ಜಸ್ಟ್ 2 ಗಂಟೆಯ ಅವಧಿಯಲ್ಲಿ 1700 ಅಡಿ ಎತ್ತರವನ್ನು ಏರಿದ ಜ್ಯೋತಿರಾಜ್​! ಗಡಾಯಿ ಕಲ್ಲು ಹತ್ತಿ ಸಾಹಸ ಮೆರೆದ ಕೋತಿರಾಜ್

ಜೋಗವನ್ನು ಹೀಗೆ ನೋಡಿ ಹಾಗೆ ನೋಡಿ, ಮೇಲಕ್ಕೆ ಹತ್ತುತ್ತಿದ್ದ ಜ್ಯೋತಿರಾಜ್ ಅಥವಾ ಕೋತಿರಾಜ್ ((Kotiraj ) ಇದೀಗ ಮತ್ತೊಂದು ಸಾಹಸ ಮಾಡಿದ್ದಾನೆ.. ಬೆಳ್ತಂಗಡಿ ತಾಲೂಕಿನ ನಡ ಗ್ರಾಮದಲ್ಲಿರುವ ಐತಿಹಾಸಿಕ ಕೋಟೆಯಾದ ಗಡಾಯಿ ಕಲ್ಲು (Gadaikallu))ಅಥವಾ ನರಸಿಂಹ ಗಡವನ್ನು ಬರಿಗೈಲಿ ಹತ್ತಿ ಸಾಹಸ ಮೆರೆದಿದ್ಧಾನೆ. 

ನಿನ್ನೆ ಭಾನುವಾರ ಚಿತ್ರದುರ್ಗದ   ಜ್ಯೋತಿರಾಜ್ ತನ್ನ ತಂಡದೊಂದಿಗೆ ಚಂದೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ  ವಿಶೇಷ ಪೂಜೆ ಸಲ್ಲಿಸಿದ್ರು. ನಂತರ  ಸುಮಾರು ಎರಡು ಕಿ.ಮೀ. ದೂರ ಕಾಡುದಾರಿಯಲ್ಲಿ ಸಾಗಿ ಬೆಳಗ್ಗೆ 9.50ರ ಸುಮಾರಿಗೆ ಬರಿಗೈಯಲ್ಲಿ ಗಡಾಯಿಕಲ್ಲನ್ನು ಏರತೊಡಗಿದರು. ಸಮುದ್ರ ಮಟ್ಟಕ್ಕಿಂತ 1,700 ಅಡಿ ಎತ್ತರದಲ್ಲಿರುವ ಗಡಾಯಿಕಲ್ಲಿನ ತುತ್ತ ತುದಿಯನ್ನು 11.50ಕ್ಕೆ ತಲುಪಿ ಅಲ್ಲಿ ತನ್ನ ತಂಡದೊಂದಿಗೆ ಕನ್ನಡಧ್ವಜ ವನ್ನು ಹಾರಿಸಿದರು.  

JP BIG EXCLUSIVE : ಸಕ್ರೆಬೈಲ್ ಅನೆ ಬಿಡಾರದಿಂದ ಮತ್ತೆ ಮೂರು ಆನೆಗಳ ಸ್ಥಳಾಂತರಕ್ಕೆ ಬೇಡಿಕೆ!

ನಂದಿನಿ ಜಂಬೋ ಪಾಕೆಟ್ ಹಾಲಿನ ದರ 3 ರೂಪಾಯಿ ಹೆಚ್ಚಳ!

Facebook ನಲ್ಲಿ ನಮ್ಮ ಪೇಜ್​ ನೋಡಿ : Malenadutoday.com

Twitter ನಲ್ಲಿ ನಾವಿದ್ದೇವೆಫಾಲೋ ಮಾಡಿ : Malenadutoday.com

Instagram ನಲ್ಲಿ ಕ್ಲಿಕ್​ ಮಾಡಿ : Malenadutoday.com

Telegram ನಲ್ಲಿ ಸುದ್ದಿ ಪಡೆಯಲು ಲಿಂಕ್ ಒತ್ತಿ : Malenadutoday.com

 

Malenadu Today Shivamogga

Leave a Comment