Burglary in Shivamogga ಶಿವಮೊಗ್ಗ : ಸಂಬಂಧಿಕರ ಮದುವೆಗೆಂದು ತೆರಳಿದ್ದ ವೇಳೆ ಕಳ್ಳರು ಮನೆಗೆ ನುಗ್ಗಿ ಒಟ್ಟು 4 ಲಕ್ಷ ರೂಪಾಯಿ ಮೌಲ್ಯದ ಬಂಗಾರವ ಹಾಗೂ ನಗದನ್ನು ಕಳ್ಳತನ ಮಾಡಿಕೊಂಡು ಹೋಗಿರುವ ಘಟನೆ ಈದ್ಗಾನಗರದ ಸೂಳೆಬೈಲಿನಲ್ಲಿ ನಡೆದಿದೆ.\
ಗಗನಕ್ಕೇರಿದ ಅಡಿಕೆ ಶಿವಮೊಗ್ಗ, ಹೊಸನಗರ, ಶಿರಸಿ, ಸಾಗರದಲ್ಲಿ ಒಳ್ಳೆಯ ರೇಟು! ದಾವಣಗೆರೆಯಲ್ಲಿ ದಾಖಲೆಯ ಓಟ
ನಗರದ ಈದ್ಗಾನಗರದ ನಿವಾಸಿಯೊಬ್ಬರು ತಮ್ಮ ಮನೆಯಲ್ಲಿಯೇ ಸಣ್ಣ ಚಿಲ್ಲರೆ ಅಂಗಡಿ ಇಟ್ಟುಕೊಂಡು ಜೀವನ ಸಾಗಿಸುತ್ತಿದ್ದರು. ಫೆಬ್ರವರಿ 12ರಂದು ಬೆಳಿಗ್ಗೆ ತಮ್ಮ ಕುಟುಂಬದೊಂದಿಗೆ ಸವಾಯಿಪಾಳ್ಯದಲ್ಲಿರುವ ಶಾದಾಬ್ ಶಾದಿ ಮಹಲ್ನಲ್ಲಿ ಆಯೋಜಿತವಾಗಿದ್ದ ಮದುವೆ ಕಾರ್ಯಕ್ರಮಕ್ಕೆ ಹೋಗಿದ್ದರು. ಈ ವೇಳೆ ಮನೆಯಲ್ಲಿ ಯಾರೂ ಇಲ್ಲದಿದ್ದನ್ನು ಗಮನಿಸಿದ ಕಳ್ಳರು ಮನೆಗೆ ನುಗ್ಗಿದ್ದಾರೆ.
ಕಾರ್ಯಕ್ರಮ ಮುಗಿಸಿ ಕುಟುಂಬಸ್ಥರು ಮನೆಗೆ ವಾಪಸ್ಸಾದಾಗ ಕಳ್ಳತನವಾಗಿರುವುದು ಬೆಳಕಿಗೆ ಬಂದಿದೆ. ಮನೆಯ ಹಿತ್ತಲ ಬಾಗಿಲು ತೆರೆದಿದ್ದು, ಬೆಡ್ರೂಂ ಹಾಗೂ ಚಿಲ್ಲರೆ ಅಂಗಡಿಯ ಮೇಲ್ಭಾಗದ ಹಂಚುಗಳನ್ನು ಕಿತ್ತಿರುವುದು ಕಂಡುಬಂದಿದೆ. ಇದರಿಂದ ಗಾಬರಿಗೊಂಡ ಮನೆಯವರು ಬೀರು ಪರಿಶೀಲಿಸಿದಾಗ ಬಂಗಾರ ಕಳುವಾಗಿರುವುದು ತಿಳಿದುಬಂದಿದೆ.
ಬೀರುವಿನಲ್ಲಿದ್ದ ಸುಮಾರು 1 ಲಕ್ಷ ರೂ. ಮೌಲ್ಯದ 10 ಗ್ರಾಂ ತೂಕದ ಚಿನ್ನದ ಓಲೆ, 1.50 ಲಕ್ಷ ರೂ. ಮೌಲ್ಯದ 15 ಗ್ರಾಂ ತೂಕದ ತಾಳಿ ಸರ ಹಾಗೂ 1 ಲಕ್ಷ ರೂ. ಮೌಲ್ಯದ 10 ಗ್ರಾಂ ಚಿನ್ನದ ಸರ ಸೇರಿದಂತೆ ಒಟ್ಟು 35 ಗ್ರಾಂ ಚಿನ್ನಾಭರಣಗಳು ಕಳುವಾಗಿದೆ. ಇದರೊಂದಿಗೆ ಮನೆಯಲ್ಲಿದ್ದ 55,000 ರೂ. ನಗದು ಹಾಗೂ ಅಂಗಡಿಯ ಡ್ರಾಯರ್ನಲ್ಲಿದ್ದ 2000 ರೂ. ಹಣವನ್ನೂ ಕಳ್ಳರು ಹೊತ್ತೊಯ್ದಿದ್ದಾರೆ. ಘಟನೆ ಹಿನ್ನೆಲೆ ತುಂಗಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ,
Burglary in Shivamogga Eidgah Nagar


