ತಂದೆ ವಿರುದ್ದವೇ ಪೊಲೀಸರಿಗೆ ಪೋನ್​ ಮಾಡಿದ ಮಗ, ಏನಿದು ವಿಚಾರ 

ಹಂಚಿಕೊಳ್ಳಿ
WhatsApp Facebook X Telegram
Bhadravathi
Bhadravathi

Bhadravathi ಭದ್ರಾವತಿ: ತಂದೆಯ ಪ್ರತಿದಿನದ ಮದ್ಯಪಾನದ ಗಲಾಟೆಯಿಂದ ಬೇಸತ್ತ ಮಗನೊಬ್ಬ, ಕೊನೆಗೆ ತಂದೆಯ ವಿರುದ್ಧವೇ ನೇರವಾಗಿ ಪೊಲೀಸ್ ಇಲಾಖೆಯ ತುರ್ತು ಸಹಾಯವಾಣಿಗೆ ಕರೆ ಮಾಡಿ ದೂರು ನೀಡಿರುವ ಘಟನೆ ಭದ್ರಾವತಿ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. 

ಶಿವಮೊಗ್ಗ: ಸಂಸದ ಬಿ.ವೈ. ರಾಘವೇಂದ್ರ ನಿವಾಸಕ್ಕೆ ಯುವ ಕಾಂಗ್ರೆಸ್​ ಕಾರ್ಯರ್ತರು ಮುತ್ತಿಗೆ ಯತ್ನ, ಕಾರಣವೇನು

ಮದ್ಯದ ಅಮಲಿನಲ್ಲಿ ತಂದೆಯು ಮನೆಯ ಸದಸ್ಯರೊಂದಿಗೆ ಗಲಾಟೆ ಮಾಡುತ್ತಿದ್ದರು. ಇದರಿಂದ ಪರಿಸ್ಥಿತಿ ಕೈಮೀರಿದಾಗ, ದೂರುದಾರರಾದ ಮಗನು ತಕ್ಷಣವೇ ಸರ್ಕಾರದ ತುರ್ತು ಸ್ಪಂದನಾ ಸಹಾಯವಾಣಿ ಸಂಖ್ಯೆ 112 (ERSS) ಗೆ ಕರೆ ಮಾಡಿ ಮನೆಯಲ್ಲಿ ನಡೆಯುತ್ತಿದ್ದ ರಂಪಾಟದ ಬಗ್ಗೆ ಪೊಲೀಸರಿಗೆಮಾಹಿತಿ ನೀಡಿದ್ದಾರೆ.

ತಕ್ಷಣವೇ ಕಾರ್ಯಪ್ರವೃತ್ತರಾದ ಭದ್ರಾವತಿ ಪೊಲೀಸ್ ಠಾಣೆಯ ತುರ್ತು ಸ್ಪಂದನಾ ವಾಹನ (ERV) ಸಿಬ್ಬಂದಿಗಳು ಗಲಾಟೆ ನಡೆಯುತ್ತಿದ್ದ ಸ್ಥಳಕ್ಕೆ ಧಾವಿಸಿದ್ದಾರೆ. ಮನೆಯಲ್ಲಿ ಮದ್ಯಪಾನ ಮಾಡಿ ಸಾರ್ವಜನಿಕ ಶಾಂತಿ ಹಾಗೂ ಕುಟುಂಬದ ನೆಮ್ಮದಿಗೆ ಭಂಗ ತರುತ್ತಿದ್ದ ತಂದೆಗೆ, ಇನ್ನೊಮ್ಮೆ ಇಂತಹ ವರ್ತನೆ ಮರುಕಳಿಸಿದರೆ ಕಠಿಣ ಕಾನೂನು ಕ್ರಮ ಎದುರಿಸಬೇಕಾಗುತ್ತದೆ ಎಂದು ಕಡಕ್ ಎಚ್ಚರಿಕೆ ನೀಡಿ ಪರಿಸ್ಥಿತಿಯನ್ನು ತಿಳಿಗೊಳಿಸಿದ್ದಾರೆ.

Bhadravathi Son Calls 112 Police Against dad

ಹಂಚಿಕೊಳ್ಳಿ
WhatsApp Facebook X Telegram
Prathapa thirthahalli
ಲೇಖಕರ ಬಗ್ಗೆ

Prathapa thirthahalli

Malenadu Today Contributor