ಶಿವಮೊಗ್ಗದಲ್ಲಿ ಗ್ಯಾಂಗ್ ವಾರ್​ಗೆ ಮತ್ತೊಂದು ಅಟ್ಯಾಕ್! ರಾಮೇನಕೊಪ್ಪದಲ್ಲಿ ಕಿರಣ್ ಎಂಬಾತನ ಮೇಲೆ ಮಾರಣಾಂತಿಕ ಹಲ್ಲೆ !

ಹಂಚಿಕೊಳ್ಳಿ
WhatsApp Facebook X Telegram
ಅಪರಾಧ ಸುದ್ದಿಗಳಿಗೆ ಸಂಬಂಧಿಸಿದ ಸಾಂದರ್ಭಿಕ ಚಿತ್ರ
crime news image malenadutoday

ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ / ಶಿವಮೊಗ್ಗ ಸಿಟಿಯಲ್ಲಿ ಮತ್ತೊಂದು ರೌಡಿ ಶೀಟರ್ ಒಬ್ಬನ ಮೇಲೆ ಹಲ್ಲೆ ಮಾಡಲಾಗಿದೆ. ಕುಳ್ಳಿ ಕಿರಣ ಎಂಬಾತನನ್ನು ರಾಮೇನಕೊಪ್ಪದದಲ್ಲಿ ಅಟೆಂಪ್ಟ್​ ಟು ಮರ್ಡರ್ (Ramenakoppa in Shivamogga) ಮಾಡಲಾಗಿದೆ. ಇಸ್ಪೀಟ್ ಆಡುತ್ತಿದ್ದ ಜಾಗದಲ್ಲಿಯೇ ಈತನನ್ನು ಕೊಲೆ ಮಾಡಿದ್ದು ಈ ಸಂಬಂಧ ಸ್ಥಳಕ್ಕೆ ಪೊಲೀಸರು ದೌಡಾಯಿಸಿದ್ದಾರೆ.

ಶಿವಮೊಗ್ಗ ಸಿಟಿಯಲ್ಲಿ ಮತ್ತೆ ರೌಡಿ ದ್ವೇಷದ ಹಿನ್ನೆಲೆಯಲ್ಲಿ ಕೊಲೆಯೊಂದು ಸಂಭವಿಸಿದೆ. ಇತ್ತೀಚೆಗೆ ಅಷ್ಟೆ ಗಾಂಧಿ ಬಜಾರ್​ನಲ್ಲಿ ಕಾಡಾ ಕಾರ್ತಿಯ ಕಡೆಯವನು ಎನ್ನಲಾಗಿದ್ದ ನರಸಿಂಹನನ್ನ ಕೊಚ್ಚಿ ಕೊಲೆಮಾಡಲಾಗಿತ್ತು. ಇದೀಗ ಅದೇ ರೀತಿಯಲ್ಲಿ ಕುಳ್ಳ ಕಿರಣ ಎಂಬಾತನ ಮೇಲೆ ಭೀಕರವಾಗಿ ಹಲ್ಲೆ ಮಾಡಲಾಗಿದೆ. ಸದ್ಯ ಈತನನ್ನ ಎನ್​ಎಚ್​ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಕಂಡೀಷನ್​ ಬಗ್ಗೆ ವೈದ್ಯರು ಯಾವುದೇ ಮಾಹಿತಿ ನೀಡಿಲ್ಲ!

ಮಲೆನಾಡು ಟುಡೆಗೆ ಲಭ್ಯವಾದ ಮಾಹಿತಿ ಪ್ರಕಾರ, ಕುಳ್ಳಿ ಕಿರಣ್​, ಗಾಂಧಿ ಬಜಾರ್ ಘಟನೆಯ ಬಳಿ ಕಾರ್ತಿ ಗ್ಯಾಂಗ್​ನ ಟಾರ್ಗೆಟ್ ಆಗಿದ್ದ. ಈ ಸಂಬಂಧ ಇವತ್ತು ರಾಮೇನಕೊಪ್ಪದ ಬಳಿಯಲ್ಲಿ ಇಸ್ಪೀಟ್​ ಆಡುತ್ತಿದ್ದ ಈತ ಜೊತೆಗೆ ಅದೇ ಸ್ಥಳದಲ್ಲಿದ್ದ ಡಿಯೋ ಉಮೇಶ್ ಎಂಬಾತ ಮತ್ತವನ ಗ್ಯಾಂಗ್​ ಅಟ್ಯಾಕ್ ಮಾಡಿದೆ. ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿರುವ ಕುಳ್ಳಿ ಕಿರಣ್​ ನ್ನ ಖಾಸಗಿ ಆಸ್ಪತ್ರೆಗೆ ಅಡ್ಮಿಟ್ ಮಾಡಲಾಗಿದೆ. ಈ ಬಗ್ಗೆ ಇನ್ನಷ್ಟು ಮಾಹಿತಿ ಬರಬೇಕಿದೆ.

ಹಂಚಿಕೊಳ್ಳಿ
WhatsApp Facebook X Telegram
ajjimane ganesh
ಲೇಖಕರ ಬಗ್ಗೆ

ajjimane ganesh

Malenadu Today Contributor