Thirthahalli Gadikal / ಮಲೆನಾಡು ಟುಡೆ ಸುದ್ದಿ / ಧನಕಳ್ತನ ನಡೆಯುತ್ತಲೇ ಇಲ್ಲವೇನೋ ಎಂಬಂತಿರುವ ವ್ಯವಸ್ಥೇಯ ನಡುವೆ, ಹಾಲಿಗಾಗಿ ದನ ಕಟ್ಟಿರುವವರ ಕಥೆ ದಿನರಾತ್ರಿ ಕಳ್ಳರನನ್ನು ಕಾಯವುದಾಗಿದೆ. ಇದಕ್ಕೆ ಸಾಕ್ಷಿ ಎಂಬಂತಹ ವಿಡಿಯೋವೊಂದು ಇದೀಗ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಆಕಾಶ್ ನಾಯ್ಕ್ ಮಕ್ಕಿಮನೆ ಎಂಬವರು ಈ ವಿಡಿಯೋವನ್ನು ಅಪ್ಲೋಡ್ ಮಾಡಿದ್ದು, ತೀರ್ಥಹಳ್ಳಿಯಲ್ಲಿ ರಾತ್ರಿ ಕಾವಲಿನ ವ್ಯವಸ್ಥೆಯನ್ನ ಪ್ರಶ್ನಿಸುತ್ತಿದೆ.
ಆಕಾಶ್ ನಾಯ್ಕ್ರವರು ವಿವರಿಸಿದಂತೆ ತೀರ್ಥಹಳ್ಳಿ ಸಮೀಪದ ಗಡಿಕಲ್ ವೃತ್ತದಲ್ಲಿ ಜೂನ್ 9ರ ರಾತ್ರಿ ಸುಮಾರು 1 ಗಂಟೆಯ ಸಮಯದಲ್ಲಿ ದನ ಕಳ್ಳತನಕ್ಕೆ ಯತ್ನಿಸಲಾಗಿದೆ. ಇದೇ ಮಾರ್ಗದಲ್ಲಿ ಬರುತ್ತಿದ್ದ ಇವರ ಕಾರಿನ ಡ್ಯಾಶ್ ಕ್ಯಾಮರಾದಲ್ಲಿ ದನಕಳ್ಳತನದ ದೃಶ್ಯ ಸೆರೆಯಾಗಿದೆ. ಕಾರು ಬರುತ್ತಲೇ ಆರೋಪಿಗಳು ತಮ್ಮ ವಾಹನದೊಂದಿಗೆ ಪರಾರಿಯಾಗಿದ್ದಾರೆ.
ಘಟನೆಯ ದಿನ ರಾತ್ರಿ ವಾಹನ ಸವಾರರು ತೀರ್ಥಹಳ್ಳಿಯಿಂದ ತಮ್ಮ ಮನೆಗೆ ತೆರಳುತ್ತಿದ್ದಾಗ ಗಡಿಕಲ್ ವೃತ್ತದ ಬಳಿ ರಸ್ತೆಯಲ್ಲಿ 3 ರಿಂದ 4 ದನಗಳು ನಿಂತಿದ್ದನ್ನ ಗಮನಿಸಿದ್ದಾರೆ. ಅಲ್ಲದೆ ಬಿಳಿ ಬಣ್ಣದ ಮಾರುತಿ ಸುಜುಕಿ ಎರ್ಟಿಗಾ ಕಾರಿನಲ್ಲಿ ಬಂದಿದ್ದ ದುಷ್ಕರ್ಮಿಗಳು, ಅಲ್ಲಿದ್ದ ದನಗಳ ಪೈಕಿ ಒಂದು ದನವನ್ನು ಕಾರಿನೊಳಗೆ ತುಂಬಿಕೊಳ್ಳಲು ಯತ್ನಿಸುತ್ತಿದ್ದರು. ಆಕಾಶ್ ನಾಯ್ಕ್ರ ಕಾರು ಬರುತ್ತಿರುವುದನ್ನ ನೋಡಿ ಕಳ್ಳರು ಎಸ್ಕೇಪ್ ಆಗಿದ್ದಾರೆ. ಈ ಮಧ್ಯೆ ಕಾರಿನೊಳಗೆ ಕರುವೊಂದನ್ನ ಅದಾಗಲೇ ಹೇರಿರುವವ ಬಗ್ಗೆ ಅನುಮಾನವೂ ಇದೆ.
Whatsapp : https://chat.whatsapp.com/JrsZ8He4nN600n0r3tJItz
ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಕಳ್ಳತನದ ಯತ್ನವನ್ನು ಕಣ್ಣಾರೆ ಕಂಡ ಆಕಾಶ್ರವರು ತಮ್ಮ ಕಾರಿನ ಡ್ಯಾಶ್ ಕ್ಯಾಮೆರಾದಲ್ಲಿ ದಾಖಲಾಗಿದ್ದ ವಿಡಿಯೋ ತುಣುಕನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ,. ಈ ಮಧ್ಯೆ ಪೊಲೀಸರು ಪರಿಶೀಲನೆಯಲ್ಲಿದ್ದಾರೆ.
