ಭದ್ರಾವತಿ : ತಂದೆ, ತಾಯಿ ನಡುವೆ ಜಗಳ ನಡೆಯುತ್ತಿದ್ದು ತಂದೆ ತಾಯಿಗೆ ತೊಂದರೆ ನೀಡುತ್ತಿದ್ದಾರೆ ಎಂದು ಆರೋಪಿಸಿ ಮಗನೊಬ್ಬ 112 ಪೊಲೀಸರಿಗೆ ಪೋನ್ ಮಾಡಿದ ಘಟನೆ ಭದ್ರಾವತಿ ನ್ಯೂಟೌನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಶಿವಮೊಗ್ಗ : ಮಹಿಷಿ ಉತ್ತರಾದಿ ಮಠದಲ್ಲಿ ₹1 ಕೋಟಿ ಮೌಲ್ಯದ ಚಿನ್ನ ಕಣ್ಮರೆ! ನಡೆದಿದ್ದು?
ಘಟನೆ ವಿವರ
ಭದ್ರಾವತಿ ನ್ಯೂಟೌನ್ ಪೊಲೀಸ್ ಠಾಣಾ ವ್ಯಾಪ್ತಿಯಿಂದ 112 ಪೊಲೀಸರಿಗೆ ಪೋನ್ ಕಾಲ್ ಬಂದಿತ್ತು. ಅದರಲ್ಲ ಮಗನೊಬ್ಬ ನನ್ನ ತಂದೆ ತಾಯಿ ನಡುವೆ ಜಗಳ ನಡೆಯುತ್ತಿದೆ, ನನ್ನ ತಂದೆ ತಾಯಿಗೆ ತೊಂದರೆ ನೀಡುತ್ತಿದ್ದಾರೆ ಎಂದು ಆರೋಪಿಸಿ ಸ್ಥಳಕ್ಕಾಗಮಿಸುವಂತೆ ಕೇಳಿದ್ದಾಣೆ.
ವಿಷಯ ತಿಳಿದ ಕೂಡಲೇ 112 ಸಿಬ್ಬಂದಿಗಳು ಸ್ಥಳಕ್ಕಾಗಮಿಸಿದ್ದಾರೆ. ಆದರೆ 112 ಪೊಲೀಸ್ ವಾಹನವನ್ನು ಗಮನಿಸಿ ಕಿರುಕುಳ ನೀಡುತ್ತಿದ್ದ ತಂದೆ ಸ್ಥಳದಿಂದ ಪರಾರಿಯಾಗಿದ್ದಾನೆ. ಆದ್ದರಿಂದಾಗಿ ಇನ್ನೇನಾದರೂ ಆತ ತೊಂದರೆ ನೀಡಿದರೆ ಪೊಲೀಸ್ ಠಾಣೆಗೆ ಆಗಮಿಸಿ ದೂರು ನೀಡುವಂತೆ ಮನೆಯವರಿಗೆ ಸಿಬ್ಬಂದಿಗಳು ಸೂಚಿಸಿದ್ದಾರೆ,
