ಮಲೆನಾಡು ಟುಡೆ ಸುದ್ದಿ / ಪರಾಭವ ನಾಮ ಸಂವತ್ಸರ, ಉತ್ತರಾಯಣ, ವಸಂತ ಋತು ಹಾಗೂ ಚೈತ್ರ ಮಾಸದ ಈ ದಿನ ಬೆಳಿಗ್ಗೆ 6.37 ರವರೆಗೆ ಪೌರ್ಣಮಿ, ತರುವಾಯ ಬಹುಳ ಪಾಡ್ಯಮಿ ಆರಂಭವಾಗಲಿದೆ. ಸಂಜೆ 4.46 ರವರೆಗೆ ಹಸ್ತ ನಕ್ಷತ್ರ ಇರಲಿದ್ದು, ಬಳಿಕ ಚಿತ್ತ ನಕ್ಷತ್ರ ಪ್ರವೇಶವಾಗಲಿದೆ. ಬೆಳಿಗ್ಗೆ 10.31 ರಿಂದ 12.11 ರವರೆಗೆ ಅಮೃತ ಗಳಿಗೆ . ಮಧ್ಯಾಹ್ನ 1.30 ರಿಂದ 3.00 ರವರೆಗೆ ರಾಹುಕಾಲ ಹಾಗೂ ಬೆಳಿಗ್ಗೆ 6.00 ರಿಂದ 7.30 ರವರೆಗೆ ಯಮಗಂಡ ಕಾಲ ಇರಲಿದೆ.
ಇಂದಿನ ರಾಶಿಭವಿಷ್ಯ ಮತ್ತು ದ್ವಾದಶ ರಾಶಿಗಳ ಫಲಾಪಲ
ಮೇಷ / ಯಶಸ್ಸು ಒಲಿಯಲಿದೆ. ಶುಭ ಸಮಾರಂಭಗಳಲ್ಲಿ ಪಾಲ್ಗೊಳ್ಳುವ ಅವಕಾಶವಿದೆ. ಸ್ಥಿರಾಸ್ತಿಗೆ ಸಂಬಂಧಿಸಿದ ವ್ಯಾಜ್ಯ ಬಗೆಹರಿಯಲಿವೆ. ಆಸ್ತಿ ಲಾಭ, ಹಳೆಯ ಸಾಲ ಕೈಸೇರಲಿವೆ. ಉದ್ಯೋಗ ಮತ್ತು ವ್ಯಾಪಾರ ವಲಯದಲ್ಲಿ ಸುಗಮವಾದ ಪ್ರಗತಿ ಕಂಡುಬರಲಿದೆ.
ವೃಷಭ/ ಒತ್ತಡ ಎದುರಾಗಲಿವೆ. ಅನಿರೀಕ್ಷಿತವಾಗಿ ಹಣ ಖರ್ಚು. ಮನೆಯ ಸದಸ್ಯರೊಂದಿಗೆ ಕಿರಿಕಿರಿ. ಆರೋಗ್ಯದಲ್ಲಿ ಏರುಪೇರಾಗಬಹುದು. ದುಡಿಮೆಗೆ ತಕ್ಕ ಪ್ರತಿಫಲ ದೊರೆಯುವುದಿಲ್ಲ. ಉದ್ಯೋಗ ಮತ್ತು ವ್ಯಾಪಾರ ವ್ಯವಹಾರ ನಿಧಾನಗತಿಯಲ್ಲಿ ಸಾಗಲಿವೆ.
ಮಿಥುನ / ಭಿನ್ನಾಭಿಪ್ರಾಯ ಮೂಡಬಹುದು. ಆರೋಗ್ಯ ಸಮಸ್ಯೆ . ಕುಟುಂಬದ ಒಳಗೆ ಸಣ್ಣಪುಟ್ಟ ಕಿರಿಕಿರಿ ಎದುರಾಗಲಿವೆ. ಗೊಂದಲ ಉಂಟಾಗಬಹುದು. ಕೆಲಸದ ಒತ್ತಡ ಹೆಚ್ಚಾಗಲಿದೆ. ಉದ್ಯೋಗ ವ್ಯಾಪಾರ ಕ್ಷೇತ್ರದಲ್ಲಿ ಮಂದಗತಿಯ ಬೆಳವಣಿಗೆ ಇರಲಿದೆ.

ಕರ್ಕಾಟಕ / ಉದ್ಯೋಗ ಪ್ರಾಪ್ತಿಯಾಗುವ ಯೋಗವಿದೆ. ಸಮಾಜದಲ್ಲಿ ಪ್ರಭಾವ ವೃದ್ಧಿಯಾಗಲಿದೆ. ಸಂತೋಷದಿಂದ ಕಾಲ ಕಳೆಯುವಿರಿ. ಉದ್ಯೋಗ ಮತ್ತು ವ್ಯಾಪಾರ ಯಾವುದೇ ಅಡೆತಡೆಗಳಿಲ್ಲದೆ ಸುಗಮವಾಗಿ ನಡೆಯಲಿವೆ.
ಸಿಂಹ / ವಾಗ್ವಾದ ನಡೆಯುವ ಸಾಧ್ಯತೆ ಇದೆ. ಆರ್ಥಿಕವಾಗಿ ಖರ್ಚು ವೆಚ್ಚ ಹೆಚ್ಚಾಗಲಿವೆ. ಕುಟುಂಬದವರಿಂದ ವಿವಿಧ ರೀತಿಯ ಒತ್ತಡ ಎದುರಾಗಬಹುದು.ಜವಾಬ್ದಾರಿ ಇನ್ನಷ್ಟು ಹೆಚ್ಚಾಗಲಿವೆ. ಉದ್ಯೋಗ ಹಾಗೂ ವ್ಯಾಪಾರವು ಸಾಧಾರಣ ಮಟ್ಟದಲ್ಲಿರಲಿದೆ.
ಕನ್ಯಾ / ನೂತನ ವಿಚಾರ ಕಲಿಯುವ ಹಾಗೂ ತಿಳಿದುಕೊಳ್ಳುವ ಅವಕಾಶ ಸಿಗಲಿದೆ. ಸಮಾಜದಲ್ಲಿ ಮನ್ನಣೆ ಮತ್ತು ಗೌರವ ಪ್ರಾಪ್ತಿಯಾಗಲಿದೆ. ಬೆಲೆಬಾಳುವ ವಸ್ತುಗಳನ್ನು ಖರೀದಿಸುವಿರಿ. ವ್ಯಾಪಾರ ಮತ್ತು ಉದ್ಯೋಗ ಕ್ಷೇತ್ರದಲ್ಲಿ ಆಶಾದಾಯಕ ವಾತಾವರಣ ಇರಲಿದೆ.
ನಮ್ಮ ಮಲೆನಾಡು ಟುಡೆಯ ವಿಡಿಯೋಗಳನ್ನು ನೀವಿಲ್ಲಿ ನೋಡಬಹುದು: https://www.youtube.com/shorts/x8I63rpLvyw
ಇಂದಿನ ರಾಶಿಭವಿಷ್ಯದ ಮತ್ತಷ್ಟು ವಿವರ
ತುಲಾ / ಮನೆಯವರೊಂದಿಗೆ ಭಿನ್ನಾಭಿಪ್ರಾಯ ತಲೆದೋರಬಹುದು. ಆಧ್ಯಾತ್ಮಿಕ ವಿಚಾರಗಳತ್ತ ಒಲವು ಹೆಚ್ಚಾಗಲಿದೆ. ಕೈಗೆತ್ತಿಕೊಂಡ ಕೆಲಸ ಕಾರ್ಯಗಳಲ್ಲಿ ವಿಳಂಬ . ಹೊಣೆಗಾರಿಕೆಗಳು ಹೆಚ್ಚಾಗಲಿವೆ. ಉದ್ಯೋಗ ಮತ್ತು ವ್ಯಾಪಾರದಲ್ಲಿ ನಿರಾಸಕ್ತಿ ಮೂಡುವ ಸಾಧ್ಯತೆಗಳಿವೆ. ಹಣಕಾಸಿನ ಖರ್ಚು ಹೆಚ್ಚಾಗಲಿದೆ.
ವೃಶ್ಚಿಕ / ಮಾಡುವ ಕೆಲಸಗಳಲ್ಲಿ ಜಯ ಸಿಗಲಿದೆ. ಶುಭ ಸುದ್ದಿಗಳು ಕಿವಿಗೆ ಬೀಳಲಿವೆ. ಶುಭ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವಿರಿ. ವಸೂಲಾಗಬೇಕಿದ್ದ ಹಳೆಯ ಸಾಲ ಮರಳಿ ಬರಲಿವೆ. ಉದ್ಯೋಗ ಮತ್ತು ವ್ಯಾಪಾರ ಕ್ಷೇತ್ರದಲ್ಲಿ ಉತ್ತಮ ಬೆಳವಣಿಗೆಯನ್ನು ಕಾಣಬಹುದು.
ಧನುಸ್ಸು / ಕೀರ್ತಿ, ಗೌರವಗಳು ಹೆಚ್ಚಾಗಲಿವೆ. ಬೆಲೆಬಾಳುವ ಅಮೂಲ್ಯ ವಸ್ತುಗಳನ್ನು ಕೊಂಡುಕೊಳ್ಳುವಿರಿ. ಸಂತಸ ತರುವಂತಹ ಸುದ್ದಿಗಳು ಕೇಳಿಬರಲಿವೆ. ಅನಿರೀಕ್ಷಿತವಾಗಿ ಹಣಕಾಸಿನ ಲಾಭ . ಉದ್ಯೋಗ ಮತ್ತು ವ್ಯಾಪಾರ ವಲಯದಲ್ಲಿ ತೃಪ್ತಿದಾಯಕ ವಾತಾವರಣ ಇರಲಿದೆ.
ಮಕರ / ಸಾಲ ಪಡೆಯುವ ಪ್ರಯತ್ನಗಳನ್ನು ಮಾಡುವಿರಿ. ಕೆಲಸ ಕಾರ್ಯಗಳಲ್ಲಿ ಆತುರ . ಅನಾರೋಗ್ಯದ ಸಮಸ್ಯೆ ಕುಟುಂಬ ಸದಸ್ಯರ ನಡುವೆ ಕಲಹ. ವ್ಯಾಪಾರ ಹಾಗೂ ಉದ್ಯೋಗ ಕ್ಷೇತ್ರದಲ್ಲಿ ಕೊಂಚ ನಿರಾಸೆ ಎದುರಾಗಬಹುದು.
ಕುಂಭ / ಹೊಸದಾಗಿ ಸಾಲ ಮಾಡುವ ಪ್ರಮೇಯ ಎದುರಾಗಲಿದೆ. ಅನಿರೀಕ್ಷಿತವಾಗಿ ಪ್ರಯಾಣ . ನಿಗದಿತ ಕೆಲಸಳು ಪೂರ್ಣಗೊಳ್ಳಲು ವಿಳಂಬವಾಗಬಹುದು. ಆರೋಗ್ಯದಲ್ಲಿ ಏರುಪೇರಾಗುವ ಲಕ್ಷಣಗಳಿವೆ. ದೈಹಿಕ ಹಾಗೂ ಮಾನಸಿಕ ಶ್ರಮ . ಉದ್ಯೋಗ ಮತ್ತು ವ್ಯಾಪಾರ ಬಹಳ ನಿಧಾನಗತಿಯಲ್ಲಿ ಸಾಗಲಿವೆ.
ಮೀನ / ಕೌಟುಂಬಿಕ ಜೀವನದಲ್ಲಿ ಸುಖ ಶಾಂತಿ ನೆಲೆಸಲಿದೆ. ವ್ಯವಹಾರಗಳಲ್ಲಿ ಯಶಸ್ಸು ನಿಮ್ಮದಾಗಲಿದೆ. ಶುಭ ಸಮಾರಂಭಗಳಲ್ಲಿ ಭಾಗವಹಿಸುವ ಅವಕಾಶ ಸಿಗಲಿದೆ. ಉದ್ಯೋಗ ಮತ್ತು ವ್ಯಾಪಾರ ವಲಯದಲ್ಲಿ ಅಭಿವೃದ್ಧಿ ಗೋಚರಿಸಲಿದೆ.
ಈ ಸುದ್ದಿಗಳು ಸಹ ನಿಮಗೆ ಇಷ್ಟವಾಗಬಹುದು : ಶಿವಮೊಗ್ಗ ವಿಮಾನ ನಿಲ್ದಾಣಶಿವಮೊಗ್ಗ ಏರ್ಪೋರ್ಟ್ ವಿಶ್ವೇಶ್ವರ್ ಭಟ್ Facebook post ,ಷೇರ್ ಮಾಡಿ ರಿಪ್ಲೆ ನೀಡಿದ ಸಂಸದ
