ಕಂಡವರ ತೋಟದಲ್ಲಿ ಎಣ್ಣೆ ಪಾರ್ಟಿ! ಏಳನೀರು ಕಿತ್ತಿದ್ದನ್ನ ಪ್ರಶ್ನಿಸಿದ್ದಕ್ಕೆ ಬಿಯರ್​ ಬಾಟ್ಲಿಯಿಂದ ಹಲ್ಲೆ

ಮಲೆನಾಡು ಟುಡೆ ಸುದ್ದಿ / ಭದ್ರಾವತಿ / ತೋಟಕ್ಕೆ ನುಗ್ಗಿ ಎಳೆನೀರು ಕೀಳುತ್ತಿದ್ದ ಯುವಕರ ಗುಂಪೊಂದನ್ನು ಪ್ರಶ್ನಿಸಿದ ರೈತನ ಮೇಲೆ ಬಿಯರ್ ಬಾಟಲಿಯಿಂದ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಭದ್ರಾವತಿ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ವರದಿಯಾಗಿದೆ. 

 ಭದ್ರಾವತಿ ಗ್ರಾಮಾಂತರ ಪೊಲೀಸ್ ಸ್ಟೆಷನ್​ ವ್ಯಾಪ್ತಿಯ ನಿವಾಸಿ ಕೃಷ್ಣಪ್ಪ ಎಂಬವರು ಘಟನೆಯಲ್ಲಿ ಗಾಯಗೊಂಡಿದ್ದು,  ಹಲವರ ವಿರುದ್ಧ ಈ ಸಂಬಂಧ ಎಫ್​ಐಆರ್​ ದಾಖಲಾಗಿದೆ. 

Farmer Assaulted with Beer Bottle in Bhadravathi ತೋಟದಲ್ಲಿ ಎಳೆನೀರು ಕದ್ದದ್ದನ್ನು ಪ್ರಶ್ನಿಸಿದ ರೈತನ ಮೇಲೆ ಬಿಯರ್ ಬಾಟಲಿಯಿಂದ ಮಾರಣಾಂತಿಕ ಹಲ್ಲೆ
Farmer Assaulted with Beer Bottle in Bhadravathi ತೋಟದಲ್ಲಿ ಎಳೆನೀರು ಕದ್ದದ್ದನ್ನು ಪ್ರಶ್ನಿಸಿದ ರೈತನ ಮೇಲೆ ಬಿಯರ್ ಬಾಟಲಿಯಿಂದ ಮಾರಣಾಂತಿಕ ಹಲ್ಲೆ

ಮಾರ್ಚ್ 01, 2026 ರಂದು ಸಂಜೆ 06:30 ರ ಸುಮಾರಿಗೆ ಕೃಷ್ಣಪ್ಪರ ತೆಂಗಿನ ತೋಟದಲ್ಲಿ 10 ರಿಂದ 15 ಯುವಕರು, ಮದ್ಯಪಾನ ಮಾಡಿದ್ದಾರೆ. ಈ ಬಗ್ಗೆ ತಿಳಿದು, ಸ್ಥಳಕ್ಕೆ ಬಂದಾಗ, ಯುವಕರು ಮರ ಹತ್ತಿ ಎಳನೀರು ಕೀಳುತ್ತಿರುವುದು ಕಾಣಿಸಿದೆ. ಇದನ್ನ ಪ್ರಶ್ನಿಸಿದ್ದಕ್ಕೆ ಆರೋಪಿಗಳು ಕೃಷ್ಣಪ್ಪರ ಮೇಲೆ ಬಿಯರ್ ಬಾಟಲಿಯಿಂದ ಹಲ್ಲೆ ನಡೆಸಿ ನಿಂದಿಸಿ ಜೀವ ಬೆದರಿಕೆ ಹಾಕಿದ್ದಾರೆ. 

ಮೂವರು ಯುವಕರು ತಮ್ಮ ಕೈಯಲ್ಲಿದ್ದ ಬಿಯರ್ ಬಾಟಲಿಗಳಿಂದ ಕೃಷ್ಣಪ್ಪ ಅವರ ತಲೆ ಹಾಗೂ ಮುಖಕ್ಕೆ ತೀವ್ರವಾಗಿ ಹೊಡೆದಿದ್ದಾರೆ ಎಂದು ಎಫ್​ಐಆರ್​ ನಲ್ಲಿ ದಾಖಲಾಗಿದೆ. ಗಾಯಗೊಂಡ ಕೃಷ್ಣಪ್ಪ ಕೂಗಿದ ಬಳಿಕ, ಸ್ಥಳಕ್ಕೆ ಗ್ರಾಮಸ್ಥರು ಓಡಿ ಬಂದಿದ್ದಾರೆ.

ಆನಂತರ ಆರೋಪಿಗಳು , ತಾವು ತಂದಿದ್ದ ವೆಹಿಕಲ್​ಗಳನ್ನ ಬಿಟ್ಟು ಅಲ್ಲಿಂದ ಪರಾರಿಯಾಗಿದ್ದಾರೆ. ಈ ಸಂಬಂಧ  ಭದ್ರಾವತಿ ಗ್ರಾಮಾಂತರ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

Farmer Assaulted with Beer Bottle in Bhadravathi ತೋಟದಲ್ಲಿ ಎಳೆನೀರು ಕದ್ದದ್ದನ್ನು ಪ್ರಶ್ನಿಸಿದ ರೈತನ ಮೇಲೆ ಬಿಯರ್ ಬಾಟಲಿಯಿಂದ ಮಾರಣಾಂತಿಕ ಹಲ್ಲೆ
Farmer Assaulted with Beer Bottle in Bhadravathi ತೋಟದಲ್ಲಿ ಎಳೆನೀರು ಕದ್ದದ್ದನ್ನು ಪ್ರಶ್ನಿಸಿದ ರೈತನ ಮೇಲೆ ಬಿಯರ್ ಬಾಟಲಿಯಿಂದ ಮಾರಣಾಂತಿಕ ಹಲ್ಲೆ

ಭದ್ರಾವತಿ ಶಿವಮೊಗ್ಗ ಸಾಗರ, ಇವತ್ತಿನ ಕ್ರೈಂ ಸುದ್ದಿ!

ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ದ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಸುದ್ದಿಗಳಿಂದ ಸ್ತಳೀಯ ವಿಶೇಷ ವಿಡಿಯೋ ಸುದ್ದಿಗಳನ್ನು ನೀವು ನೋಡಬಹುದು…ಇಲ್ಲಿದೆ ಅವುಗಳ ಲಿಂಕ್  Facebook whatsapp  , whatsapp chanel  instagram,  youtube,  telegram , ನಮ್ಮದು ಅಧಿಕೃತವಾದ ಮತ್ತು ಉತ್ಪ್ರೇಕ್ಷೆಗಳಲ್ಲಿದ ನೈಜ ಸುದ್ದಿಯ ಸಂಸ್ಥೆ. ನಮ್ಮ ಬಗ್ಗೆ  google business, ನಲ್ಲಿ ಮಾಹಿತಿ ಪಡೆಯಬಹುದು. ಅಲ್ಲದೆ   malenadu today epaper malenadutoday web ನಲ್ಲಿ ಆಯಾ ದಿನದ ಈ ಪೇಪರ್​ಗಳನ್ನು ಕ್ಲಿಕ್ ಮಾಡಿ ಓದಬಹುದು.

ಸುದ್ದಿ ಟೈಟಲ್: Farmer Assaulted with Beer Bottle in Bhadravathi ತೋಟದಲ್ಲಿ ಎಳೆನೀರು ಕದ್ದದ್ದನ್ನು ಪ್ರಶ್ನಿಸಿದ ರೈತನ ಮೇಲೆ ಬಿಯರ್ ಬಾಟಲಿಯಿಂದ ಮಾರಣಾಂತಿಕ ಹಲ್ಲೆ