ನಮ್ಮ ಸಹ್ಯಾದ್ರಿ ನಮ್ಮ ಹೆಮ್ಮೆ 

  SHIVAMOGGA | MALENADUTODAY NEWS | ಮಲೆನಾಡು ಟುಡೆ |Nov 20, 2024 ಶಿವಮೊಗ್ಗ| ಶಿವಮೊಗ್ಗದ ಸಹ್ಯಾದ್ರಿ ವಿಜ್ಞಾನ ಕಾಲೇಜಿನ  ಹಿರಿಯ ವಿದ್ಯಾರ್ಥಿಗಳ ಸಂಘದಿಂದ  ನಮ್ಮ ಸಹ್ಯಾದ್ರಿ ನಮ್ಮ ಹೆಮ್ಮೆ ಎಂಬ ಕಾರ್ಯಕ್ರಮವನ್ನು ನವಂಬರ್ 23 ರಂದು ನಡೆಸಲಿದ್ದೇವೆ ಎಂದು ಕಾಲೇಜಿನ ಪ್ರಾಂಶುಪಾಲರಾದ ರಾಜೇಶ್ವರಿ ತಿಳಿಸಿದರು  ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ನಮ್ಮ ಕಾಲೇಜಿನಲ್ಲಿ ವ್ಯಾಸಂಗ ಮುಗಿಸಿ ಉನ್ನತ ಸ್ಥಾನಮಾನಗಳನ್ನು ಅಲಂಕರಿಸಿರುವ ಸಾಧಕರನ್ನು ಗುರುತಿಸಿ ಅವರನ್ನು ಕಾಲೇಜಿನಲ್ಲಿ ನಡೆಯುವ ವಿವಿಧ ಕಾರ್ಯಕ್ರಮಗಳಿಗೆ ಅತಿಥಿಗಳನ್ನಾಗಿ ಕರೆಸಲಾಗುತ್ತದೆ. ಹಾಗೆಯೇ … Read more

ಹೊಸ ಅಂತಾರಾಷ್ಟ್ರೀಯ ಕ್ರಿಕೆಟ್‌ ಸ್ಟೇಡಿಯಂ ನಿರ್ಮಾಣದ ಬಗ್ಗೆ ಗೃಹಸಚಿವರು ಹೇಳಿದ್ದೇನು?

SHIVAMOGGA | MALENADUTODAY NEWS | ಮಲೆನಾಡು ಟುಡೆ |Nov 20, 2024 ತುಮಕೂರು | ಜಿಲ್ಲೆಯಲ್ಲಿ ಬೆಂಗಳೂರಿನಲ್ಲಿರುವ ಚಿನ್ನಸ್ವಾಮಿ ಸ್ಟೇಡಿಯಂನ ಮಾದರಿಯ ಅಂತರಾಷ್ಟ್ರೀಯ ಮಟ್ಟದ ಕ್ರಿಕೆಟ್‌ ಸ್ಟೇಡಿಯಂ ನಿರ್ಮಾಣವಾಗಲಿದೆ ಎಂದು ಗೃಹ ಸಚಿವ ಡಾ. ಜಿ ಪರಮೇಶ್ವರ್‌ ತಿಳಿಸಿದ್ದಾರೆ. ಈ ಸ್ಟೇಡಿಯಂ ನಿರ್ಮಾಣದ ಶಂಕುಸ್ಥಾಪನೆಯನ್ನು ಡಿಸೆಂಬರ್‌ 2 ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ನೆರವೇರಿಸಲಿದ್ದಾರೆ ಎಂದು ಗೃಹಸಚಿವರು ಮಾಹಿತಿ ನೀಡಿದ್ದಾರೆ.  ಸ್ಟೇಡಿಯಂ ನಿರ್ಮಾಣಕ್ಕೆ ಜಿಲ್ಲಾಡಳಿತ ಗೊಲ್ಲಹಳ್ಳಿ ಬಳಿಯ 41 ಎಕರೆ ಪ್ರದೇಶನ್ನು ಗರುತಿಸಿ ರಾಜ್ಯ ಕ್ರಿಕೆಟ್‌ ಸಂಸ್ಥೆಗೆ ನೀಡಿದೆ. … Read more

EV ಶೋರೂಮ್‌ನಲ್ಲಿ ಬೆಂಕಿ , ಯುವತಿಯ ದುರಂತ

SHIVAMOGGA | MALENADUTODAY NEWS | ಮಲೆನಾಡು ಟುಡೆ |Nov 20, 2024 ಬೆಂಗಳೂರು | ಎಲೆಕ್ಟ್ರಿಕ್ ಶೋರೂಂ ಒಂದರಲ್ಲಿ ಕಾಣಿಸಿಕೊಂಡ ಅಗ್ನಿಆಕಸ್ಮಿಕ ಘಟನೆಯಲ್ಲಿ ಸೇಲ್ಸ್ ಗರ್ಲ್ ಒಬ್ಬರು ಸಜೀವವಾಗಿ ದಹನವಾಗಿದ್ದಾರೆ. ಪ್ರಿಯಾ (25) ಬೆಂಕಿಗೆ ಆಹುತಿಯಾದ ದುರ್ದೈವಿ ಬೆಂಗಳೂರಿನ ರಾಜ್‌ಕುಮಾರ್ ರಸ್ತೆಯಲ್ಲಿರುವ ಮೈ ಇವಿ ಎಲೆಕ್ಟ್ರಿಕ್‌ ಸ್ಕೂಟರ್ ಶೋರೂಂನಲ್ಲಿ ಈ ಅಗ್ನಿ ದುರಂತ ಸಂಭವಿಸಿದೆ.  ಘಟನೆಯಲ್ಲಿ ಎಲೆಕ್ಟ್ರಿಕ್‌ ಸ್ಕೂಟರ್‌ಗಳು ಅಗ್ನಿಗೆ ಆಹುತಿಯಾಗಿದ್ದು, ಇಡೀ ಶೋರೂಂ ಧಗಧಗಿಸಿ ಉರಿದಿದೆ. ಈ ವೇಳೆ ಶೋರೂಂನಲ್ಲಿದ್ದ ಯುವತಿ ಬೆಂಕಿಯಿಂದ ತಪ್ಪಿಸಿಕೊಳ್ಳಲಾಗದೇ ಅಲ್ಲಿಯೇ … Read more

ಎ ಆರ್ ರೆಹಮಾನ್ ಸಂಸಾರದಲ್ಲಿ ಬಿರುಕು..

SHIVAMOGGA | MALENADUTODAY NEWS | ಮಲೆನಾಡು ಟುಡೆ |Nov 20, 2024  ಜನಪ್ರಿಯ ಸಂಗೀತ ಸಂಯೋಜಕ ಎ ಆರ್ ರೆಹಮಾನ್ ದಾಂಪತ್ಯದಲ್ಲಿ ಬಿರುಕು ಮೂಡಿರುವ ಬಗ್ಗೆ ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ. ಈ ಬಗ್ಗೆ ತಮ್ಮ ಪತಿಯಿಂದ ವಿಚ್ಚೇದನ ಪಡೆಯುತ್ತಿರುವ ಬಗ್ಗೆ ಎ ಆರ್ ರೆಹಮಾನ್ ರವರ ಪತ್ನಿ ಸಾಯಿರಾ ಬಾನು ತಿಳಿಸಿದ್ದಾರೆ ಎಂದು ವರದಿಗಳಲ್ಲಿ ಉಲ್ಲೇಖಿಸಲಾಗಿದೆ.  ನಮ್ಮ ನಡುವೆ ಹಲವು ಭಿನ್ನಭಿಪ್ರಾಯಗಳು ಇರುವುದರಿಂದ ಈ ನಿರ್ಧಾರಕ್ಕೆ ಬಂದಿದ್ದೇವೆಂದು ಸಾಯಿರಾ ತಿಳಿಸಿದ್ದಾರೆ ಎನ್ನಲಾಗಿದೆ.  1995 ರಲ್ಲಿ … Read more

ರೈತರ ಸಾಲಕ್ಕೆ CIBIL SCORE ಬೇಡ | 25 ಬೇಡಿಕೆ ಮುಂದಿಟ್ಟು ಹೋರಾಟಕ್ಕೆ ಸಿದ್ದರಾದ ರೈತರು

SHIVAMOGGA | MALENADUTODAY NEWS | ಮಲೆನಾಡು ಟುಡೆ |Nov 19, 2024 ಶಿವಮೊಗ್ಗ : ರಾಜ್ಯ ಸರ್ಕಾರ ವಿದ್ಯುತ್ ಖಾಸಗೀಕರಣನ್ನು ವಿರೋಧಿಸಿ ಹಾಗೂ 25 ಬೇಡಿಕೆಗಳನ್ನು ಈಡೇರಿಸಬೇಕೆಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ನವೆಂಬರ್‌  26 ರಂದು ಬೆಳಗ್ಗೆ 10 ಗಂಟೆಗೆ ಜಿಲ್ಲಾಧಿಕಾರಿ ಕಚೇರಿ ಎದುರು ರೈತರ ಕಾರ್ಮಿಕರ ಎಚ್ಚರಿಕಾ ರ್ಯಾಲಿಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ರಾಜ್ಯಾಧ್ಯಕ್ಷ ಹೆಚ್.ಆರ್. ಬಸವರಾಜಪ್ಪ ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಾ ಅವರು ಕೇಂದ್ರ ಮತ್ತು ರಾಜ್ಯ ಸರ್ಕಾರಗಳೆರಡೂ ರೈತರ ಸಮಸ್ಯೆಗಳನ್ನು … Read more

ಕ್ರಿಕೆಟ್‌ ಟೀಂಗೆ ಸೇರಿಸಿಕೊಳ್ಳದ ನೋವು | ಅಪಾರ್ಟ್ಮೆಂಟ್‌ನಿಂದ ಬಿದ್ದು ವಿದ್ಯಾರ್ಥಿ ಸಾವು

SHIVAMOGGA | MALENADUTODAY NEWS | ಮಲೆನಾಡು ಟುಡೆ |Nov 19, 2024 ಬೆಂಗಳೂರು | ಕಾಲೇಜಿನಲ್ಲಿ ಆಯೋಜಿಸಲಾಗಿದ್ದ  ಕ್ರಿಕೆಟ್ ಟೂರ್ನಿಯಲ್ಲಿ ,  ತಂಡವೊಂದಕ್ಕೆ ತನ್ನನ್ನು ಆಯ್ಕೆ ಮಾಡಿಕೊಂಡಿಲ್ಲ ಎಂದು ಮನನೊಂದು ವಿದ್ಯಾರ್ಥಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.  ಇಲ್ಲಿನ  ಬಡಾವಣೆಯೊಂದರ 16 ವರುಷ ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈತ ಬೆಂಗಳೂರಿನ ಖಾಸಗಿ ಕಾಲೇಜ್ ಒಂದರಲ್ಲಿ ಪ್ರಥಮ ಪಿಯುಸಿ ಓದುತ್ತಿದ್ದ. ಇತ್ತೀಚೆಗೆ ಕಾಲೇಜಿನಲ್ಲಿ ನಡೆದ ಟೂರ್ನಿಯಲ್ಲಿ , ಕ್ರಿಕೆಟ್ ತಂಡಕ್ಕೆ ಆಯ್ಕೆ ಮಾಡಿರಲಿಲ್ಲ. ಇದರಿಂದಾಗಿ ಆತ ತಂದೆ ತಾಯಿಯ ಬಳಿ … Read more

ಮುಂದಿನ ವರ್ಷದ ರಥಸಪ್ತಮಿಗೆ ಕ್ರಾಂತಿವೀರರಾಗಲು ಹೊರಟ ಕೆಎಸ್‌ ಈಶ್ವರಪ್ಪ | ಹೊಸ ಅಧ್ಯಾಯ ಏನದು?

SHIVAMOGGA | MALENADUTODAY NEWS | ಮಲೆನಾಡು ಟುಡೆ |Nov 19, 2024 ಶಿವಮೊಗ್ಗ |ಮಾಜಿ ಡಿಸಿಎಂ ಕೆಎಸ್‌ ಈಶ್ವರಪ್ಪ ಮತ್ತೊಂದು ಬ್ರಿಗೇಡ್‌ ಸ್ಥಾಪನೆಗೆ ಮುಂದಾಗಿದ್ದಾರೆ. ಮುಂದಿನ ವರುಷದ ಫೆಬ್ರವರಿ 04 ರಂದು ಕ್ರಾಂತಿವೀರ ಬ್ರಿಗೇಡ್‌ ಅನ್ನು ಬಸವನ ಬಾಗೇವಾಡಿಯಲ್ಲಿ ಸಾಧು ಸಂತರ ನೇತೃತ್ವದಲ್ಲಿ ಉದ್ಘಾಟಿಸಲಿದ್ದೇವೆ ಎಂದು ಮಾಜಿ ಡಿಸಿಎಂ ಈಶ್ವರಪ್ಪನವರು ಘೋಷಿಸಿದ್ದಾರೆ. ಮುಂದಿನ ವರುಷ ರಥಸಪ್ತಮಿಯ ದಿನದಂದು ಕ್ರಾಂತಿವೀರ ಬ್ರಿಗೇಡ್‌ ನ್ನು ಬಸವಣ್ಣ ನವರ ಜನ್ಮಸ್ಥಳವಾದ ಬಸವನಬಾಗೇವಾಡಿ ಯಲ್ಲಿ ಉದ್ಘಾಟಿಸಲಾಗುವುದು. 1 ಸಾವಿರಕ್ಕೂಹೆಚ್ಚು ಸಾಧು-ಸಂತರ ಸಮ್ಮುಖದಲ್ಲಿ ಸಾಮೂಹಿಕ … Read more

ಎಲ್ಲವನ್ನೂ ಗೆದ್ದು ಬಂದ ಮೊಹಮ್ಮದ್‌ ಶಮಿಗೆ ಮತ್ತೊಂದು ಸಂಕಷ್ಟ?

SHIVAMOGGA | MALENADUTODAY NEWS | ಮಲೆನಾಡು ಟುಡೆ |‌ Nov 19, 2024 ಟೀಂ ಇಂಡಿಯಾದ ಸ್ಟಾರ್ ಬೌಲರ್ ಮೊಹಮದ್ ಶಮಿಯವರು ತಮ್ಮ ವಯಸ್ಸು ಮರೆಮಾಚಿದ ಆರೋಪವನ್ನು ಇದೀಗ ಎದುರಿಸುತ್ತಿದ್ದಾರೆ. ಈ ಸಂಬಂಧ ಅವರ ಡ್ರೈವಿಂಗ್‌ ಲೈಸೆನ್ಸ್‌ನ ಪ್ರತಿಯನ್ನ ವ್ಯಕ್ತಿಯೊಬ್ಬರು ಸೋಷಿಯಲ್ ಮೀಡಿಯಾದಲ್ಲಿ ಅಪ್‌ಲೋಡ್‌ ಮಾಡಿದ್ದು ಈ ಕುರಿತಾಗಿ BCCI ಗಮನಿಸಬೇಕು ಎಂದು ವಾದಿಸಿದ್ದಾರೆ.  ಮಹಮದ್ ಶಮಿ ಅವರದ್ದು ಎಂಬುದಾದ ಡ್ರೈವಿಂಗ್ ಲೈಸೆನ್ಸ್ ಇದೀಗ ವೈರಲ್‌ ಆಗುತ್ತಿದೆ. ವೈರಲ್‌ ಆಗುತ್ತಿರುವ ಡ್ರೈವಿಂಗ್ ಲೈಸನ್ಸ್ ಪ್ರಕಾರ ಮಹಮದ್ … Read more

ನಟ ದರ್ಶನ್‌ ನಟನೆಯ ಸಂಗೊಳ್ಳಿ ರಾಯಣ್ಣ ಚಿತ್ರ ರೀ ರಿಲೀಸ್‌

SHIVAMOGGA | MALENADUTODAY NEWS | ಮಲೆನಾಡು ಟುಡೆ |‌ Nov 19, 2024 ಸದ್ಯ ನಟ ದರ್ಶನ್‌ರ ಸಿನಿಮಾಗಳು ಬ್ಯಾಕ್‌ ಟು ಬ್ಯಾಕ್‌ ರಿರಿಲೀಸ್‌ ಆಗುತ್ತಿದೆ. ಇದೀಗ ಅದರ ಸಾಲಿಗೆ ಸಂಗೊಳ್ಳಿ ರಾಯಣ್ಣ ಸಿನಿಮಾ ಕೂಡ ಸೇರಿಕೊಂಡಿದೆ.  ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ನಟನೆಯ ನವಗ್ರಹ ಸಿನಿಮಾ ಕಳೆದ  ನವಂಬರ್‌ 8 ರಂದು ರೀರಿಲೀಸ್‌ ಆಗಿತ್ತು. ಇದೀಗ ದರ್ಶನ್‌ ನಟನೆಯ ಐತಿಹಾಸಿಕ ಚಿತ್ರವಾದ ಸಂಗೊಳ್ಳಿ ರಾಯಣ್ಣ ಚಿತ್ರ ನವೆಂಬರ್‌ 22 ರೀರೀಲೀಸ್‌ ಆಗಲಿದೆ. 12 ವರ್ಷಗಳ ಹಿಂದೆ ಸಂಗೊಳ್ಳಿ … Read more

ಕಾಶಿ ಹಾಗೂ ಅಯೋಧ್ಯೆಗೆ ಶಿವಮೊಗ್ಗದಿಂದ 1500 ಪ್ರವಾಸ | ವಿಶೇಷ ರೈಲಿನಲ್ಲಿ ಯಾನ!

SHIVAMOGGA | MALENADUTODAY NEWS | ಮಲೆನಾಡು ಟುಡೆ |Nov 20, 2024 ಶಿವಮೊಗ್ಗ | ರಾಷ್ಟ್ರ ಭಕ್ತ ಬಳಗದ ವತಿಯಿಂದ ಇದೇ ನವೆಂಬರ್‌ 23ರಂದು ಕಾಶಿ ಹಾಗೂ ಅಯೋದ್ಯೆ ಪ್ರವಾಸವನ್ನು ಕೈಗೊಳ್ಳಲಾಗಿದೆ. ಈ ಸಂಬಂಧ ಡಿಸಿಸಿ ಬ್ಯಾಂಕ್‌ನ ನಿರ್ದೇಶಕ ಮಹಾಲಿಂಗ ಶಾಸ್ತ್ರಿ ಮಾಹಿತಿ ನೀಡಿದ್ದಾರೆ.  ಶಿವಮೊಗ್ಗದ ಪತ್ರಿಕಾ ಭವನದಲ್ಲಿ  ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ನವೆಂಬರ್‌ 23 ರಂದು ನಾವು ರಾಷ್ಟ್ರ ಭಕ್ತ ಬಳಗದ ವತಿಯಿಂದ ಕಾಶಿ ಹಾಗೂ ಅಯೋಧ್ಯೆಗೆ ಪ್ರವಾಸವನ್ನು ಕೈಗೊಂಡಿದ್ದೇವೆ ಎಂದರು.  ನ.23 … Read more