ಶಿವಮೊಗ್ಗ : ಶಿವಮೊಗ್ಗದ ಕೋಟೆ ಶ್ರೀ ಮಾರಿಕಾಂಬಾ ಜಾತ್ರೆ ಈಗಾಗಲೇ ಆರಂಭವಾಗಿದ್ದು, ಭಕ್ತಾದಿಗಳ ಸುಗಮ ಸಂಚಾರಕ್ಕಾಗಿ ನೈಋತ್ಯ ರೈಲ್ವೆಯು ಬೆಂಗಳೂರಿನಿಂದ ತಾಳಗುಪ್ಪಕ್ಕೆ ಎರಡು ವಿಶೇಷ ಟ್ರಿಪ್ ರೈಲುಗಳನ್ನು ಘೋಷಿಸಿದೆ.
ಶಿವಮೊಗ್ಗ: ಕೋಟೆ ಮಾರಿಕಾಂಬಾ ಜಾತ್ರೆಗೆ ಭರ್ಜರಿ ಸಿದ್ಧತೆ; ಮಾರಿಗದ್ದುಗೆಗೆ ಎಸ್.ಪಿ ನಿಖಿಲ್ ಬಿ ಭೇಟಿ.
ಈ ವಿಶೇಷ ರೈಲು ಸೇವೆಗಳ ವೇಳಾಪಟ್ಟಿ ಹೀಗಿದೆ
ಫೆಬ್ರವರಿ 27ರಂದು ರೈಲು ಸಂಖ್ಯೆ 06587 ಯಶವಂತಪುರದಿಂದ ರಾತ್ರಿ 10.45ಕ್ಕೆ ತನ್ನ ಪ್ರಯಾಣ ಆರಂಭಿಸಲಿದೆ. ಇದು ಮರುದಿನ ಅಂದರೆ ಶನಿವಾರ ಮುಂಜಾನೆ 2.45ಕ್ಕೆ ಶಿವಮೊಗ್ಗ ತಲುಪಲಿದ್ದು, ಬೆಳಿಗ್ಗೆ 5.05ಕ್ಕೆ ತಾಳಗುಪ್ಪ ನಿಲ್ದಾಣಕ್ಕೆ ಬಂದು ಸೇರಲಿದೆ.
ಇನ್ನು ಮರುಪ್ರಯಾಣಕ್ಕಾಗಿ, ಫೆಬ್ರವರಿ 28ರ ಶನಿವಾರದಂದು ರೈಲು ಸಂಖ್ಯೆ 06588 ತಾಳಗುಪ್ಪದಿಂದ ಬೆಳಿಗ್ಗೆ 9.30ಕ್ಕೆ ಹೊರಡಲಿದೆ. ಈ ರೈಲು ಬೆಳಿಗ್ಗೆ 11.25ಕ್ಕೆ ಶಿವಮೊಗ್ಗ ನಗರವನ್ನು ದಾಟಿ, ಸಂಜೆ 5.15ಕ್ಕೆ ಯಶವಂತಪುರವನ್ನು ತಲುಪಲಿದೆ ಎಂದು ಮಾಹಿತಿ ನೀಡಲಾಗಿದೆ.
ಈ ವಿಶೇಷ ರೈಲು ಸೌಲಭ್ಯದ ಕುರಿತು ಮಾಹಿತಿ ನೀಡಿರುವ ಸಂಸದ ಬಿ.ವೈ. ರಾಘವೇಂದ್ರ ಅವರು, ಜಾತ್ರೆಗೆ ಬರುವ ರಾಜ್ಯದ ವಿವಿಧ ಮೂಲೆಗಳ ಭಕ್ತರು ಮತ್ತು ಸಾರ್ವಜನಿಕರು ಈ ಸೌಲಭ್ಯವನ್ನು ಗರಿಷ್ಠ ಪ್ರಮಾಣದಲ್ಲಿ ಬಳಸಿಕೊಳ್ಳುವಂತೆ ಪ್ರಕಟಣೆಯ ಮೂಲಕ ಮನವಿ ಮಾಡಿದ್ದಾರೆ.
Marikamba Jatre Special Trains Bengaluru and Talaguppa


Related News
🔔 Breaking News Alerts
ತಾಜಾ ಸುದ್ದಿಗಳನ್ನು ಮೊದಲು ಪಡೆಯಲು ನಮ್ಮ ನೋಟಿಫಿಕೇಶನ್ ಸೇವೆಯನ್ನು ಸಬ್ಸ್ಕ್ರೈಬ್ ಮಾಡಿ.