Predictions and Panchanga Details / ಮಲೆನಾಡು ಟುಡೆ ಸುದ್ದಿ / ಬೆಂಗಳೂರು / ವಿಶ್ವಾಸವಸುನಾಮ ಸಂವತ್ಸರ, ಉತ್ತರಾಯಣ, ಶಿಶಿರ ಋತು, ಫಾಲ್ಗುಣ ಮಾಸ, ಬಹುಳ ಸಪ್ತಮಿ ತಿಥಿಯು ರಾತ್ರಿ 12.21 ರವರೆಗೆ ಇರಲಿದ್ದು, ತದನಂತರ ಅಷ್ಟಮಿ ಆರಂಭವಾಗಲಿದೆ. ಅನುರಾಧ ನಕ್ಷತ್ರ ಸಂಜೆ 5.56 ರವರೆಗೆ ಇದ್ದು, ತದನಂತರ ಜ್ಯೇಷ್ಠ ನಕ್ಷತ್ರ ಬರಲಿದೆ. ಬೆಳಿಗ್ಗೆ 6.25 ರಿಂದ 8.11 ರವರೆಗೆ ಅಮೃತಘಳಿಗೆ ಇರುತ್ತದೆ. ರಾಹುಕಾಲ, ಬೆಳಿಗ್ಗೆ 9.00 ರಿಂದ 10.30 ರವರೆಗೆ ಯಮಗಂಡ ಕಾಲ ಇರಲಿದೆ.
ಸಾಗರ : ಇಮ್ರಾನ್ ಮತ್ತು ಇಮ್ತಿಯಾಜ್ಗೆ 3 ವರ್ಷ ಶಿಕ್ಷೆ | ಶಿವಮೊಗ್ಗ ಕೋರ್ಟ್ ತೀರ್ಪು
ಇವತ್ತಿನ ರಾಶಿಭವಿಷ್ಯ
ಮೇಷ / ಕೈಗೊಳ್ಳುವ ಕಾರ್ಯಗಳಲ್ಲಿ ಅಡೆತಡೆ. ಮನೆಯೊಳಗೆ ಹಾಗೂ ಹೊರಗಿನ ಪರಿಸರದಲ್ಲಿ ಸಮಸ್ಯೆ ಕಾಡಬಹುದು. ಅನಿರೀಕ್ಷಿತ ಪ್ರಯಾಣ. ಸಾಲ ನೀಡಿದವರಿಂದ ಒತ್ತಡ. ವ್ಯಾಪಾರ ವಹಿವಾಟುಗಳಲ್ಲಿ ನಿರೀಕ್ಷಿತ ಲಾಭ. ಉದ್ಯೋಗ ಕ್ಷೇತ್ರದಲ್ಲಿ ಕೆಲವು ಬದಲಾವಣೆ
ವೃಷಭ / ಹೊಸ ಕೆಲಸಕ್ಕೆ ಚಾಲನೆ. ಧಾರ್ಮಿಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವ ಅವಕಾಶ ಒದಗಿಬರಲಿದೆ. ಪ್ರಭಾವಿ ವ್ಯಕ್ತಿಗಳ ಒಡನಾಟ ಬೆಳೆಯಲಿದೆ. ಸಂತಸದ ಸುದ್ದಿ ಕಿವಿಗೆ ಬೀಳಲಿವೆ. ವ್ಯಾಪಾರ ವ್ಯವಹಾರ ಚೇತರಿಕೆ ಕಾಣಲಿವೆ. ಉದ್ಯೋಗ ಕ್ಷೇತ್ರದಲ್ಲಿ ಯಶಸ್ಸು ಲಭಿಸಲಿದೆ.

ಮಿಥುನ / ಹೊಸ ವ್ಯಕ್ತಿಗಳ ಪರಿಚಯ. ಪುಣ್ಯಕ್ಷೇತ್ರಗಳಿಗೆ ಭೇಟಿ. ಕುಟುಂಬದಲ್ಲಿ ಶುಭ ಸಮಾರಂಭ. ಸಂಪತ್ತು ವೃದ್ಧಿ, ಅಂದುಕೊಂಡ ಕೆಲಸ ಸುಲಲಿತವಾಗಿ ನೆರವೇರಲಿವೆ. ಹೊಸ ಮನೆ ನಿರ್ಮಾಣದಂತಹ ಯೋಜನೆಗಳಿಗೆ ಕೈಹಾಕಲಿದ್ದೀರಿ. ಉದ್ಯೋಗ ಹಾಗೂ ವ್ಯಾಪಾರ ರಂಗದಲ್ಲಿ ಯಾವುದೇ ಅಡ್ಡಿ ಆತಂಕಗಳಿಲ್ಲದೆ ಮುನ್ನಡೆಯಲಿದ್ದೀರಿ.
ಕರ್ಕಾಟಕ / ಹೊಸದಾಗಿ ಸಾಲ ಆಗಬಹುದು. ಅನಿರೀಕ್ಷಿತ ಪ್ರಯಾಣ. ವ್ಯಾಪಾರ ವಹಿವಾಟು ನಿಧಾನಗತಿಯಲ್ಲಿ ಸಾಗಲಿದ್ದು, ಖರ್ಚು ವೆಚ್ಚ ಮಿತಿ ಮೀರುವ ಸಾಧ್ಯತೆಗಳಿವೆ. ಉದ್ಯೋಗ ಸ್ಥಳದಲ್ಲಿ ನೂತನ ಜವಾಬ್ದಾರಿ ಹೆಗಲೇರಲಿವೆ.
ಸಿಂಹ / ಆದಾಯದ ಮೂಲ ಅಷ್ಟಾಗಿ ಆಶಾದಾಯಕವಾಗಿರುವುದಿಲ್ಲ. ದೂರದ ಊರುಗಳಿಗೆ ಪ್ರಯಾಣ. ವ್ಯಾಪಾರ ವ್ಯವಹಾರಗಳಲ್ಲಿ ಮಂದಗತಿ, ಉದ್ಯೋಗದಲ್ಲಿ ಸಣ್ಣಪುಟ್ಟ ಸಮಸ್ಯೆಗಳು ಎದುರಾಗುವ ಸಾಧ್ಯತೆ ಇದೆ.
ಕನ್ಯಾ / ಪಟ್ಟ ಶ್ರಮಕ್ಕೆ ತಕ್ಕ ಪ್ರತಿಫಲ. ಜನರ ಒಡನಾಟ ಹೆಚ್ಚಲಿದೆ. ಹೆಚ್ಚುವರಿ ಆದಾಯ ಮಾರ್ಗಗಳು ಗೋಚರಿಸಲಿವೆ. ಬಹುಕಾಲದ ಸ್ನೇಹಿತರನ್ನು ಭೇಟಿಯಾಗುವ ಅವಕಾಶ. ಉದ್ಯೋಗ ಮತ್ತು ವ್ಯಾಪಾರ ಕ್ಷೇತ್ರಗಳಲ್ಲಿನ ಬೆಳವಣಿಗೆ ತೃಪ್ತಿದಾಯಕವಾಗಿರಲಿವೆ.

14 ವರ್ಷದವಳ ಮೇಲೆ ಲೈಂಗಿಕ ದೌರ್ಜನ್ಯ! ಶಿವಮೊಗ್ಗದ FTSC-1 ನ್ಯಾಯಾಲಯದ ಪ್ರಕರಣದಲ್ಲಿ ಏನಾಯ್ತು ಓದಿ!
ತುಲಾ /ಕೆಲಸದ ಒತ್ತಡ ಹೆಚ್ಚಾಗಲಿದೆ. ವ್ಯಾಪಾರ ವ್ಯವಹಾರಗಳಲ್ಲಿ ತೊಡಕು. ಕೈಗೊಂಡ ಕಾರ್ಯಗಳಲ್ಲಿ ಅಡೆತಡೆ ಉಂಟಾಗಬಹುದು. ಅನಾರೋಗ್ಯ, ಸ್ನೇಹಿತರಿಂದಲೂ ಒತ್ತಡಗಳನ್ನು ಎದುರಿಸಬೇಕಾದೀತು.
ವೃಶ್ಚಿಕ / ಆಪ್ತರ ಸಹಕಾರ. ಅನಿರೀಕ್ಷಿತವಾಗಿ ಆರ್ಥಿಕ ಲಾಭ. ಕೆಲಸಗಳಲ್ಲಿ ಜಯ. ಬೆಲೆಬಾಳುವ ವಸ್ತು ಖರೀದಿಸುವ ಸಾಧ್ಯತೆ. ದೇವರ ದರ್ಶನ. ವ್ಯಾಪಾರ ಮತ್ತು ಉದ್ಯೋಗ ರಂಗದಲ್ಲಿ ಅತ್ಯಂತ ಉತ್ಸಾಹಭರಿತ ದಿನ.
ಧನುಸ್ಸು / ದೂರ ಪ್ರಯಾಣ. ಆಸ್ತಿಗೆ ಸಂಬಂಧಿಸಿದಂತೆ ವಿವಾದ. ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವಿರಿ, ಸಂಬಂಧಿಕರೊಂದಿಗೆ ವಿನಾಕಾರಣ ಭಿನ್ನಾಭಿಪ್ರಾಯ. ವ್ಯಾಪಾರದಲ್ಲಿ ಸಾಮಾನ್ಯದಿನ , ಉದ್ಯೋಗ ಸ್ಥಳದಲ್ಲಿ ಕೆಲಸದ ಹೊರೆ
ಮಕರ / ಕೆಲಸ ಕಾರ್ಯಗಳನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಲಿದ್ದಾರೆ. ವ್ಯಾಪಾರ ವ್ಯವಹಾರಗಳಲ್ಲಿ ಮುನ್ನಡೆ ಸಾಧಿಸುವಿರಿ. ಆಸ್ತಿ ಪಾಸ್ತಿಗಳಿಗೆ ಸಂಬಂಧಿಸಿದ ವ್ಯಾಜ್ಯಗಳು ಬಗೆಹರಿಯಲಿವೆ. ಶುಭ ಸುದ್ದಿ ಕಿವಿಗೆ ಬೀಳಲಿವೆ. ವಾಹನ ಖರೀದಿಯ ಯೋಗವಿದೆ. ಪುಣ್ಯಕ್ಷೇತ್ರಗಳ ದರ್ಶನ. ಉದ್ಯೋಗಿಗಳಿಗೆ ಸೂಕ್ತ ಮನ್ನಣೆ ದೊರೆಯಲಿದೆ.
ಕುಂಭ / ವ್ಯವಹಾರಗಳಲ್ಲಿ ಜಯ. ಸಮಾಜದಲ್ಲಿ ಗೌರವ ಮತ್ತು ಪ್ರತಿಷ್ಠೆ ಹೆಚ್ಚಾಗಲಿದೆ. ಅನಿರೀಕ್ಷಿತವಾಗಿ ಧನಲಾಭ. ಆಸ್ತಿ ವಿವಾದ ಸುಖಾಂತ್ಯ ಕಾಣಲಿವೆ. ಹೊಸ ಮನೆ ಮತ್ತು ವಾಹನ ಖರೀದಿಸುವ ಅವಕಾಶ ಒದಗಿಬರಲಿವೆ. ವ್ಯಾಪಾರದಲ್ಲಿ ಹೆಚ್ಚಿನ ಲಾಭ, ಉದ್ಯೋಗದಲ್ಲಿ ಅನುಕೂಲಕರ ವಾತಾವರಣ
ಮೀನ / ಕುಟುಂಬದ ಸದಸ್ಯರೊಂದಿಗೆ ವೈಮನಸ್ಸು. ಆದಾಯಕ್ಕಿಂತ ಖರ್ಚು ಹೆಚ್ಚಾಗುವ ಲಕ್ಷಣಗಳಿವೆ.. ವ್ಯಾಪಾರದಲ್ಲಿ ಅಡೆತಡೆ ಕಂಡುಬರಲಿವೆ. ಉದ್ಯೋಗ ಕ್ಷೇತ್ರದಲ್ಲಿ ಹೊಸ ಪ್ರಯತ್ನ ಫಲ ನೀಡುವುದು

ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ದ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಸುದ್ದಿಗಳಿಂದ ಸ್ತಳೀಯ ವಿಶೇಷ ವಿಡಿಯೋ ಸುದ್ದಿಗಳನ್ನು ನೀವು ನೋಡಬಹುದು…ಇಲ್ಲಿದೆ ಅವುಗಳ ಲಿಂಕ್ Facebook, whatsapp , whatsapp chanel instagram, youtube, telegram , ನಮ್ಮದು ಅಧಿಕೃತವಾದ ಮತ್ತು ಉತ್ಪ್ರೇಕ್ಷೆಗಳಲ್ಲಿದ ನೈಜ ಸುದ್ದಿಯ ಸಂಸ್ಥೆ. ನಮ್ಮ ಬಗ್ಗೆ google business, ನಲ್ಲಿ ಮಾಹಿತಿ ಪಡೆಯಬಹುದು. ಅಲ್ಲದೆ malenadu today epapermalenadutoday web ನಲ್ಲಿ ಆಯಾ ದಿನದ ಈ ಪೇಪರ್ಗಳನ್ನು ಕ್ಲಿಕ್ ಮಾಡಿ ಓದಬಹುದು.
