ಶಿವಮೊಗ್ಗ | ಶಿವಮೊಗ್ಗದ ಪ್ರಸಿದ್ಧ ಕೋಟೆ ಶ್ರೀ ಮಾರಿಕಾಂಬಾ ದೇವಿ ಜಾತ್ರಾ ಮಹೋತ್ಸವದ ಅಂಗವಾಗಿ ನಮ್ಮೂರ ಬಳಗ ಫೆಬ್ರವರಿ 15ರಂದು ಆಯೋಜಿಸಿರುವ ರಾಷ್ಟ್ರಮಟ್ಟದ ಬೃಹತ್ ಟಗರು ಕಾಳಗದಲ್ಲಿ ವಿಜೇತರಿಗೆ ನೀಡಲಾಗುವ ಟ್ರೋಫಿಗಳನ್ನು ನಟ ಡಾಲಿ ಧನಂಜಯ್ ಅನಾವರಣ ಗೊಳಿಸಿದರು.

ಶಿವಮೊಗ್ಗ, ಸಾಗರ, ಶಿರಸಿ ಸೇರಿ ರಾಜ್ಯದ ವಿವಿಧ ಮಾರುಕಟ್ಟೆಗಳಲ್ಲಿನ ಅಡಕೆ ದರ ಪಟ್ಟಿ ಇಲ್ಲಿದೆ
ಸಂಗೊಳ್ಳಿ ರಾಯಣ್ಣ’, ‘ವೀರ ಶಿವಪ್ಪ ನಾಯಕ’, ‘ಭಗೀರಥ’ ಹಾಗೂ ‘ವೀರ ಸಿಂಧೂರ ಲಕ್ಷ್ಮಣ’ ಟ್ರೋಫಿಗಳನ್ನು ಬಿಡುಗಡೆ ಮಾಡಿದ ಧನಂಜಯ್ ಅವರು, ಶಿವಮೊಗ್ಗದ ಮಾರಿ ಜಾತ್ರೆಯ ಸಂಭ್ರಮದ ಭಾಗವಾಗಿರುವ ಈ ಟಗರು ಕಾಳಗವು ಅತ್ಯಂತ ಯಶಸ್ವಿಯಾಗಿ ನಡೆಯಲಿ ಎಂದು ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ನಮ್ಮೂರ ಬಳಗದ ಪ್ರಧಾನ ಸಂಚಾಲಕ ಕೆ. ರಂಗನಾಥ್, ಗೌರವ ಸಂಚಾಲಕರಾದ ನಾಗರಾಜ್ ಕಂಕರಿ, ಎಚ್. ಪಾಲಾಕ್ಷಿ, ಐಡಿಯಲ್ ಗೋಪಿ, ಪಿ.ಎಚ್. ಮಾಲ್ತೇಶ್ ಹಾಗೂ ಸಂಚಾಲಕರಾದ ಎಚ್. ಪಿ. ಗಿರೀಶ್, ಎಂ. ರಾಕೇಶ್, ರಾಜೇಶ್ ಮಂದಾರ, ಮನ್ವಿತ್ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.
Dolly Dhananjay Unveils Tagaru Kalaga Trophies



