SHIVAMOGGA | MALENADUTODAY NEWS | ಮಲೆನಾಡು ಟುಡೆ | Jan 17, 2025
ಮಾಜಿ ಮುಖ್ಯಮಂತ್ರಿ ಕೆ ಎಸ್ ಈಶ್ವರಪ್ಪ ಹಾಗೂ ಶಾಸಕ ಕೆ ಎಸ್ ಚೆನ್ನಬಸಪ್ಪನವರೇ ನೀವು ಇದುವರೆಗೂ ಗೋಶಾಲೆಗೆ ಎಷ್ಟು ಹಣವನ್ನು ನೀಡಿದ್ದೀರಿ ಎಂಬುದನ್ನು ದಾಖಲೆ ಸಮೇತ ಮಾಹಿತಿ ನೀಡಿ ಎಂದು ಮಾಜಿ ಕಾರ್ಪೊರೇಟರ್ ಹೆಚ್ ಸಿ ಯೋಗೇಶ್ ವಾಗ್ದಾಳಿ ನಡೆಸಿದರು.
ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಹಸುವಿನ ಕೆಚ್ಚಲು ಕೊಯ್ದಿರುವ ಘಟನೆ ಬಗ್ಗೆ ವಿರೋಧ ಪಕ್ಷದವರು ಸಾಕಷ್ಟು ಹೇಳಿಕೆಯನ್ನು ನೀಡುತ್ತಿದ್ದಾರೆ. ಅಷ್ಟೇ ಅಲ್ಲದೆ ಇದರ ನಡುವೆ ಶಿವಮೊಗ್ಗ ಶಾಸಕರಾದ ಎಸ್ಎನ್ ಚನ್ನಬಸಪ್ಪನವರು ಕಾಂಗ್ರೆಸ್ ವಿರುದ್ಧ ನೀಚ ಪದಗಳನ್ನು ಬಳಸಿ ಆರೋಪಿಸುತ್ತಿದ್ದಾರೆ. ಆದ್ರೆ ಇಷ್ಟು ಮಾತನಾಡುವ ಚನ್ನಬಸಪ್ಪನವರು ನೀವು ಇದುವರೆಗೆ ಪಶುಸಂಗೋಪನೆ ಇಲಾಖೆಗೆ ಎಷ್ಟು ಸಲ ಭೇಟಿ ನೀಡಿದ್ದೀರಾ ಎಂಬುದನ್ನು ನಮಗೆ ಮಾಹಿತಿ ನೀಡಿ. ಪ್ರೆಸ್ ಮೀಟ್ಗೆ ಬಂದು ಇಲ್ಲ ಸಲ್ಲದ ಆರೋಪ ಮಾಡುವುದಲ್ಲ. ಫೆಬ್ರವರಿ 28 ರಂದು ಜಾನುವಾರು ಗಣತಿಯನ್ನು ಮಾಡಿ ನಿಮಗೆ ಎಲ್ಲಾ ರಿಪೋರ್ಟ್ ಅನ್ನು ಕೊಡುತ್ತೇವೆ. ಈ ಹಿಂದೆ ನಿಮ್ಮ ಸರ್ಕಾರ ಶಾಂತಿನಗರದಲ್ಲಿ ಗೋಶಾಲೆಯನ್ನು ತೆರೆಯುತ್ತೇವೆ ಎಂದು ಗುದ್ದಲಿ ಪೂಜೆ ಮಾಡಿತ್ತು. ಆದರೆ 50 ಕೋಟಿ ರೂಪಾಯಿ ವೆಚ್ಚದ ಗೋಶಾಲೆ ಇದುವರೆಗೆ ನಿರ್ಮಾಣ ಆಗಲಿಲ್ಲ. ಆದರೆ ಈಗ ನೀವು ನಮ್ಮ ಸರ್ಕಾರದ ವಿರುದ್ಧ ಇಲ್ಲ ಸಲ್ಲದ ಭಾಷೆಯನ್ನೆಲ್ಲ ಬಳಸಿದ್ದೀರಿ. ಆದ್ರೆ ನಾವು ಆ ರೀತಿಯ ಭಾಷೆಯನ್ನು ಬಳಸಲ್ಲ ಎಂದರು.

SUMMARY |Former Chief Minister K S Eshwarappa and MLA K S Chennabasappa, please give details of how much money you have given to the gaushala so far
KEYWORDS | K S Eshwarappa, Chennabasappa, gaushala,