ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರರವರ ಪರಿಚಯ ಹೇಳಿಕೊಂಡು ವಂಚನೆ! ಸಿಕ್ಕಿಬಿದ್ದ ಆರೋಪಿ

Bengaluru: A man has been arrested by the Bengaluru police for allegedly duping businessmen by claiming to know bjp state president B Y Vijayendra.

ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರರವರ ಪರಿಚಯ ಹೇಳಿಕೊಂಡು ವಂಚನೆ! ಸಿಕ್ಕಿಬಿದ್ದ ಆರೋಪಿ

SHIVAMOGGA NEWS / Malenadu today/ Nov 26, 2023 | Malenadutoday.com  

BENGALURU |  ಅಧಿಕಾರಿಗಳು, ರಾಜಕಾರಣಿಗಳ ಹೆಸರನ್ನ ಹೇಳಿಕೊಂಡು ವಂಚನೆ ಮಾಡುತ್ತಿದ್ದ ಆರೋಪಿಯನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ. ಈತನ ವಿಚಾರಣೆ ವೇಳೇ ಬಿಜೆಪಿ ರಾಜ್ಯಾಧ್ಯಕ್ಷ (bjp state president)  ಬಿ.ವೈ.ವಿಜಯೇಂದ್ರ ರವರು ತನಗೆ ಪರಿಚಯ ಎಂದು ಹೇಳಿ ಹಲವರಿ ವಂಚಿಸಿದ ವಿಚಾರ ಬೆಳಕಿಗೆ ಬಂದಿದೆ. 

READ : ಕುಖ್ಯಾತವಾಗ್ತಿದೆಯಾ ಶಿವಮೊಗ್ಗ KSRTC ​ ನಿಲ್ದಾಣ? ಮಹಿಳೆಯರೆ ಹುಷಾರ್! ಭದ್ರಾವತಿ ಬಸ್​ನಲ್ಲಿ ನಡೀತು ಈ ಘಟನೆ

ಏನಿದು ಪ್ರಕರಣ?

ಪ್ರಕರಣ ಆರೋಪಿ ಯೂಸೂಫ್​ ಎಂಬಾತ ವಿಜಯೇಂದ್ರರವರು ತನಗೆ ತುಂಬಾ ಪರಿಚಯ. ಬಿಜೆಪಿ ಹೈಕಮಾಂಡ್​ನಲ್ಲಿಯು ಕೆಲವರು ತನಗೆ ಗೊತ್ತಿದೆ ಎಂದು ಹೇಳಿ ಉದ್ಯಮಿಗಳಿಗೆ ಪರಿಚಯಿಸಿಕೊಳ್ಳುತ್ತಿದ್ದನಂತೆ. ಅವರ ಪರಿಚಯದ ನಡುವೆ ಉದ್ಯಮಿಗಳಿಗೆ ಆಗಬೇಕಿರುವ ಕೆಲಸಗಳನ್ನ ತಿಳಿದುಕೊಂಡು, ರಾಜಕೀಯವಾಗಿ ಕೆಲಸ ಮಾಡಿಸಿಕೊಡುವುದಾಗಿ ವಂಚಿಸಿದ್ದಾನೆ ಎಂಬುದು ಆರೋಪ. 

ಇದೇ ರೀತಿಯಲ್ಲಿ ಜಿಎಸ್​ಟಿ ಕಚೇರಿ, ಬ್ಯಾಂಕ್​ ಗಳಲ್ಲಿ ತನಗೆ ಅಧಿಕಾರಿಗಳು ಗೊತ್ತಿದೆ ಎಂದು ಅವರ ಕಚೇರಿಗೆ ಕರೆದುಕೊಂಡು ಹೋಗಿ ಆನಂತರ ಉದ್ಯಮಿಗಳನ್ನ ವಂಚಿಸುತ್ತಿದ್ದ ಎಂದು ಪೊಲೀಸ್ ವಿಚಾರಣೆ ವೇಳೆ ತಿಳಿದು ಬಂದಿದೆ.