SHIVAMOGGA | MALENADUTODAY NEWS | ಮಲೆನಾಡು ಟುಡೆ
Sep 21, 2024
ಆನವಟ್ಟಿ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಕಳವು
ಈದ್ ಮಿಲಾದ್ ಕಾರ್ಯಕ್ರಮ ಮುಗಿಸಿ, ಸಂಬಂಧಿಕರ ಮನೆಯಲ್ಲಿ ಮಲಗಿದ್ದ ನಿವಾಸಿಯೊಬ್ಬರು ತಮ್ಮ ಮನೆಗೆ ವಾಪಸ್ ಬರುವಷ್ಟರಲ್ಲಿ ಅವರ ಮನೆಯಲ್ಲಿ ಕಳ್ಳತನವಾದ ಘಟನೆ ಆನವಟ್ಟಿ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ನಡೆದಿದೆ. ಇಲ್ಲಿನ ನಿವಾಸಿಯೊಬ್ಬರು ಕಳೆದ 17 ರಂದು ಈದ್ ಮಿಲಾದ್ ಕಾರ್ಯಕ್ರಮಕ್ಕೆ ತೆರಳಿದ್ದರು, ತಡರಾತ್ರಿ ಸಂಬಂಧಿಕರ ಮನೆಯಲ್ಲಿ ಮಲಗಿದ್ದರು. ಮರುದಿನ ಮನೆಗೆ ಬಂದು ನೋಡಿದಾಗ, ಮನೆ ಬಾಗಿಲ ಬೀಗ ಒಡೆದಿರುವುದು ಕಾಣಿಸಿದೆ. ಆ ಬಳಿಕ ಪರಿಶೀಲಿಸಿದಾಗ ಸುಮಾರು 17 ಗ್ರಾಮ್ ಬಂಗಾರದ ಒಡವೆಗಳನ್ನ ಕಳ್ಳತನವಾಗಿರುವುದು ಗೊತ್ತಾಗಿದೆ. ಈ ಸಂಬಂಧ ಆನವಟ್ಟಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಎಣ್ಣೆಗಾಗಿ ತಾಯಿಗೆ ಕುಕ್ಕರ್, ಪ್ಯಾನ್, ಮಚ್ಚಿನಿಂದ ಮಗನ ಹಲ್ಲೆ
ಕುಡಿಯಲು ದುಡ್ಡು ಕೊಡು ಎಂದು ತಾಯಿಗೆ ಹೆದರಿಸಿ ಬೆದರಿಸಿ ಹಲ್ಲೆ ಮಾಡಿದ ಸಂಬಂಧ ಭದ್ರಾವತಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಇಲ್ಲಿನ ನಿವಾಸಿ ಮನೆಯಲ್ಲಿದ್ದಾಗ ದೊಡ್ಡ ಮಗ ಕುಡಿಯಲು ಐನೂರು ರೂಪಾಯಿ ಕೇಳಿದ್ದಾನೆ. ಇದಕ್ಕೆ ಇಲ್ಲ ಎಂದ ತಾಯಿ 200 ರೂಪಾಯಿ ಅಷ್ಟೆ ಇದೆ ಎಂದು ಕೊಟ್ಟಿದ್ದಾರೆ. ಆ ಬಳಿಕ ಮತ್ತೆ ಕುಡಿದು ಬಂದ ಮಗ ತಾಯಿಗೆ ಇನ್ನೂ ಹಣ ಕೊಡು ಎಂದು ಪೀಡಿಸಿದ್ದಲ್ಲದೆ ಪ್ಯಾನು, ಕುಕ್ಕರ್ ಹಾಗೂ ಮಚ್ಚಿನಿಂದ ಹಲ್ಲೆ ಮಾಡಿದ್ದಾನೆ. ಬಳಿಕ ಕಿರಿಮಗ ಬಂದು ತಾಯಿಯನ್ನ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಿದ್ದಾರೆ.
ಹಿಂದೂ ಮಹಾಸಭಾ ಮೆರವಣಿಗೆ ಮುಗಿಸಿ ಬರುವಷ್ಟರಲ್ಲಿ ಬೈಕ್ ಕಳವು
ಕಳೆದ 15 ನೇ ತಾರೀಖು ಭದ್ರಾವತಿ ಹಿಂದೂ ಮಹಾಸಭಾ ಮೆರವಣಿಗೆಯಲ್ಲಿ ಪಾಲ್ಗೊಳ್ಳಲು, ಇಲ್ಲಿನ ಗಾಂಧಿ ಸರ್ಕಲ್ ಬಳಿ ಬರುವ ಗಾಂಧಿ ಪಾರ್ಕ್ ಬಳಿ ಬೈಕ್ ನಿಲ್ಲಿಸಿ ಹೋಗಿದ್ದ ವ್ಯಕ್ತಿ ವಾಪಸ್ ಬರುವಷ್ಟರಲ್ಲಿ ಅವರ ಬೈಕ್ ಕಳುವಾದ ಘಟನೆ ಬಗ್ಗೆ ಭದ್ರಾವತಿ ಹೊಸಮನೆ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ. ಮೆರವಣಿಗೆಯಲ್ಲಿ ಪಾಲ್ಗೊಂಡು ವಾಪಸ್ ಬಂದ ಬೈಕ್ ಕಳುವಾಗಿರುವುದು ಗೊತ್ತಾಗಿ ಎಲ್ಲಡೆ ಹುಡುಕಿದ್ದಾರೆ. ಆದರೂ ಬೈಕ್ ಪತ್ತೆಯಾಗದ ಕಾರಣ ಪೊಲೀಸರಿಗೆ ದೂರು ನೀಡಿದ್ದಾರೆ.

naga yakshi mata | ಸಾಮಾನ್ಯ ಸಾಧುವಾಗಿದ್ದು ಹೇಗೆ? ಶಿವಮೊಗ್ಗದ ನಿಗೂಢ ಅವಧೂತ ! JP ಬರೆಯುತ್ತಾರೆ
ನಿಮ್ಮ ವಾಟ್ಸಾಪ್ನಲ್ಲಿ ನೋಡಿ, ಜಸ್ಟ್ ಒಂದು ಫಾಲೋ ಕೊಡಿ