ಒಂದೇ ಬ್ಯಾನರ್​ನಲ್ಲಿ ಒಂದಾದ ಇಬ್ಬರು ನಾಯಕರು! ತೀರ್ಥಹಳ್ಳಿಯಲ್ಲಿ ಕಿಮ್ಮನೆರತ್ನಾಕರ್​ ಮತ್ತು ಆರ್​ಎಂ.ಮಂಜುನಾಥ್​ ಗೌಡರ ಜೋಡೆತ್ತಿನ ಹೋರಾಟ

Kimmane Ratnakar and RM Manjunatha Gowda Come Together Under The Same Banner! In Theerthahalli

ಒಂದೇ ಬ್ಯಾನರ್​ನಲ್ಲಿ ಒಂದಾದ ಇಬ್ಬರು ನಾಯಕರು! ತೀರ್ಥಹಳ್ಳಿಯಲ್ಲಿ ಕಿಮ್ಮನೆರತ್ನಾಕರ್​  ಮತ್ತು ಆರ್​ಎಂ.ಮಂಜುನಾಥ್​ ಗೌಡರ ಜೋಡೆತ್ತಿನ  ಹೋರಾಟ
ಒಂದೇ ಬ್ಯಾನರ್​ನಲ್ಲಿ ಒಂದಾದ ಇಬ್ಬರು ನಾಯಕರು! ತೀರ್ಥಹಳ್ಳಿಯಲ್ಲಿ ಕಿಮ್ಮನೆರತ್ನಾಕರ್​ ಮತ್ತು ಆರ್​ಎಂಎಂ ಮಂಜುನಾಥ್​ ಗೌಡರ ಜೋಡೆತ್ತಿನ ಹೋರಾಟ

MALENADUTODAY.COM | SHIVAMOGGA  | #KANNADANEWSWEB

ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲ್ಲೂಕಿನ ಕಾಂಗ್ರೆಸ್​ ವಲಯದಲ್ಲಿ ಆರ್​ಎಂ ಮಂಜುನಾಥ್ ಗೌಡರು ಹಾಗೂ ಮಾಜಿ ಸಚಿವ ಕಿಮ್ಮನೆ ರತ್ನಾಕರ್ ನಡುವೆ ಹೊಯ್ದಕ್ಕಿ ಬೇಯುವುದಿಲ್ಲ ಎಂಬ ಮಾತಿತ್ತು. ಈ ಮಧ್ಯೆ ಕಾಂಗ್ರೆಸ್​ ಬಸ್ ಯಾತ್ರೆಗೂ ನಡೆಸಿದ್ದ ಸಂಧಾನವೂ ಸಹ ವಿಫಲವಾಗಿತ್ತು. ಇದರ ನಡುವೆ, ಬಿಜೆಪಿ ವಿರುದ್ಧದ ಆರೋಪವೇ ಇಬ್ಬರು ನಾಯಕರನ್ನ ಒಂದಗೂಡಿಸಿದೆ. 

BREAKING : ಮತ್ತೊಂದು ದರೋಡೆ ಯತ್ನವನ್ನು ತಡೆದ ಶಿವಮೊಗ್ಗ ಪೊಲೀಸ್! ನಾಲ್ವರ ಬಂಧನ !

ಹೌದು, ತೀರ್ಥಹಳ್ಳಿಯ  ಮೇಲಿನ ಕುರುವಳ್ಳಿ ಗ್ರಾಮ ಪಂಚಾಯಿತಿಯಲ್ಲಿ ಕಾಂಗ್ರೆಸ್ ಅದ್ಯಕ್ಷರಿದ್ದರೂ, ಬಹುಪಾಲು ಸದಸ್ಯರಿದ್ದರೂ, ಅಧಿಕಾರ ನಡೆಸಲು ಅವಕಾಶ ನೀಡಲಾಗುತ್ತಿಲ್ಲ. ಪಿಡಿಒ ಮೂಲಕ ಕಿರುಕುಳ ನೀಡಲಾಗುತ್ತದೆ ಎಂದು ಕಾಂಗ್ರೆಸ್ ಆರೋಪಿಸಿತ್ತು. ಅಲ್ಲದೆ ಈ ಸಂಬಂಧ ಕಾರ್ಯಕರ್ತರೆಲ್ಲಾ ದೂರು ಹೇಳಿಕೊಂಡ ಬೆನ್ನಲ್ಲೆ ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಹಾಗೂ ಆರ್​ಎಂ ಮಂಜುನಾಥ್​ ಗೌಡರು ಇಬ್ಬರು ಜಂಟಿಯಾಗಿ ಹೋರಾಟಕ್ಕೆ ಅಣಿಯಾದ್ರು

ತೀರ್ಥಹಳ್ಳಿಯಿಂದ ಮೇಲಿನ ಕುರುವಳ್ಳಿಯವರೆಗೆ ಬೃಹತ್ ಪ್ರತಿಭಟನಾ ಪಾದಯಾತ್ರೆ ನಡೆಸಿ ಇಬ್ಬರು ನಾಯಕರು ಒಗ್ಗಟ್ಟಿನ ಬಲವನ್ನು ಪ್ರದರ್ಶಸಿದ್ಧಾರೆ. ಒಂದೇ ಬ್ಯಾನರ್​ನಲ್ಲಿ ಇಬ್ಬರು ನಾಯಕರ ಫೋಟೋದೊಂದಿಗೆ ಹೊರಟ ಪಾದಯಾತ್ರೆಯು ಯಶಸ್ವಿಯು ಆಗಿದೆ. ಇನ್ನೂ ಕಿಮ್ಮನೆ ರತ್ನಾಕರ್ ಹಾಗೂ ಆರ್​ಎಂ ಮಂಜುನಾಥ್ ಗೌಡರು ಮುಂಚೂಣಿಯಲ್ಲಿ ಹೆಜ್ಜೆ ಹಾಕಿದ್ರೆ, ಕಾರ್ಯಕರ್ತರು ಘೋಷಣೆಗಳನ್ನು ಕೂಗುತ್ತಾ ಬಿಜೆಪಿ ವಿರುದ್ಧ ಹರಿಹಾಯ್ದರು. 

 ನಮ್ಮ ವಾಟ್ಸ್ಯಾಪ್ ಗ್ರೂಪ್ ಲಿಂಕ್ ಇದು  ಕ್ಲಿಕ್ ಮಾಡಿ

Facebook ನಲ್ಲಿ ನಮ್ಮ ಪೇಜ್​ ನೋಡಿ : Malenadutoday.com

Twitter ನಲ್ಲಿ ನಾವಿದ್ದೇವೆಫಾಲೋ ಮಾಡಿ : Malenadutoday.com

Instagram ನಲ್ಲಿ ಕ್ಲಿಕ್​ ಮಾಡಿ : Malenadutoday.com

Telegram ನಲ್ಲಿ ಸುದ್ದಿ ಪಡೆಯಲು ಲಿಂಕ್ ಒತ್ತಿ : Malenadutoday.com