SHIVAMOGGA NEWS TODAY

ಅಡಕೆ ಕ್ಯಾನ್ಸರ್ ಕಾರಕವಲ್ಲ ? ಎಂ.ಎಸ್. ರಾಮಯ್ಯ ವಿವಿ ಸಂಶೋಧನಾ ವರದಿಯಲ್ಲಿ ಏನಿದೆ. 

Prathapa thirthahalli ಅಥಾರಿಟಿ: ಮಲೆನಾಡು ಟುಡೆ ಡೆಸ್ಕ್

ಶಿವಮೊಗ್ಗ : ಅಡಕೆ ಬೆಳೆಗಾರರಿಗೆ ನೆಮ್ಮದಿ ತರುವಂತಹ ಸುದ್ದಿಯೊಂದು ವಿಧಾನ ಪರಿಷತ್ತಿನಲ್ಲಿ ಹೊರಬಿದ್ದಿದೆ. ತಂಬಾಕು ರಹಿತವಾಗಿ ಅಲ್ಪ ಪ್ರಮಾಣದಲ್ಲಿ ಅಡಕೆ ಸೇವನೆ ಮಾಡುವುದರಿಂದ ಯಾವುದೇ ಆರೋಗ್ಯದ ಹಾನಿ ಸಂಭವಿಸುವುದಿಲ್ಲ ಎಂದು ಎಂ.ಎಸ್. ರಾಮಯ್ಯ ವಿಶ್ವವಿದ್ಯಾಲಯದ ಸಂಶೋಧನಾ ವರದಿ ತಿಳಿಸಿದೆ. ಈ ಮಹತ್ವದ ಮಾಹಿತಿಯನ್ನು ಕೃಷಿ ಸಚಿವ ಚೆಲುವರಾಯಸ್ವಾಮಿ ಅವರು ಸದನಕ್ಕೆ ನೀಡಿದ್ದಾರೆ. 

ಸೈಬರ್​ ಬುಲ್ಲಿಯಿಂಗ್​ ಬಗ್ಗೆ ಶಿವಮೊಗ್ಗ ಎಸ್​ಪಿ ಪೋಸ್ಟ್! ಡಿಜಿಟಲ್ ಕಿರುಕುಳದ ಬಗ್ಗೆ ನಿಮಗೆ ಗೊತ್ತಾ!

ಅಡಕೆಯ ಮೇಲೆ ದಶಕಗಳಿಂದ ಅಂಟಿಕೊಂಡಿರುವ ಕ್ಯಾನ್ಸರ್ ಕಾರಕ ಎಂಬ ಕಳಂಕವನ್ನು ತೊಡೆದುಹಾಕಲು ಸರ್ಕಾರವು ಸುಮಾರು 31 ಲಕ್ಷ ರೂಪಾಯಿ ವೆಚ್ಚದಲ್ಲಿ ಈ ಸಂಶೋಧನೆಯನ್ನು ಕೈಗೊಂಡಿತ್ತು. ಪಾನ್ ಮಸಾಲದಂತಹ ಪದಾರ್ಥಗಳಲ್ಲಿ ಮಿತವಾಗಿ ಅಡಕೆ ಬಳಸಿದರೆ ಅದರಿಂದ ಯಾವುದೇ ಅಪಾಯವಿಲ್ಲ ಎಂದು ಪ್ರಾಥಮಿಕ ವರದಿಯು ಸ್ಪಷ್ಟಪಡಿಸಿದೆ. 

ಕೇವಲ ಸೇವನೆಯಷ್ಟೇ ಅಲ್ಲದೆ, ಅಡಕೆ ಹಾಳೆಯ ತಟ್ಟೆಗಳ ಬಳಕೆಯೂ ಸಹ ಆರೋಗ್ಯಕ್ಕೆ ಅತ್ಯಂತ ಸುರಕ್ಷಿತ ಎಂದು ಕೇರಳದ ಸಂಸ್ಥೆಯೊಂದು ನೀಡಿದ ಮಧ್ಯಂತರ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಬಿಜೆಪಿಯ ಪ್ರತಾಪ್ ಸಿಂಹ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಅಡಕೆ ಉತ್ಪನ್ನಗಳ ಬಳಕೆಯನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಸರ್ಕಾರವು ಸಕಾರಾತ್ಮಕ ಹೆಜ್ಜೆ ಇಡುತ್ತಿದೆ ಎಂದು ತಿಳಿಸಿದರು. 

ಸಂಶೋಧನೆಯ ಪೂರ್ಣ ಪ್ರಮಾಣದ ಅಂತಿಮ ವರದಿ ಶೀಘ್ರದಲ್ಲೇ ಬರಲಿದ್ದು, ಆ ಬಳಿಕ ಅಡಕೆ ಆರೋಗ್ಯಕ್ಕೆ ಹಾನಿಕಾರಕವಲ್ಲ ಎಂಬ ಬಗ್ಗೆ ಸರ್ಕಾರವೇ ಅಧಿಕೃತವಾಗಿ ವ್ಯಾಪಕ ಪ್ರಚಾರ ಕೈಗೊಳ್ಳಲಿದೆ ಎಂದು ಸಚಿವರು ಭರವಸೆ ನೀಡಿದ್ದಾರೆ. ಈ ಮೂಲಕ ಅಡಕೆ ಕೃಷಿಯನ್ನು ನೆಚ್ಚಿಕೊಂಡಿರುವ ಲಕ್ಷಾಂತರ ರೈತರ ಹಿತರಕ್ಷಣೆಗೆ ಸರ್ಕಾರ ಬದ್ಧವಾಗಿದೆ ಎಂದು ಪುನರುಚ್ಚರಿಸಿದರು.

Areca Nut is Not Harmful University Report


Areca Nut is Not Harmful University Report

Areca Nut is Not Harmful University Report

shivamogga car decor sun control house
shivamogga car decor sun control house

Related News

🔔 Breaking News Alerts

ತಾಜಾ ಸುದ್ದಿಗಳನ್ನು ಮೊದಲು ಪಡೆಯಲು ನಮ್ಮ ನೋಟಿಫಿಕೇಶನ್ ಸೇವೆಯನ್ನು ಸಬ್‌ಸ್ಕ್ರೈಬ್ ಮಾಡಿ.

END OF STORY