ಪರಾಭವ ನಾಮ ಸಂವತ್ಸರದ ಉತ್ತರಾಯಣದ ವಸಂತ ಋತು, ವೈಶಾಖ ಮಾಸ ಶುಕ್ಲ ಪಕ್ಷದ ಪಂಚಮಿ ತಿಥಿ ಬೆಳಿಗ್ಗೆ 6.11 ರವರೆಗೆ ಇರಲಿದ್ದು, ತದನಂತರ ಷಷ್ಠಿ ತಿಥಿ ರಾತ್ರಿ 3.54 ರವರೆಗೆ ಮುಂದುವರಿಯಲಿದೆ. ಆರಿದ್ರ ನಕ್ಷತ್ರ ರಾತ್ರಿ 3.07 ರವರೆಗೆ ವ್ಯಾಪಿಸಿದ್ದು, ಆ ಬಳಿಕ ಪುನರ್ವಸು ನಕ್ಷತ್ರ ಆರಂಭವಾಗಲಿದೆ. ಮಧ್ಯಾಹ್ನ 12.00 ರಿಂದ 1.30 ರವರೆಗೆ ರಾಹುಕಾಲ ಹಾಗೂ ಬೆಳಿಗ್ಗೆ 7.30 ರಿಂದ 9.00 ರವರೆಗೆ ಯಮಗಂಡ ಕಾಲ ಇರುತ್ತದೆ.
ಮೊದಲ ನಾಲ್ಕು ರಾಶಿಗಳ ಇಂದಿನ ಪಂಚಾಂಗ ಮತ್ತು ರಾಶಿ ಭವಿಷ್ಯ
ಮೇಷ / ಮಂಗಳ ಕಾರ್ಯ. ಹಣಕಾಸಿನ ಸ್ಥಿತಿಗತಿಯು ಭರವಸೆದಾಯಕ. ನೆರವು ಪ್ರಾಪ್ತವಾಗಲಿದೆ. ಕೈಗೊಂಡ ಕೆಲಸಕಾರ್ಯಗಳಲ್ಲಿ ಯಶಸ್ಸು , ಉದ್ಯೋಗ, ವಾಣಿಜ್ಯ ವಹಿವಾಟು ಚುರುಕಿನಿಂದ ಸಾಗಲಿವೆ.
ವೃಷಭ / ಸಾಲಕ್ಕಾಗಿ ಪ್ರಯತ್ನ, ಸಣ್ಣಪುಟ್ಟ ತಡೆ ಎದುರಾಗಲಿವೆ. ಒತ್ತಡದ ಸನ್ನಿವೇಶಗಳು ಸೃಷ್ಟಿಯಾಗಲಿವೆ. ಧಾರ್ಮಿಕ ಕ್ಷೇತ್ರಗಳಿಗೆ ಭೇಟಿ, ಉದ್ಯೋಗ ಹಾಗೂ ವ್ಯಾಪಾರ ಕ್ಷೇತ್ರದಲ್ಲಿ ಧನಲಾಭ .
ಮಿಥುನ / ಶುಭ ಸಮಾರಂಭಗಳಲ್ಲಿ ಪಾಲ್ಗೊಳ್ಳಲಿದ್ದಾರೆ. ಕೆಲಸಕ್ಕೆ ತಕ್ಕ ಮನ್ನಣೆ ದೊರೆಯಲಿದೆ. ವ್ಯವಹಾರಗಳಲ್ಲಿ ಜಯ ಸಿಗಲಿದೆ. ಸ್ಥಿರಾಸ್ತಿಗೆ ಸಂಬಂಧಿಸಿದ ವ್ಯಾಜ್ಯ ಬಗೆಹರಿಯಲಿವೆ. ಕೆಲಸಗಳು ನಿಗದಿತ ಸಮಯಕ್ಕೆ ಪೂರ್ಣಗೊಳ್ಳಲಿವೆ.
ಕರ್ಕಾಟಕ / ಕೌಟುಂಬಿಕ ಜವಾಬ್ದಾರಿ ಹೆಚ್ಚಾಗಲಿವೆ. ಕೆಲಸದಲ್ಲಿ ಆತುರ ಪ್ರವೃತ್ತಿ ಕಂಡುಬರಲಿದೆ. ಹಣಕಾಸಿನ ಖರ್ಚು ಹೆಚ್ಚಾಗಲಿದ್ದು, ದೈಹಿಕ ಶ್ರಮ ಅಧಿಕವಾಗಲಿದೆ. ಅನಾರೋಗ್ಯದ ಉದ್ಯೋಗ ವ್ಯವಹಾರದಲ್ಲಿ ಧನಲಾಭ
ಅನಾರೋಗ್ಯ, ಖರ್ಚು , ಹೊಸ ಸಮಾಚಾರ
ಸಿಂಹ / ಉದ್ಯೋಗದ ಹುಡುಕಾಟದ ಪ್ರಯತ್ನಕ್ಕೆ ಸಕಾರಾತ್ಮಕ ಫಲ ಸಿಗಲಿದೆ. ಬಾಲ್ಯದ ಸ್ನೇಹಿತರನ್ನು ಭೇಟಿಯಾಗುವ ಸಂಭವ, ಉದ್ಯೋಗ ಹಾಗೂ ವ್ಯಾಪಾರ ರಂಗದಲ್ಲಿ ಪೂರಕ ವಾತಾವರಣವಿರಲಿದೆ
ಕನ್ಯಾ / ಕೆಲಸ ಸಂಪೂರ್ಣಗೊಳ್ಳಲಿವೆ. ಸಮಾಜದಲ್ಲಿ ಘನತೆ ಹೆಚ್ಚಾಗಲಿದೆ. ಮನೆ ಮತ್ತು ವಾಹನ ಖರೀದಿಸುವ ಯೋಗವಿದೆ. ಉದ್ಯೋಗ ಹಾಗೂ ವ್ಯಾಪಾರದಲ್ಲಿ ಉತ್ಸಾಹದಿಂದ ಮುಂದುವರಿಯಲಿದ್ದಾರೆ.
ತುಲಾ / ಮನೆ ಮತ್ತು ಹೊರಗೆ ಮಾನಸಿಕ ಒತ್ತಡ, ಆರ್ಥಿಕ ನಷ್ಟ, ವಾಗ್ವಾದ ಉಂಟಾಗಲಿವೆ. ಆರೋಗ್ಯದ ಬಗ್ಗೆ ಗಮನಹರಿಸುವುದು ಅಗತ್ಯ. ವ್ಯಾಪಾರ ಹಾಗೂ ಉದ್ಯೋಗದಲ್ಲಿ ಈದಿನ ಆಸಕ್ತಿ ಕಡಿಮೆ
ವೃಶ್ಚಿಕ / ಸಣ್ಣಪುಟ್ಟ ಕಲಹ . ಹಣ ವೆಚ್ಚ, ಹೆಚ್ಚು ಶ್ರಮ . ಸಂಬಂಧಿಕರಿಂದ ಒತ್ತಡ ಸನ್ನಿವೇಶ ನಿರ್ಮಾಣವಾಗಲಿವೆ. ಉದ್ಯೋಗ ಮತ್ತು ವ್ಯಾಪಾರದ ಗತಿ ಕೊಂಚ ನಿಧಾನವಾಗಲಿದೆ.
ಈ ದಿನ ಆರ್ಥಿಕ ಸ್ಥಿತಿ ಉತ್ತಮ
ಧನುಸ್ಸು / ಕೆಲಸದ ಪ್ರಯತ್ನ ಯಶಸ್ವಿಯಾಗಲಿವೆ. ಆರ್ಥಿಕ ಸ್ಥಿತಿ ಉತ್ತಮಗೊಳ್ಳಲಿದೆ. ಉದ್ಯೋಗ ವ್ಯವಹಾರಗಳಲ್ಲಿ ಅಭಿವೃದ್ಧಿ ಕಂಡುಬರಲಿದೆ. ಆರೋಗ್ಯ ಜಾಗ್ರತೆ
ಮಕರ /ವ್ಯವಹಾರಸಕಾರಾತ್ಮಕವಾಗಿ ಸಾಗಲಿವೆ. ನೆಂಟರ ಭೇಟಿ. ಮನರಂಜನೆ ಹಾಗೂ ಔತಣಕೂಟಗಳಲ್ಲಿ ಭಾಗಿಯಾಗಲಿದ್ದಾರೆ. ಆಸ್ತಿ ಪ್ರಾಪ್ತಿಯ ಯೋಗವಿದೆ. ಉದ್ಯೋಗ ಮತ್ತು ವ್ಯಾಪಾರದಲ್ಲಿ ಪ್ರಗತಿಯತ್ತ ಹೆಜ್ಜೆ ಹಾಕಲಿದ್ದಾರೆ.
ಕುಂಭ / ಹಣಕಾಸಿನ ವಹಿವಾಟುಗಳಿಗೆ ಪೂರಕ ವಾತಾವರಣ ಇರುವುದಿಲ್ಲ. ಕೆಲಸಗಳಲ್ಲಿ ವಿಳಂಬ ಸ್ನೇಹಿತರು ಮತ್ತು ಬಂಧುಗಳೊಂದಿಗೆ ಮನಸ್ತಾಪ. ಉದ್ಯೋಗ, ವ್ಯವಹಾರದಲ್ಲಿ ಈ ದಿನ ನಿಧಾನ
ಮೀನ / ಜವಾಬ್ದಾರಿಗಳ ಹೊರೆ ಇರಲಿದೆ. ಆರ್ಥಿಕ ವಹಿವಾಟು ಸಾಧಾರಣವಾಗಿರಲಿವೆ. ಹಣದ ಖರ್ಚು ಉಂಟಾಗಲಿದೆ. ಮನೆಯವರೊಂದಿಗೆ ಸಣ್ಣಮಟ್ಟದ ಭಿನ್ನಾಭಿಪ್ರಾಯ ಮೂಡಲಿವೆ. ಉದ್ಯೋಗ, ವ್ಯಾಪಾರ ಕ್ಷೇತ್ರದಲ್ಲಿ ಕೆಲವು ಬದಲಾವಣೆ ಸಂಭವಿಸಲಿವೆ.

ನಮ್ಮ ಮಲೆನಾಡು ಟುಡೆಯ ವಿಡಿಯೋಗಳನ್ನು ನೀವಿಲ್ಲಿ ನೋಡಬಹುದು: https://www.youtube.com/shorts/x8I63rpLvyw
