ಕುಸ್ತಿ ಚಾಂಪಿಯನ್‌ಶಿಫ್‌ನಲ್ಲಿ ಶಿವಮೊಗ್ಗದ ಇಬ್ಬರು ಕುಸ್ತಿಪಟುಗಳಿಗೆ ಬಂಗಾರ ಪದಕ

Published: 08 ಜೂನ್ 2026, 12:10 ಅಪರಾಹ್ನ • 1 min read

ಶಿವಮೊಗ್ಗ : ಪುದುಚೆರಿಯಲ್ಲಿ ಮೇ 16 ಮತ್ತು 17 ರಂದು ನಡೆದ 15 ವರ್ಷದೊಳಗಿನ ದಕ್ಷಿಣ ಭಾರತ ಕುಸ್ತಿ ಚಾಂಪಿಯನ್‌ಶಿಫ್‌ನಲ್ಲಿ ಶಿವಮೊಗ್ಗ ಜಿಲ್ಲಾ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಕ್ರೀಡಾಶಾಲೆಯ ಇಬ್ಬರು ಕ್ರೀಡಾಪಟುಗಳು ಬಂಗಾರದ ಪದಕಗಳನ್ನು ಗೆದ್ದಿದ್ದಾರೆ.  

ಶಿವಮೊಗ್ಗ ಜಿಲ್ಲಾ ನ್ಯಾಯಾಧೀಶರ ಡಿಪಿ ಬಳಸಿ ವಂಚಿಸಲು ಯತ್ನ: ದೂರು ದಾಖಲು 

ಅನಿಲ್‌ಕುಮಾರ್ ಸೌಧಿ ಫ್ರೀಸ್ಟೈಲ್-41 ಕೆ.ಜಿ.ಯಲ್ಲಿ ಮತ್ತು ಮನೋಜ್ ಭಜಂತ್ರಿ ಗ್ರೀಕೋ ರೋಮನ್ -52 ಕೆ.ಜಿ. ಕುಸ್ತಿಯಲ್ಲಿ ಭಾಗವಹಿಸಿ ಬಂಗಾರ ಪದಕ ವಿಜೇತರಾಗಿದ್ದಾರೆ. ಈ ಕ್ರೀಡಾಪಟುಗಳು ಇಲಾಖೆಯ ಕ್ರೀಡಾ ವಸತಿ ನಿಲಯದಲ್ಲಿ ತರಬೇತಿಯನ್ನು ಪಡೆಯುತ್ತಿದ್ದು, ವಿಜೇತರಿಗೆ ಇಲಾಖೆಯ ಸಹಾಯಕ ನಿರ್ದೇಶಕರಾದ ರೇಖ್ಯಾ ನಾಯ್ಕ್, ಕುಸ್ತಿ ತರಬೇತುದಾರರಾದ ರಾಜಪ್ಪ ಎಂ. ಫಳಕೆ ಮತ್ತು ಸಂಜಯ್ ಈ. ಹಾಗೂ ಸಿಬ್ಬಂದಿ ವರ್ಗದವರು ಶುಭ ಹಾರೈಸಿದ್ದಾರೆ.

Shivamogga Wrestlers Win South India Gold

Related News

🔔 Breaking News Alerts

ತಾಜಾ ಸುದ್ದಿಗಳನ್ನು ಮೊದಲು ಪಡೆಯಲು ನಮ್ಮ ನೋಟಿಫಿಕೇಶನ್ ಸೇವೆಯನ್ನು ಸಬ್‌ಸ್ಕ್ರೈಬ್ ಮಾಡಿ.

END OF STORY

Prathapa thirthahalli

Senior Journalist | Malenadu Today
✓ Verified Journalist