಮಣಿ ವರ್ಗಾವಣೆ! ನೂತನ ಡಿಸಿ ಗುರುದತ್ತ ನಾರಾಯಣ ಹೆಗಡೆ
Shimoga Deputy Commissioner Dr R Selvamani transferred New DC Gurudatta Narayana Hegde

bangalore news today |  Jan 28, 2024  |  ಶಿವಮೊಗ್ಗ ಜಿಲ್ಲಾಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದ ಡಾ.ಆರ್​ ಸೆಲ್ವಮಣಿಯವರನ್ನು ವರ್ಗಾವಣೆ ಮಾಡಲಾಗಿದೆ. ಇವರು 2022ರ ಜನವರಿಯಲ್ಲಿ ಶಿವಮೊಗ್ಗದ ಜಿಲ್ಲಾಧಿಕಾರಿಯಾಗಿ ಆಗಮಿಸಿದ್ದರು. 

ಜಿಲ್ಲಾಧಿಕಾರಿ ಡಾ.ಆರ್​.ಸೆಲ್ವಮಣಿ ವರ್ಗಾವಣೆ

ಇವತ್ತಿನ ದಿನಾಂಕದಲ್ಲಿಯೇ ಡಾ.ಆರ್​.ಸೆಲ್ವಮಣಿಯವರ ವರ್ಗಾವಣೆ ಆದೇಶ ಹೊರಬಿದ್ದಿದ್ದು, ಆದೇಶದಲ್ಲಿ  ಡಾ.ಸೆಲ್ವಮಣಿ ಆರ್., ಐಎಎಸ್ (ಕೆಎನ್: 2013) ಶಿವಮೊಗ್ಗ ಜಿಲ್ಲಾಧಿಕಾರಿಯನ್ನು ತಕ್ಷಣದಿಂದ ಜಾರಿಗೆ ಬರುವಂತೆ ವರ್ಗಾವಣೆ ಮಾಡಿ ಮುಂದಿನ ಆದೇಶದವರೆಗೆ ಬೆಂಗಳೂರಿನ ಇ-ಆಡಳಿತ ಕೇಂದ್ರದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ ವರ್ಗಾವಣೆ ಮಾಡಲಾಗಿದೆ. ಅಲ್ಲಿರುವ  ಐಎಎಸ್ ಅಧಿಕಾರಿ ಡಾ.ದಿಲೀಷ್ ಸಸಿ ಅವರನ್ನ ರಿಲೀವ್ ಮಾಡಲಾಗಿದೆ ಎಂದು ತಿಳಿಸಲಾಗಿದೆ.

ಗುರುದತ್ತ ನಾರಾಯಣ ಹೆಗಡೆ ಶಿವಮೊಗ್ಗ ಡಿಸಿ

ಇನ್ನೂ ಜಿಲ್ಲಾಧಿಕಾರಿ ಡಾ. ಆರ್​ ಸೆಲ್ವಮಣಿಯವರ ಜಾಗಕ್ಕೆ ಗುರುದತ್ತ ಹಗಡೆಯವರನ್ನು ನೇಮಿಸಲಾಗಿದೆ. ಐಎಎಸ್ (ಕೆಎನ್: 2014) ಬ್ಯಾಚ್​ ಅಧಿಕಾರಿಯಾಗಿರುವ ಇವರು ಪ್ರಸ್ತುತ ಧಾರವಾಡದ ಜಿಲ್ಲಾಧಿಕಾರಿಯಾಗಿ ಕೆಲಸ ಮಾಡುತ್ತಿದ್ದಾರೆ.  ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಮತ್ತು ಮುಂದಿನ ಆದೇಶದವರೆಗೆ ಶಿವಮೊಗ್ಗ ಜಿಲ್ಲಾಧಿಕಾರಿಯಾಗಿ ವರ್ಗಾವಣೆ ಮಾಡಲಾಗಿದೆ.

ಧಾರವಾಡವರು ಶಿರಸಿ ಮೂಲದವರು 

ಧಾರವಾಡದಲ್ಲಿ ಓದಿರುವ ಗುರುದತ್ತ ಹೆಗಡೆಯವರು ಅಲ್ಲಿಯೇ ಡಿಸಿಯಾಗಿ ಕೆಲಸ ಮಾಡುತ್ತಿದ್ದಾರೆ. 2014ರಲ್ಲಿ ಕೇಂದ್ರ ಲೋಕಸೇವಾ ಆಯೋಗ ಪರೀಕ್ಷೆಯಲ್ಲಿ ತೇರ್ಗಡೆಯಾಗಿ ಭಾರತೀಯ ಆಡಳಿತ ಸೇವೆಗೆ ಆಯ್ಕೆಯಾದ ಇವರ ಮೂಲ  ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲ್ಲೂಕಿನ ಹೊನ್ನಗದ್ದೆ ಗ್ರಾಮ. 

ಬೆಂಗಳೂರಿನ ಆರ್. ವಿ. ಇಂಜಿನಿಯರಿಂಗ್ ಕಾಲೇಜಿನಲ್ಲಿ ಇಲೆಕ್ಟ್ರಾನಿಕ್ ಇಂಜಿನಿಯರಿಂಗ್ ಪದವಿ ಪಡೆದಿರುವ ಇವರು ಐಎಎಸ್​ ಅಧಿಕಾರಿಯಾಗಿ ಆಯ್ಕೆಯಾದ ಬಳಿಕ  ಪ್ರೊಬೇಷನರಿ ಅವಧಿಯನ್ನು ಬೀದರ್ ಜಿಲ್ಲೆಯಲ್ಲಿ ನಿರ್ವಹಿಸಿದ್ರು. ಆ ಬಳಿಕ ಕೊಪ್ಪಳದ ಉಪವಿಭಾಗಾಧಿಕಾರಿಯಾಗಿ, ಚಿಕ್ಕಬಳ್ಳಾಪುರ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ, ಮೈಸೂರು ಮಹಾನಗರ ಪಾಲಿಕೆಯ ಆಯುಕ್ತರಾಗಿ ಕಾರ್ಯ ನಿರ್ವಹಣೆ ಸೇವೆ ಸಲ್ಲಿಸಿದ್ದಾರೆ