ಶಿವಮೊಗ್ಗ: ಪಾರ್ಟಿ ವೇಳೆ ಸ್ನೇಹಿತರ ನಡುವೆ ಮಾರಾಮಾರಿ, ಚಾಕು ಇರಿತಕ್ಕೊಳಗಾಗಿದ್ದ ವ್ಯಕ್ತಿ ಚಿಕಿತ್ಸೆ ಫಲಿಸದೇ ಸಾವು!

ಶಿವಮೊಗ್ಗ: ಫೆ 19 ರಂದು  ನಗರದ ಬೆಕ್ಕಿನ ಕಲ್ಮಠದ ಬಳಿ  ಸ್ನೇಹಿತರ ನಡುವೆ ನಡೆದ ಗಲಾಟೆ ಇದೀಗ ಕೊಲೆಯಲ್ಲಿ ಅಂತ್ಯವಾಗಿದೆ. ಪಾರ್ಟಿ ಮಾಡುವ ಸಮಯದಲ್ಲಿ ಉಂಟಾದ ಜಗಳದಿಂದ ಸ್ನೇಹಿತನೇ ಚಾಕುವಿನಿಂದ ಇರಿದ ಪರಿಣಾಮ, ಗಂಭೀರವಾಗಿ ಗಾಯಗೊಂಡಿದ್ದ ವ್ಯಕ್ತಿಯೊಬ್ಬರು ಶನಿವಾರ ಮೆಗ್ಗಾನ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. 

ಶಿವಮೊಗ್ಗದಲ್ಲಿ ರಾಷ್ಟ್ರ ಮಟ್ಟದ ಟಗರುಗಳ ಭರ್ಜರಿ  ಕಾಳಗ: ಹೇಗಿತ್ತು ಗೊತ್ತಾ..?

ಮೃತರನ್ನು ಇಮಾಮ್ ಬಾಡ ನಿವಾಸಿ ತೌಫಿಕ್ (40) ಎಂದು ಗುರುತಿಸಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಆರೋಪಿ ಸಯ್ಯದ್ ಅನ್ವರ್ (35) ಎಂಬಾತನನ್ನು ಕೋಟೆ ಪೊಲೀಸರು ಈಗಾಗಲೇ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. 

Shimoga Crime ಅಸಲಿಗೆ ನಡೆದಿದ್ದೇನು

ಫೆಬ್ರವರಿ 19ರ ತಡರಾತ್ರಿ ಶಿವಮೊಗ್ಗದ ಬೆಕ್ಕಿನ ಕಲ್ಮಠದ ಬಳಿ ಸ್ನೇಹಿತರಾದ ತೌಫಿಕ್ ಮತ್ತು ಸಯ್ಯದ್ ಅನ್ವರ್ ಪಾರ್ಟಿ ಮಾಡುತ್ತಿದ್ದರು. ಈ ವೇಳೆ ಇಬ್ಬರ ನಡುವೆ ಮಾತಿಗೆ ಮಾತು ಬೆಳೆದು ಜಗಳ ವಿಕೋಪಕ್ಕೆ ಹೋಗಿದೆ. ಸಿಟ್ಟಿಗೆದ್ದ ಸಯ್ಯದ್ ಅನ್ವರ್, ತನ್ನ ಬಳಿಯಿದ್ದ ಚಾಕುವಿನಿಂದ ತೌಫಿಕ್ ಅವರ ಕುತ್ತಿಗೆಯ ಭಾಗಕ್ಕೆ ಇರಿದಿದ್ದಾನೆ ಎನ್ನಲಾಗಿದೆ. 

ಕುತ್ತಿಗೆಯಿಂದ ತೀವ್ರ ರಕ್ತಸ್ರಾವವಾಗುತ್ತಿದ್ದರೂ ಪ್ರಾಣಾಪಾಯದಿಂದ ಪಾರಾಗಲು ತೌಫಿಕ್ ಕುತ್ತಿಗೆಯನ್ನು ಕೈಯಿಂದ ಒತ್ತಿ ಹಿಡಿದುಕೊಂಡು ಬಿ.ಹೆಚ್. ರಸ್ತೆಯ ಹೊಳೆ ಬಸ್ ಸ್ಟಾಪ್ ಬಳಿ ಬಂದು ಕುಳಿತಿದ್ದರು. ಆ ಸಮಯದಲ್ಲಿ ಗಸ್ತಿನಲ್ಲಿದ್ದ 112 ತುರ್ತು ವಾಹನದ ಸಿಬ್ಬಂದಿಗಳಾದ ಮಲೇಶ ಮತ್ತು ಚಾಲಕ ಬಸವರಾಜ್ ಅವರು ರಕ್ತದ ಮಡುವಿನಲ್ಲಿದ್ದ ತೌಫಿಕ್ ಅವರನ್ನು ಗಮನಿಸಿದ್ದಾರೆ. ಕೂಡಲೇ ಅಂಬ್ಯುಲೆನ್ಸ್‌ಗೆ ಕಾಯದೆ ತಕ್ಷಣವೇ ತಮ್ಮದೇ ವಾಹನದಲ್ಲಿ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿದ್ದಾರೆ

ಆಸ್ಪತ್ರೆಯಲ್ಲಿ ದಾಖಲಾದಾಗ ತೌಫಿಕ್ ಅವರು ಮಾತನಾಡಲಾಗದ ಸ್ಥಿತಿಯಲ್ಲಿದ್ದರು. ವೈದ್ಯರು ಸತತ ಎರಡು ದಿನಗಳ ಕಾಲ ಸೂಕ್ತ ಚಿಕಿತ್ಸೆ ನೀಡಿದರೂ ಸಹ, ತೀವ್ರ ರಕ್ತಸ್ರಾವವಾಗಿದ್ದರಿಂದ ಚಿಕಿತ್ಸೆ ಫಲಕಾರಿಯಾಗದೆ ಅವರು ಸಾವನ್ನಪ್ಪಿದ್ದಾರೆ.

Shimoga Crime Man Stabbed by Friend

Shimoga Crime Man Stabbed by Friend
Shimoga Crime Man Stabbed by Friend
shivamogga car decor sun control house
shivamogga car decor sun control house