Shimoga ಶಿವಮೊಗ್ಗದ ಅನೇಕ ಕಡೆ ಟ್ರಾಫಿಕ್ ಪೊಲೀಸರು ಫುಟ್ಪಾತ್ ತೆರವುಗೊಳಿಸುವ ಕಾರ್ಯವನ್ನು ಭರದಿಂದ ನಡೆಸುತ್ತಿದ್ದಾರೆ. ಆದರೆ, ಇದರ ನಡುವೆ ನಗರದ ಜೈಲ್ ಸರ್ಕಲ್ ಟ್ರಾಫಿಕ್ ಸಿಗ್ನಲ್ ಬಳಿ ಇರುವ ಜಾಹೀರಾತು ಫಲಕವೊಂದು ಪಾದಚಾರಿಗಳಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.
ಶಿವಮೊಗ್ಗ: ಕಳೆದ 6 ತಿಂಗಳಲ್ಲಿ ಪೊಲೀಸ್ ಇಲಾಖೆ ವಶಪಡಿಸಿಕೊಂಡ ಗಾಂಜಾ ಎಷ್ಟು ಕೆ ಜಿ ಗೊತ್ತಾ ?
ಜೈಲ್ ಸರ್ಕಲ್ನ ಸಿಗ್ನಲ್ ಬಳಿ ಅಡಿಕೆ ದಬ್ಬೆಗಳು ಟ್ರಾಫಿಕ್ ಸಿಗ್ನಲ್ನ ಕಂಬ ಹಾಗೂ ವಿದ್ಯುತ್ ಕಂಬಗಳನ್ನು ಬಳಸಿಕೊಂಡು ಬೃಹತ್ ಗಾತ್ರದ ಜಾಹೀರಾತು ಬೋರ್ಡ್ ಒಂದನ್ನು ನಿರ್ಮಿಸಲಾಗಿದೆ. ಈ ಬೋರ್ಡ್ನಲ್ಲಿ ರಾಜಕೀಯ ವ್ಯಕ್ತಿಗಳ ಹುಟ್ಟುಹಬ್ಬ ಸೇರಿದಂತೆ ಇನ್ನಿತರೆ ವಿಷಯಗಳಿಗೆ ಸಂಬಂಧಿಸಿದ ಜಾಹೀರಾತುಗಳನ್ನು ಹಾಕಲಾಗುತ್ತದೆ. ಆದರೆ, ಈ ಜಾಹೀರಾತು ಬೋರ್ಡ್ ಈಗ ಫುಟ್ಪಾತ್ ಅನ್ನು ಆವರಿಸಿಕೊಂಡಿದೆ.
ಫುಟ್ಪಾತ್ಗೆ ಚಾಚಿಕೊಂಡಿರುವ ಈ ಬೋರ್ಡ್ ಪಾದಚಾರಿಗಳಿಗೆ ಸಾಕಷ್ಟು ತೊಂದರೆಯನ್ನು ಉಂಟುಮಾಡುತ್ತಿದೆ. ಗಮನಿಸದೆ ಆ ಫುಟ್ಪಾತ್ ಮೇಲೆ ನಡೆದುಕೊಂಡು ಹೋದರೆ, ಚಾಚಿಕೊಂಡಿರುವ ಮರದ ದಬ್ಬೆಗಳು ತಾಗಿ ಅನಾಹುತಗಳು ಸಂಭವಿಸುವ ಸಾಧ್ಯತೆಯಿದೆ.
ಆದ್ದರಿಂದ, ಇತ್ತೀಚೆಗೆ ಫುಟ್ಪಾತ್ ಒತ್ತುವರಿಗಳನ್ನು ತೆರವುಗೊಳಿಸುತ್ತಿರುವ ಟ್ರಾಫಿಕ್ ಪೊಲೀಸರು, ಈ ಜಾಹೀರಾತು ಫಲಕ ಆಕ್ರಮಿಸಿಕೊಂಡಿರುವ ಜಾಗವನ್ನು ತೆರವುಗೊಳಿಸುವ ಮೂಲಕ ಪಾದಚಾರಿಗಳಿಗೆ ಅನುವು ಮಾಡಿಕೊಡಬೇಕು ಎಂಬುದು ಸಾರ್ವಜನಿಕರ ಒತ್ತಾಯವಾಗಿದೆ.
