KARNATAKA NEWS/ ONLINE / Malenadu today/ Jun 16, 2023 SHIVAMOGGA NEWS
ಶಿವಮೊಗ್ಗ/ ಮೊನ್ನೆ ರಾತ್ರಿ 10 ಗಂಟೆ ಸುಮಾರಿಗೆ ಇಲಿಯಾಜ್ ನಗರದಲ್ಲಿ ನಡೆದಿದ್ದ ಕೊಲೆ ಪ್ರಕರಣ ಸಂಬಂಧ ದೊಡ್ಡಪೇಟೆ ಪೊಲೀಸ್ ಸ್ಟೇಷನ್ನಲ್ಲಿ ಎಫ್ಐಆರ್ ದಾಖಲಾಗಿದೆ. ಕೊಲೆಯಾದ ಆಸೀಫ್ನ ಸಹೋದರ ನೀಡಿದ ದೂರನ್ನ ಆಧರಿಸಿ ಎಫ್ಐಆರ್ ದಾಖಲಾಗಿದ್ದು, ಅದರಲ್ಲಿ ತನ್ನ ತಂಗಿ ವಿಚಾರಕ್ಕಾಗಿ ಆರೋಪಿ ಜಭಿವುಲ್ಲಾ ಆಸೀಫ್ನನ್ನ ಕೊಲೆ ಮಾಡಿದ್ಧಾನೆಂದು ಆರೋಪಿಸಲಾಗಿದೆ.

ಎಫ್ಐಆರ್ನಲ್ಲಿ ಏನಿದೆ?
ಸೈಯ್ಯದ್ ಆಸೀಫ್ ಇಲಿಯಾಸ್ ನಗರದ ನಿವಾಸಿ ಮಹಿಳೆಯೊಬ್ಬರ ಜೊತೆ ಫೋನ್ನಲ್ಲಿ ಮಾತನಾಡುತ್ತಿದ್ದನಂತೆ. ಇಬ್ಬರು ಜೊತೆಯಲ್ಲಿ ಓಡಾಡುತ್ತಿದ್ದರಂತೆ. ಇವರಿಬ್ಬರ ನಡುವಿನ ರಿಲೇಶನ್ ಬಗ್ಗೆ ಆಕೆಯ ಸಹೋದರ ಜಬಿ ಆಕ್ಷೇಪ ವ್ಯಕ್ತಪಡಿಸಿದ್ಧಾನೆ. ತನ್ನ ತಂಗಿ ವಿಚಾರಕ್ಕೆ ಬರಬೇಡ . ಬಂದರೆ ಒಂದು ಗತಿ ಕಾಣಿಸುತ್ತೇನೆ ಎಂದು ಎಚ್ಚರಿಕೆ ನೀಡಿದ್ದಾನೆ. ಈ ವೇಳೆ ದೂರುದಾರರು ಸಹ ತಮ್ಮ ತಮ್ಮನಿಗೆ ಬುದ್ದಿ ಹೇಳುವುದಾಗಿ ಹೇಳಿ ಜಗಳ ಬಿಡಿಸಿದ್ದರು. ಈ ಮಧ್ಯೆ ಆಸಿಫ್ ಮಹಿಳೆಯ ಜೊತೆಗೆ ಸಂಪರ್ಕ ಮುಂದುವರಿಸಿದ್ದಾನೆ. ಇದರಿಂದ ಕೆರಳಿದ ಜಬಿ, 14/06/2023 ರಂದು ರಾತ್ರಿ ಆಸೀಫ್ಗೆ ಮಚ್ಚಿನಿಂದ ಹೊಡೆದು ಕೊಲೆ ಮಾಡಿದ್ದಾನೆ.

ಘಟನೆ ನಡೆದಿದ್ದೇಗೆ?
ರಾತ್ರಿ 10 ಗಂಟೆ ಸುಮಾರಿಗೆ ಮನೆಯಿಂದ ಹೊರಗೆ ಹೋಗಿದ್ದ ಆಸೀಫ್ ಅಲ್ಲಿಯೇ ಇದ್ದ ಮಸೀದಿ ಬಳಿ ಟೀ ಕುಡಿಯುತ್ತಾ ನಿಂತುಕೊಂಡಿದ್ದ. ಈ ವೇಳೆ ಅಲ್ಲಿಗೆ ಬಂದ ಜಭಿ ಮತ್ತು ಮೂವರು, ಆಸೀಫ್ನನ್ನ ಮಾತನಾಡಬೇಕು ಬಾ ಎಂದು ಕರೆದಿದ್ದಾರೆ. ಆಸೀಫ್ ತಾನೆಲ್ಲಿಗೂ ಬರುವುದಿಲ್ಲ ಎಂದಿದ್ದಾನೆ. ಈ ಮಧ್ಯೆ ಜಭಿ ಬೈಕ್ನಲ್ಲಿದ್ದ ಮಚ್ಚನ್ನ ತಂದು ಆಸೀಫ್ನ ತಲೆಯ ಹಿಂಭಾಗಕ್ಕೆ ಮನಸ್ಸೋ ಇಚ್ಚೆ ಹಲ್ಲೆ ಮಾಡಿದ್ದಾನೆ. ಘಟನೆಯಲ್ಲಿ ಆಸೀಫ್ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ. ಸದ್ಯ ಘಟನೆ ಸಂಬಂಧ ದೊಡ್ಡಪೇಟೆ ಪೊಲೀಸರು ಜಭಿಯನ್ನ ಬಂಧಿಸಿದ್ದು, ವಿಚಾರಣೆ ಮುಂದುವರಿಸಿದ್ದಾರೆ.
ಮೆಗ್ಗಾನ್ ಆಸ್ಪತ್ರೆಗೆ ಹೋಗಿ ಸಿಟಿ ಸ್ಕ್ಯಾನ್ ರಿಪೋರ್ಟ್ ತಗೆದುಕೊಂಡು ವಾಪಸ್ ಬಂದ ವ್ಯಕ್ತಿಗೆ ಎದುರಾಗಿತ್ತು ಶಾಕ್!
ಸಿಟಿ ಸ್ಕ್ಯಾನ್ ರಿಪೋರ್ಟ್ ತರಲು ಮೆಗ್ಗಾನ್ ಆಸ್ಪತ್ರೆಗೆ ಹೋಗಿ ವಾಪಸ್ ಬರುವ ಹೊತ್ತಿಗೆ ಬೈಕ್ ಕಳುವಾದ ಘಟನೆ ಶಿವಮೊಗ್ಗದ ದೊಡ್ಡಪೇಟೆ ಪೊಲೀಸ್ ಸ್ಟೇಷನ್ ವ್ಯಾಪ್ತಿಯಲ್ಲಿ ನಡೆದಿದೆ.
ಇಲ್ಲಿನ ಕುವೆಂಪು ರಸ್ತೆಯ ಬಳಿ ಇರುವ ಯುನಿಟಿ ಆಸ್ಪತ್ರೆ ಎದುರು ತಮ್ಮ ಸ್ಪ್ಲೆಂಡರ್ ಬೈಕ್ ನಿಲ್ಲಿಸಿ ರಾಮಚಂದ್ರ ಎಂಬವರು ಮೆಗ್ಗಾನ್ ಆಸ್ಪತ್ರೆಗೆ ಸಿಟಿ ಸ್ಕ್ಯಾನ್ ರಿಪೋರ್ಟ್ ತರಲು ಹೋಗಿದ್ದರು. ಅಲ್ಲಿಂದ ಕೆಲ ಹೊತ್ತಿನಲ್ಲಿ ವಾಪಸ್ ಬರುವಾಗ ಅವರ ಸ್ಪ್ಲೆಂಡರ್ ಬೈಕ್ನ್ನ ಕಳ್ಳರು ಕದ್ದು ಪರಾರಿಯಾಗಿದ್ದಾರೆ. ಈ ಸಂಬಂಧ ಎಲ್ಲೆಡೆ ಹುಡುಕಾಡಿ, ಕೊನೆ ಪೊಲೀಸರಿಗೆ ಈ ಪೋರ್ಟ್ಲ್ ಮೂಲಕ ದೂರು ದಾಖಲಿಸಿದ್ದಾರೆ.