ಮೇ 31ಕ್ಕೆ ಶಾಲೆ ಶುರು! ಶಿವಮೊಗ್ಗಕ್ಕೆ ಬರುತ್ತಾರೆ ನೂತನ ಸಚಿವರು ! ಮಧು ಬಂಗಾರಪ್ಪರಿಗೆ ಅದ್ದೂರಿ ಸ್ವಾಗತ ಕೋರಲು ಸಿದ್ದತೆ ಶುರು!

This Article Written by / Malenadu Today / ಮೇ 29, 2023

KARNATAKA NEWS/ ONLINE / Malenadu today/ May 29, 2023 SHIVAMOGGA NEWS

ಶಿವಮೊಗ್ಗ/ ಸಚಿವರಾದ ಬಳಿಕ ಇದೇ ಮೊದಲ ಭಾರಿಗೆ ಶಿವಮೊಗ್ಗಕ್ಕೆ ಮಧು ಬಂಗಾರಪ್ಪ ಆಗಮಿಸಲಿದ್ದಾರೆ. ಈ ಹಿನ್ನೆಲೆ ಅವರ ಸ್ವಾಗತಕ್ಕೆ ಭರ್ಜರಿ ಸಿದ್ದತೆ ಮಾಡಿಕೊಳ್ಳುತ್ತಿದೆ ಸ್ಥಳೀಯ ಕಾಂಗ್ರೆಸ್​. 

ಮೇ.31 ರಂದು ನೂತನ ಶಿಕ್ಷಣ ಸಚಿವ ಮಧು ಬಂಗಾರಪ್ಪ ಶಿವಮೊಗ್ಗಕ್ಕೆ ಆಗಮಿಸುತ್ತಿದ್ದು, ಅವರಿಗೆ ಸ್ವಾಗತ ಹಾಗೂ ಅಭಿನಂದನೆ ಕೋರಲು ಜಿಲ್ಲಾ ಕಾಂಗ್ರೆಸ್ ಮುಂದಾಗಿದ್ದು, ಈ ನಿಟ್ಟಿನಲ್ಲಿ ನಿಗದಿತ ಕಾರ್ಯಕ್ರಮಗಳ ಬಗ್ಗೆ  ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹೆಚ್.ಎಸ್.ಸುಂದರೇಶ್  ಮಾಹಿತಿ ನೀಡಿದ್ಧಾರೆ. 

ಮಾ.31 ರಂದು ಬೆಳಿಗ್ಗೆ 9 ರಂದು  ಮಧು ಬಂಗಾರಪ್ಪ,  ಶಿವಮೊಗ್ಗದ ಮಲವಗೊಪ್ಪ ಶಾಲೆ ಭೇಟಿ ನೀಡಲಿದ್ದಾರೆ.ಅಂದಿನಿಂದ ಶಾಲೆಗಳು ಓಪನ್ ಆಗುವುದರಿಂದ ಸಿಹಿ ಹಂಚಿ, ಶಾಲೆಗಳಿಗೆ ಮಕ್ಕಳನ್ನ ಸಚಿವರು ಸ್ವಾಗತಿಸಲಿದ್ದಾರೆ. 

ಆನಂತರ ಎಂಆರ್ ಎಸ್ ನಿಂದ ಮೆರವಣಿಗೆಯಲ್ಲಿ ಸಚಿವರು ನಗರಕ್ಕೆ ಬರಲಿದ್ದಾರೆ. ವಿದ್ಯಾನಗರದಲ್ಲಿ ದುರ್ಗಮ್ಮನ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಕಾಂಗ್ರೆಸ್ ಮುಖಂಡರು, ಮಧು ಬಂಗಾರಪ್ಪರನ್ನ ಅಭಿನಂದನಾ ಕಾರ್ಯಕ್ರಮಕ್ಕೆ ಕರೆತರಲಿದ್ದಾರೆ.  ಮೆರವಣಿಗೆ ಕಾಂಗ್ರೆಸ್ ಜಿಲ್ಲಾ ಕಚೇರಿಗೆ ಆಗಮಿಸಲಿರುವ ಸಚಿವರಿಗೆ ಜಿಲ್ಲೆಯ ಹಿರಿಯ ನಾಯಕರು ಶುಭಕೋರಲಿದ್ದಾರೆ. 

Malenadu Today Shivamogga

ಇನ್ನೂ ಶಾಲೆಗಳ ಆರಂಭದ ಕುರಿತಾಗಿ ತಮ್ಮ ಫೇಸ್​ಬುಕ್​ ಖಾತೆಯಲ್ಲಿ ಬರೆದುಕೊಂಡಿರುವ ಮಧು ಬಂಗಾರಪ್ಪ  ಮೇ 31 ರಂದು ಮಕ್ಕಳಿಗೆ ಸಿಹಿ ವಿತರಣೆ ಮಾಡುವ ಮೂಲಕ ಶಾಲೆಗಳಿಗೆ ಬರ ಮಾಡಿಕೊಳ್ಳಲಾಗುವುದು ಎಂದು ತಿಳಿಸಿದ್ಧಾರೆ.  .

‘ಶಾಲೆಗಳ ಆರಂಭಕ್ಕೆ ಸಂಬಂಧಿಸಿದ ಪೂರಕ ಸಿದ್ದತೆಗಳು ಇಂದಿನಿಂದ ಆರಂಭವಾಗಲಿದೆ. ಶಾಲೆಯತ್ತ ಹೆಜ್ಜೆ ಹಾಕುತ್ತಿರುವ ಎಲ್ಲ ಮಕ್ಕಳಿಗೆ ಶುಭ ಕೋರುತ್ತೇನೆ.. ಆರೋಗ್ಯಕರ ವಾತಾವರಣದಲ್ಲಿ ಖುಷಿಯ ಕಲಿಕೆ ನಿಮ್ಮದಾಗಲಿ. ಮಾದರಿ ಶಿಕ್ಷಣ ವ್ಯವಸ್ಥೆಗೆ ಶಿಕ್ಷಕರ, ಪೋಷಕರ ಹಾಗೂ ಕನ್ನಡಿಗರ ಸಹಕಾರವಿರಲಿ’ ಎಂದು ಮಧು ಬಂಗಾರಪ್ಪ ಅವರು ತಿಳಿಸಿದ್ದಾರೆ.

SHIVAMOGGA

ಮುಂದಿನ ಸುದ್ದಿ ಒದಿ

Leave a Comment