SHIVAMOGGA | MALENADUTODAY NEWS | ಮಲೆನಾಡು ಟುಡೆ
Oct 14, 2024 | ಚಾರ್ ಧಾಮ್ ಯಾತ್ರೆಗೆ ಕರೆದುಕೊಂಡು ಹೋಗುವುದಾಗಿ ಹೇಳಿ ವ್ಯಕ್ತಿಯೊಬ್ಬರಿಗೆ 36 ಸಾವಿರ ರೂಪಾಯಿ ವಂಚಿಸಲಾಗಿದೆ. ಬೆಂಗಳೂರು ಮೂಲದ ವ್ಯಕ್ತಿ ವಿರುದ್ದ ಈ ಸಂಬಂಧ ಶಿವಮೊಗ್ಗ ಕೋಟೆ ಪೊಲೀಸ್ ಠಾಣೆಯಲ್ಲಿ FIR ದಾಖಲಾಗಿದೆ.
ಬೆಂಗಳೂರಿನ ನಿವಾಸಿಯೊಬ್ಬರು ಚಾರ್ ಧಾಮ್ ಯಾತ್ರೆ ಆಯೋಜಿಸುವುದಾಗಿ ಹೇಳಿದ್ದರಂತೆ. ಅದನ್ನ ನಂಬಿದ ಶಿವಮೊಗ್ಗದ ನಿವಾಸಿಯೊಬ್ಬರು ಈ ಬಗ್ಗೆ ವಿಚಾರಿಸಿದ್ದಾರೆ. ಈ ವೇಳೆ ಬೆಂಗಳೂರು ಮೂಲದ ಆರೋಪಿತರು, ತಮ್ಮ ಹಿಂದಿನ ಯಾತ್ರೆ ಆಯೋಜನೆಗೆ ಸಂಬಂಧಿಸಿದ ಫೋಟೋಗಳನ್ನ ನೀಡಿದ್ದಾರೆ.
ಆನಂತರ ಛಾರ್ ಧಾಮ್ ಯಾತ್ರೆ ಗಾಗಿ ಒಟ್ಟು 36 ಸಾವಿರ ರೂಪಾಯಿಯನ್ನ ಶಿವಮೊಗ್ಗದ ನಿವಾಸಿ ನೀಡಿದ್ದಾರೆ. ಹೀಗೆ ಹಣ ಪಡೆದ ಬಳಿಕ ಆಯೋಜಕ ಎಂದು ಹೇಳಿಕೊಂಡ ವ್ಯಕ್ತಿ ಯಾತ್ರೆಯನ್ನೆ ನಡೆಸಲಿಲ್ಲ.
ಸಾಲದ್ದಕ್ಕೆ ಶಿವಮೊಗ್ಗದ ನಿವಾಸಿಯ ಫೋನ್ ಸಹ ಸ್ವೀಕರಿಸಲಿಲ್ಲ. ಹೀಗಾಗಿ ಅನುಮಾನಗೊಂಡು ಶಿವಮೊಗ್ಗದ ಹಿರಿಯರು ಪೊಲೀಸರಿಗೆ ದೂರು ನೀಡಿದ್ದಾರೆ. ಸದ್ಯ ಪ್ರಕರಣ ದಾಖಲಿಸಿರುವ ಪೊಲೀಸರು, ಆರೋಪಿಯ ಸುಳಿವಿಗಾಗಿ ಹುಡುಕಾಡುತ್ತಿದ್ದಾರೆ

SUMMARY | man was duped of Rs 36,000 on the pretext of taking him on the Char Dham Yatra. An FIR has been registered against a Bengaluru-based man at Shivamogga kote police station in this regard.
KEYWORDS | man was duped , Char Dham Yatra , FIR has been registered, Bengaluru-based man, at Shivamogga, kote police station