ಮಲೆನಾಡು ಟುಡೆ ಸುದ್ದಿ / ಸಾಗರ / ನಿನ್ನೆ ರಾತ್ರಿ ಪೇಟೆಯಲ್ಲಿ ಬಸ್ವೊಂದು ದಿಕ್ಕು ತಪ್ಪಿ ಡಿವೈಡರ್ ಏರಿ ಕುಳಿತು ಅದ್ವಾನ ಆಗೋಗಿತ್ತು. ಕೊನೆಗೆ ಜನರೇ ಬಸ್ಸನ್ನ ತಳ್ಳಿ ರಸ್ತೆಗಿಳಿಸಬೇಕಾಯ್ತು.

ಸಾಗರ ಟೌನ್ನಲ್ಲಿ ನಡೆದ ಘಟನೆ
ಸಾಗರ ಪಟ್ಟಣದಲ್ಲಿ ರಾಷ್ಟ್ರೀಯ ಹೆದ್ದಾರಿ ಕೆಲಸ ನಡೆಯುತ್ತಿದೆ. ಆದರೆ ಕಾಮಗಾರಿ ಅಲ್ಲಲ್ಲಿ ಬಿಟ್ಟು ಬಿಟ್ಟು ಮಾಡ್ತಿರೋದರಿಂದ ಸಮಸ್ಯೆಯಾಗುತ್ತಿದೆ. ಅಲ್ಲದೆ ಮಾಡಿದ ಕಾಮಗಾರಿಯನ್ನ ಸರ್ಮಪಕವಾಗಿ ನಿರ್ವಹಣೆ ಮಾಡ್ತಿಲ್ಲ. ಹಾಗಾಗಿ ನಿರ್ಮಾಣ ಹಂತದ ಡಿವೈಡರ್ಗಳು ನಡುರಸ್ತೆಯಲ್ಲಿನ ಬಾವಿಗಳಂತೆ ಕಾಣುತ್ತಿವೆ.
ಈ ಮಧ್ಯೆ ನಿನ್ನೆ ರಾತ್ರಿ ಬಿಎಚ್ ರಸ್ತೆಯಲ್ಲಿ ಕೆಎಸ್ಆರ್ಟಿಸಿ ಬಸ್ ಒಂದು ಡಿವೈಡರ್ ಹತ್ತಿ ನಿಂತುಬಿಟ್ಟಿತ್ತು. ನಗರದಲ್ಲಿನ ಪ್ರಿಯದರ್ಶಿನಿ ಬಾರ್ ಬಳಿ ಹೊಸದಾಗಿ ನಿರ್ಮಿಸಿದ ಡಿವೈಡರ್ ಮೇಲೆ ಹತ್ತಿದ ಕೆಎಸ್ಆರ್ಟಿಸಿ ಬಸ್ ಬಾಡಿ ಟಚ್ ಆಗಿ ಅಲ್ಲಿಯೇ ನಿಂತು ಬಿಟ್ಟಿತ್ತು. ಅದೃಷ್ಟಕ್ಕೆ ಘಟನೆಯಲ್ಲಿ ಯಾರಿಗೂ ಏನೂ ಸಹ ಆಗಿಲ್ಲ. ಬಳಿಕ ಸಾರ್ವಜನಿಕರೇ ಸೇರಿಕೊಂಡು ಬಸ್ನ್ನ ತಳ್ಳಿ ರಸ್ತೆ ಬದಿಗೆ ಸರಿಸಲು ನೆರವಾದರು .ಅಲ್ಲದೆ ಕಿರಿದಾದ ರಸ್ತೆಯಲ್ಲಿ ಸಮರ್ಪಕವಾಗಿ ಕಾಮಗಾರಿ ನಡೆಸ್ತಿಲ್ಲ. ಹೀಗಾಗಿ ಸಮಸ್ಯೆಯಾಗುತ್ತಿದೆ ಎಂದು ಆರೋಪಿಸಿದರು.

ಸಾಗರದಲ್ಲಿ ನಡೆದ ಘಟನೆಯ ವಿಡಿಯೋ ಇಲ್ಲಿದೆ ನೋಡಿ
ರಂಜಾನ್ ಸಂಭ್ರಮ. ಶಿವಮೊಗ್ಗದಲ್ಲಿ ಹೇಗಿತ್ತು ಆಚರಣೆ
ಮಲೆನಾಡು ಟುಡೆ ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ದ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಸುದ್ದಿಗಳಿಂದ ಸ್ತಳೀಯ ವಿಶೇಷ ವಿಡಿಯೋ ಸುದ್ದಿಗಳನ್ನು ನೀವು ನೋಡಬಹುದು…ಇಲ್ಲಿದೆ ಅವುಗಳ ಲಿಂಕ್ Facebook , whatsapp , whatsapp chanel instagram, youtube, telegram , ನಮ್ಮದು ಅಧಿಕೃತವಾದ ಮತ್ತು ಉತ್ಪ್ರೇಕ್ಷೆಗಳಲ್ಲಿದ ನೈಜ ಸುದ್ದಿಯ ಸಂಸ್ಥೆ. ನಮ್ಮ ಬಗ್ಗೆ google business, ನಲ್ಲಿ ಮಾಹಿತಿ ಪಡೆಯಬಹುದು. ಅಲ್ಲದೆ malenadu today epaper malenadutoday web ನಲ್ಲಿ ಆಯಾ ದಿನದ ಈ ಪೇಪರ್ಗಳನ್ನು ಕ್ಲಿಕ್ ಮಾಡಿ ಓದಬಹುದು.