ಹರ್ಷನ ಹತ್ಯೆಗೆ ಒಂದು ವರ್ಷ! ವಾರ್ಷಿಕ ಪುಣ್ಯಸ್ಮರಣೆಗೆ ಆಹ್ವಾನ!

A year after Harsha's assassination, an annual commemoration programme will be held

ಹರ್ಷನ ಹತ್ಯೆಗೆ ಒಂದು ವರ್ಷ! ವಾರ್ಷಿಕ ಪುಣ್ಯಸ್ಮರಣೆಗೆ ಆಹ್ವಾನ!
ಹರ್ಷನ ಹತ್ಯೆಗೆ ಒಂದು ವರ್ಷ! ವಾರ್ಷಿಕ ಪುಣ್ಯಸ್ಮರಣೆಗೆ ಆಹ್ವಾನ!

MALENADUTODAY.COM | SHIVAMOGGA NEWS 

ಕಳೆದ ವರ್ಷ ಫೆಬ್ರವರಿ 20 ರಂದು ಭಾನುವಾರ ರಾತ್ರಿ ವೇಳೆ ಶಿವಮೊಗ್ಗದ ಭಾರತೀ ಕಾಲೋನಿ ಸಮೀಪ ಭಜರಂಗದಳದ ಕಾರ್ಯಕರ್ತ ಹಿಂದೂ ಹರ್ಷ ಎಂಬ 26 ವರ್ಷದ ಯುವಕನ ಕೊಲೆಯಾಗಿತ್ತು. ಇದೀಗ ಈ ಘಟನೆ ನಡೆದು ವರ್ಷ ತುಂಬುತ್ತಿದೆ. ಈ ಹಿನ್ನೆಲೆಯಲ್ಲಿ ಹರ್ಷನ ಕುಟುಂಬಸ್ಥರು ವಾರ್ಷಿಕ ಪುಣ್ಯ ಸ್ಮರಣೆ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ಧಾರೆ. ಅದರ ಆಹ್ವಾನ ಪತ್ರಿಕೆ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. 

SHIVAMOGGA AIRPORT ತೋರಿಸಿ 72 ಸಾವಿರ ರೂಪಾಯಿ ಗುಳುಂ! ಕೆಲಸದ ಕರೆ ನಂಬಿದ್ದಕ್ಕೆ ಮಹಾಮೋಸ ! ಏನಿದು ಫಸ್ಟ್​ ಕೇಸ್​

ದಿನಾಂಕ 9-2-2023ನೇ ಗುರುವಾರ, ಮಧ್ಯಾಹ್ನ 12:00ಕ್ಕೆ ಶ್ರದ್ಧಾಂಜಲಿ ಕಾರ್ಯಕ್ರಮವನ್ನು “ವಾಸವಿ ಕಲ್ಯಾಣ ಮಂದಿರ”, ಗಾಂಧಿ ಬಜಾರ್, ಶಿವಮೊಗ್ಗದಲ್ಲಿ ನಡೆಸಲು ತೀರ್ಮಾನಿಸಲಾಗಿದೆ. ಕಳೆದ ವರ್ಷ 2022 ರ ಫಬ್ರವರಿ 20ರ ಭಾನುವಾರ ತಡರಾತ್ರಿ ಶಿವಮೊಗ್ಗದ ಭಾರತಿ ಕಾಲೋನಿಯಲ್ಲಿ ಹರ್ಷ ಎಂಬ 26 ವರ್ಷದ ಬಜರಂಗದಳದ ಸದಸ್ಯನನ್ನು  ದುಷ್ಕರ್ಮಿಗಳ ತಂಡ ಕಾರಿನಲ್ಲಿ ಬಂದು ಕೊಲೆ ಮಾಡಿತ್ತು. ಬಳಿಕ ಶಿವಮೊಗ್ಗದಲ್ಲಿ ಸಂಘರ್ಷದ ವಾತಾವರಣ ಉಂಟಾಗಿತ್ತು. ಆನಂತರ ಪ್ರಕರಣ ಎನ್​ಐಎಗೆ ಶಿಫ್ಟ್ ಆಗಿದ್ದು, ಪ್ರಸ್ತುತ  ಕೇಸ್ ವಿಚಾರಣೆಯಲ್ಲಿದೆ.  

ಅರ್ಧಕೇಜಿಗೂ ಹೆಚ್ಚು ತೂಕದ ಅಮ್ಮನ ತಾಳಿಬೊಟ್ಟು! ಸಾಗರ ಮಾರಿಕಾಂಬೆಯ ವಿಶೇಷತೆ ಏನೇನು ಗೊತ್ತಾ? ಆಚಾರ-ವಿಚಾರಗಳ ಸ್ಪೆಷಲ್​ ರಿಪೋರ್ಟ್​

Facebook ನಲ್ಲಿ ನಮ್ಮ ಪೇಜ್​ ನೋಡಿ : Malenadutoday.com

Twitter ನಲ್ಲಿ ನಾವಿದ್ದೇವೆಫಾಲೋ ಮಾಡಿ : Malenadutoday.com

Instagram ನಲ್ಲಿ ಕ್ಲಿಕ್​ ಮಾಡಿ : Malenadutoday.com

Telegram ನಲ್ಲಿ ಸುದ್ದಿ ಪಡೆಯಲು ಲಿಂಕ್ ಒತ್ತಿ : Malenadutoday.com