let articleDiv = document.getElementById("mt-read-content"); if (!articleDiv) return;
let readableElements = articleDiv.querySelectorAll("p"); let rawText = ""; readableElements.forEach(el => { if(window.getComputedStyle(el).display !== "none") { rawText += el.innerText + ". "; } });
let cleanText = rawText.replace(/https?:\/\/[^\s]+/g, ""); cleanText = cleanText.replace(/[\/\#+()$~%*<>{}\[\]]/g, ""); cleanText = cleanText.replace(/\s+/g, " ").trim();
if(cleanText === "") return;
let speech = new SpeechSynthesisUtterance(cleanText); speech.lang = "kn-IN"; speech.rate = 0.85;
speech.onstart = function() { element.querySelector(".mt-icon").innerText = "⏸️"; element.querySelector(".mt-audio-text").innerText = "ಆಲಿಸುತ್ತಿದ್ದೀರಿ..."; };
speech.onend = function() { element.querySelector(".mt-icon").innerText = "▶️"; element.querySelector(".mt-audio-text").innerText = "ಸುದ್ದಿ ಆಲಿಸಿ"; };
synth.speak(speech); }
hosanagara : ಹೊಸನಗರ : ದೇವರ ಪೂಜೆಗೆಂದು ಬಂದಿದ್ದ ಅಕ್ಕನ ಗಂಡನ ಮೇಲೆ ಭಾವನೆಂಟ ಓಂಕಾರ್ ಜೈನ್ ಕಟ್ಟಿಗೆಯಿಂದ ಹಲ್ಲೆ ಮಾಡಿ ಕೊಲೆ ಮಾಡಿರುವ ಘಟನೆ ಹೊಸನಗರ ತಾಲೂಕಿನ ಕರ್ಕಮುಡಿಯಲ್ಲಿ ನಡೆದಿದೆ. ದೇವಿಚಂದ್ರ (55) ಕೊಲೆಯಾದ ವ್ಯಕ್ತಿ ಎಂದು ತಿಳಿದುಬಂದಿದೆ. hosanagara : ಏನಿದು ಘಟನೆ ಓಂಕಾರ್ ಜೈನ್ ನ ಅಕ್ಕನ ಗಂಡ ದೇವಿಚಂದ್ರನಿಗೆ…
hosanagara : ಹೊಸನಗರ : ದೇವರ ಪೂಜೆಗೆಂದು ಬಂದಿದ್ದ ಅಕ್ಕನ ಗಂಡನ ಮೇಲೆ ಭಾವನೆಂಟ ಓಂಕಾರ್ ಜೈನ್ ಕಟ್ಟಿಗೆಯಿಂದ ಹಲ್ಲೆ ಮಾಡಿ ಕೊಲೆ ಮಾಡಿರುವ ಘಟನೆ ಹೊಸನಗರ ತಾಲೂಕಿನ ಕರ್ಕಮುಡಿಯಲ್ಲಿ ನಡೆದಿದೆ. ದೇವಿಚಂದ್ರ (55) ಕೊಲೆಯಾದ ವ್ಯಕ್ತಿ ಎಂದು ತಿಳಿದುಬಂದಿದೆ.
hosanagara : ಏನಿದು ಘಟನೆ
ಓಂಕಾರ್ ಜೈನ್ ನ ಅಕ್ಕನ ಗಂಡ ದೇವಿಚಂದ್ರನಿಗೆ ಇದು, ಎರಡನೇ ಮದುವೆಯಾಗಿತ್ತು. ಓಂಕಾರ್ ಮತ್ತು ದೇವಿಚಂದ್ರ ಕುಟುಂಬದಲ್ಲಿ ಮೊದಲಿನಿಂದಲೂ ಕಲಹಗಳು ಆಗಾಗೆ ನಡೆಯುತ್ತಿತ್ತು ಎನ್ನಲಾಗಿದೆ. ಭಾನುವಾರ ಓಂಕಾರ್ ಜೈನ್ ಮನೆಯಲ್ಲಿ ಚೌಡಿ ಮತ್ತು ಭೂತರಾಯ ಪೂಜೆ ಆಯೋಜಿಸಲಾಗಿತ್ತು. ಈ ವೇಳೆ ಒಂಕಾರ್ ಅಕ್ಕನ ಗಂಡ ದೇವಿಚಂದ್ರ ಸಹ ಪೂಜಾ ಕಾರ್ಯಕ್ರಮಕ್ಕೆ ಆಗಮಿಸಿದ್ದ. ಪೂಜೆ ವೇಳೆ ಇಬ್ಬರ ನಡುವೆ ಗಲಾಟೆ ಶುರುವಾಗಿ, ಪರಸ್ಪರ ಅವಾಚ್ಯ ಶಬ್ದಗಳಿಂದ ನಿಂದಿಸಿಕೊಂಡಿದ್ದಾರೆ. ನಂತರ ಜಗಳ ತಾರಕಕ್ಕೇರಿದ್ದು, ನಾವು ಕಷ್ಟ ಪಟ್ಟು ಪೂಜೆ ಮಾಡಿಸಿದರೆ, ಕಾರ್ಯಕ್ರಮ ಹಾಳು ಮಾಡುತ್ತೀಯಾ ಎಂದು ಓಂಕಾರ್ ಪಕ್ಕದಲ್ಲೇ ಇದ್ದ ಮರದ ದೊಣ್ಣೆಯಿಂದ ದೇವಿಚಂದ್ರನ ಮೇಲೆ ಹಲ್ಲೆ ನಡೆಸಿದ್ದಾನೆ ಎನ್ನಲಾಗಿದೆ.ಈ ವೇಳೆ ದೇವಿಚಂದ್ರನ ತಲೆಗೆ ಪೆಟ್ಟು ಬಿದ್ದು ತೀವ್ರ ರಕ್ತಸ್ರಾವ ಉಂಟಾಗಿ ಸಾವನ್ನಪ್ಪಿದ್ದಾನೆ ಎಂದು ತಿಳಿದುಬಂದಿದೆ.
ಈ ಸಂಬಂಧ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಘಟನೆ ನಂತರ ಓಂಕಾರ್ ಜೈನ್ ತಲೆಮರೆಸಿಕೊಂಡಿದ್ದಾನೆ. ಪೊಲೀಸರು ಆತನಿಗಾಗಿ ಶೋಧಕಾರ್ಯ ನಡೆಸುತ್ತಿದ್ದಾರೆ.
