thirthahalli : ತೀರ್ಥಹಳ್ಳಿ : ರಸ್ತೆಗೆ ಅಡ್ಡವಾಗಿ ಕಾರು ನಿಲ್ಲಿಸಿದ್ದನ್ನು ಪ್ರಶ್ನಿಸಿದ್ದಕ್ಕೆ ದುಷ್ಕರ್ಮಿಗಳು ಬಿಯರ್ ಬಾಟಲ್ ನಿಂದ ಹಲ್ಲೆ ಮಾಡಿರುವ ಘಟನೆ ತೀರ್ಥಹಳ್ಳಿ ತಾಲೂಕಿನ ಹೊನ್ನಂಗಿಯಲ್ಲಿ ನಡೆದಿದೆ.

thirthahalli : ಹೇಗಾಯ್ತು ಘಟನೆ
ತೀರ್ಥಹಳ್ಳಿ ತಾಲೂಕಿನ ಹೊಸಂದೂರಿನ ಶೇಡ್ಗಾರ್ ಗ್ರಾಮದ ಕಿರಣ್ ಎಂಬುವವರು ಅವರ ಪುತ್ರನೊಂದಿಗೆ ಪರಿಚಿತರ ಮನೆಯ ಗೃಹ ಪ್ರವೇಶ ಕಾರ್ಯಕ್ರಮವನ್ನು ಮುಗಿಸಿಕೊಂಡು ಬರುವ ಸಮಯದಲ್ಲಿ ಈ ಘಟನೆ ನಡೆದಿದೆ. ಹೊನ್ನಂಗಿ ರಸ್ತೆಯಲ್ಲಿ ಸಚಿನ್ ಮತ್ತು ನಾಗರಾಜ್ ಎಂಬುವವರು ತಮ್ಮ ಕಾರನ್ನು ರಸ್ತೆಗೆ ಅಡ್ಡಲಾಗಿ ನಿಲ್ಲಿಸಿದ್ದರು ಎಂದು ಆರೋಪಿಸಲಾಗಿದೆ. ಕಾರನ್ನು ರಸ್ತೆಗೆ ಅಡ್ಡ ನಿಲ್ಲಿಸಿರುವ ಬಗ್ಗೆ ಕಿರಣ್ ಮತ್ತು ಅವರ ಪುತ್ರ ಶಕ್ತಿರಾಜ್, ನಾಗರಾಜ್ ಬಳಿ ಬಂದು ಪ್ರಶ್ನಿಸಿದ್ದಾರೆ. ಆಗ ಹಿಂಬದಿಯಿಂದ ಬಂದ ಸಚಿನ್ ಬಿಯರ್ ಬಾಟಲ್ನಿಂದ ಕಿರಣ್ ಅವರ ತಲೆಗೆ ಹೊಡೆದಿದ್ದಾರೆ ಎನ್ನಲಾಗಿದೆ. ಸಚಿನ್ ನನ್ನು ತಡೆಯಲು ಹೋದ ಕಿರಣ್ ಮಗ ಶಕ್ತಿರಾಜ್ ಮೇಲೂ ಸಚಿನ್ ಹಾಗು ನಾಗರಾಜ್ ಇಬ್ಬರು ಸೇರಿಕೊಂಡು ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಹಲ್ಲೆಯಿಂದ ಗಾಯಗೊಂಡಿದ್ದ, ಕಿರಣ್ ಹಾಗೂ ಶಕ್ತಿರಾಜ್ ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಮಾಳೂರು ಪೊಲೀಸ್ ಠಾಣೆಯಲ್ಲಿ ಕಿರಣ್ ನವರು ಘಟನೆ ಸಂಬಂಧ ದೂರು ದಾಖಲಿಸಿದ್ದಾರೆ.