SHIVAMOGGA | MALENADUTODAY NEWS | ಮಲೆನಾಡು ಟುಡೆ | Apr 1, 2025
ಶಿವಮೊಗ್ಗ | ಕಾಂಗ್ರೆಸ್ ಸರ್ಕಾರ ಅಗತ್ಯ ವಸ್ತುಗಳ ಮೇಲೆ ಮಾಡುತ್ತಿರುವ ಬೆಲೆ ಏರಿಕೆಯನ್ನು ವಿರೋದಿಸಿ ಏಪ್ರಿಲ್ 2 ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಬೃಹತ್ ಅಹೋರಾತ್ರಿ ಜನಾಕ್ರೋಶ ಪ್ರತಿಭಟನೆಯನ್ನು ಹಮ್ಮಿಕೊಂಡಿದ್ದೇವೆ ಎಂದು ಶಾಸಕ ಎಸ್ ಎನ್ ಚೆನ್ನಬಸಪ್ಪ ತಿಳಿಸಿದರು.
ಮಂಗಳವಾರ ನಗರದ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ತನ್ನ ದುರ್ಬುದ್ಧಿ ಮುಂದುವರೆಸುವ ಪ್ರಯತ್ನ ಮಾಡುತ್ತಿದೆ. ಆರಂಭದಿಂದಲೂ ಭ್ರಷ್ಟಾಚಾರಕ್ಕೆ ಹೆಸರಾಗಿರುವ ಕಾಂಗ್ರೆಸ್ ಇಂದು ವಸ್ತುಗಳ ಬೆಲೆಯನ್ನು ಏರಿಕೆ ಮಾಡುವ ಮುಖಾಂತರ ಬೆಲೆ ಏರಿಕೆಗೆ ಹೆಸರಾಗಿದೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗ ಆಹಾರ ಪದಾರ್ಥಗಳ ಬೆಲೆ ಗಗನಕ್ಕೆ ಏರುತ್ತಲೇ ಇರುತ್ತವೆ. ಆ ಹಣವನ್ನು ರೈತರಿಗೆ ನೀಡುತ್ತೇವೆ ಎಂದು ಹೇಳಿ ನಾಗರೀಕರಿಗೆ ದ್ರೋಹ ಮಾಡುವ ಪ್ರಯತ್ನ ಮಾಡುತ್ತಿದೆ. 2 ವರ್ಷದಲ್ಲಿ ಹಾಲಿನ ದರ 9 ರೂಪಾಯಿಯಷ್ಟು ಏರಿಸಿದ್ದಾರೆ. 9 ರೂಪಾಯಿ ಏರಿಸುವುದರ ಜೊತೆಗೆ ಈಬಾರಿ ಇನ್ನೊಂದು ಕೆಲಸಕ್ಕೆ ಕೈ ಹಾಕಿದ್ದಾರೆ. ಅದೇನೆಂದರೆ ಒಂದು ಲೀಟರ್ ಹಾಲಿನ ಜೊತೆಗೆ 50 ಎಂ ಎಲ್ ಹಾಲನ್ನು ಕಟ್ ಮಾಡಿದ್ದಾರೆ. ಇದಕ್ಕೆ ಕಾಂಗ್ರೆಸ್ ನ ದುರ್ಬುದ್ಧಿ ಎಂದು ಕರೆಯದೆ ಮತ್ತೇನೆಂದು ಕರೆಯಬೇಕು ಎಂದರು.

ಹಿಂದೆ ಕಾಂಗ್ರೆಸ್ ಸರ್ಕಾರ ಅಲ್ಕೋಹಾಲ್ ನಿಂದ ಸರ್ಕಾರ ನಡೆಸುತ್ತಿತ್ತು ಇಂದು ಹಾಲಿನ ಬೆಲೆ ಏರಿಕೆ ಮುಕಾಂತಾರ ಸರ್ಕಾರವನ್ನು ನಡೆಸುತ್ತಿದೆ. ಕಾಂಗ್ರೆಸ್ ಸರ್ಕಾರದಲ್ಲಿ ಆಸ್ತಿ ನೋಂದಣಿ ಶುಲ್ಕ 600 ಪರ್ಸೆಂಟ್ ಹೆಚ್ಚಾಗಿದೆ. ಆಸ್ತಿ ತೆರಿಗೆ ನೀರಿನ ಶುಲ್ಕ ಸೇರಿದಂತೆ ಇದರೆ ವಸ್ತುಗಳ ಬೆಲೆಯನ್ನು ಹೆಚ್ಚಿಸಿದೆ.ಹೀಗೆ ಹತ್ತು ಹಲವು ಮುಖಗಳಲ್ಲಿ ಕಾಂಗ್ರೆಸ್ ಸರ್ಕಾರ ಬೆಲೆ ಏರಿಸುವ ಮೂಲಕ ಜನರ ಜೇಬಿಗೆ ಕನ್ನ ಹಾಕುತ್ತಿದೆ. ಅಗತ್ಯ ವಸ್ತುಗಳ ಬಗ್ಗೆ ಕಾಂಗ್ರೆಸ್ ಕೇರ್ ಲೆಸ್ ಮಾಡುತ್ತಿದೆ. ಎಲ್ಲವನ್ನೂ ಉಚಿತ ಕೊಡುವ ಮನೋಭಾವ ಹೊಂದಿರುವ ಸರ್ಕಾರ ಇಂದು ಹೀಗೇಕೆ ಮಾಡುತ್ತಿದೆ ಎಂದು ಪ್ರಶ್ನಿಸಿದರು
ನಿಮಗೆ 136 ಸೀಟ್ ಗಳನ್ನು ಕೊಟ್ಟಿರುವುದು ಬೆಲೆ ಏರಿಕೆ ಮಾಡಲಿ ಎಂದಲ್ಲ. ನೀವಿಂದು ಜನರ ಜೇಬಿಗೆ ಕತ್ತರಿ ಹಾಕಿ ಅದನ್ನು ಜನರಿಗೆ ಕೊಡುತ್ತಿದ್ದೀರ. ಈ ಹಿನ್ನಲೆ ನಾಗರೀಕರ ಪರವಾಗಿ ಬೆಲೆ ಏರಿಕೆ ವಿರುದ್ಧ ಹೋರಾಟ ಮಾಡಲು ತೀರ್ಮಾನಿಸಿದ್ದೇವೆ. ನಾಳೆ ಅಹೋರಾತ್ರಿ ಜನಾಕ್ರೋಶ ಧರಣಿಯನ್ನು ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ಹಮ್ಮಿಕೊಂಡಿದ್ದೇವೆ.ಈ ಹೋರಾಟಕ್ಕೆ ಶಿವಮೊಗ್ಗದಿಂದ ಪ್ರಮುಖವಾಗಿ 400 ಜನ ಕಾರ್ಯಕರ್ತರು ಹೋಗಲಿದ್ದೇವೆ. ನಂತರ ಏಪ್ರಿಲ್ 7 ರಂದು ಮೈಸೂರಿನಲ್ಲಿ ಬಹುದೊಡ್ಡ ಹೋರಾಟ ನಡೆಸಲು ತೀರ್ಮಾನಿಸಿದ್ದೇವೆ. ಪ್ರಹ್ಲಾದ್ ಜೋಷಿ ಆ ಹೋರಾಟಕ್ಕೆ ಚಾಲನೆ ನೀಡುತ್ತಾರೆ.ಎಗ್ಗಿಲ್ಲದೆ ರಾಜ್ಯ ಸರ್ಕಾರ ಅದಿಕಾರ ನಡೆಸುತ್ತಿದೆ. ಅದಕ್ಕೆ ಕಡಿವಾಣ ಹಾಕಲು ಇಂತಹ ಹೋರಾಟಗಳು ಅನಿವಾರ್ಯವಾಗಿದೆ ಎಂದರು.
SUMMARY | Mla SN Chennabasappa said that a massive protest will be held at Freedom Park in Bengaluru.
KEYWORDS | SN Chennabasappa, protest, Freedom Park, Bengaluru, bjp,