ರಾಜ್ಯಾದ್ಯಂತ 22 ಡಿವೈಎಸ್‌ಪಿಗಳ ವರ್ಗಾವಣೆ! ಯಾರಿಗೆ ಯಾವ ಜಿಲ್ಲೆ? ಪೂರ್ತಿ ಪಟ್ಟಿ ಇಲ್ಲಿದೆ ಓದಿ

ಮಲೆನಾಡು ಟುಡೆ ಸುದ್ದಿ / ಪೊಲೀಸ್ ಇನ್ಸ್‌ಪೆಕ್ಟರ್‌ಗಳ ವರ್ಗಾವಣೆಯ ಜೊತೆಯಲ್ಲಿಯೇ ರಾಜ್ಯ ಪೊಲೀಸ್ ಇಲಾಖೆ 22 ಡಿವೈಎಸ್‌ಪಿ (ಸಿವಿಲ್) ದರ್ಜೆಯ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಮಹತ್ವದ ಆದೇಶ ಹೊರಡಿಸಿದೆ. ವರ್ಗಾವಣೆಗೊಂಡವರ ಪೂರ್ಣ ಪಟ್ಟಿ ಇಲ್ಲಿದೆ

SUNCONTROL_FINAL-scaled
Karnataka DySP Transfer List 2026
Karnataka DySP Transfer List 2026

ವರ್ಗಾವಣೆಗೊಂಡ ಡಿವೈಎಸ್‌ಪಿಗಳ ಸಂಪೂರ್ಣ ಪಟ್ಟಿ 

ರಾಜಣ್ಣ ಡಿ.ಜಿ: ಬೀದರ್ ಉಪವಿಭಾಗಕ್ಕೆ ಆಗಿದ್ದ ವರ್ಗಾವಣೆಯನ್ನು ರದ್ದುಪಡಿಸಿ, ಪಿ.ಟಿ.ಸಿ ನಾಗೇನಹಳ್ಳಿ (ಕಲಬುರಗಿ) ಯಲ್ಲೇ ಮುಂದುವರಿಸಲಾಗಿದೆ.

ದೂದ್ ಪೀರ್ ಹುಸೇನ್ ಸಾಬ್ ಮುಲ್ಲಾ: ಲೋಕಾಯುಕ್ತಕ್ಕೆ ಆಗಿದ್ದ ವರ್ಗಾವಣೆ ರದ್ದುಪಡಿಸಿ, ಬೀದರ್ ಉಪ ವಿಭಾಗಕ್ಕೆ ನೇಮಕ.

ಶಿವಮೊಗ್ಗ ಎಸ್​ಪಿ ನೈಟ್ ರೌಂಡ್ಸ್​

ಗಿರೀಶ್ ಬಿ: ಕರ್ನಾಟಕ ಲೋಕಾಯುಕ್ತದಿಂದ ಭಟ್ಕಳ ಉಪ ವಿಭಾಗ, ಉತ್ತರ ಕನ್ನಡ ಜಿಲ್ಲೆ.

ಮಹೇಶ್ ಎಂ.ಕೆ: ಭಟ್ಕಳ ಉಪ ವಿಭಾಗದಿಂದ ಸಿಐಡಿ (CID) ವಿಭಾಗಕ್ಕೆ ವರ್ಗಾವಣೆ.

ಯು.ಡಿ ಕೃಷ್ಣಕುಮಾರ್: ರಾಜ್ಯ ಗುಪ್ತವಾರ್ತೆಯಿಂದ ಶ್ರೀರಂಗಪಟ್ಟಣ ಉಪ ವಿಭಾಗ, ಮಂಡ್ಯ ಜಿಲ್ಲೆ.

ಪ್ರಭು ಡಿ.ಟಿ: ಉಡುಪಿ ಉಪ ವಿಭಾಗದಿಂದ ಸಂಚಾರ ಉಪ ವಿಭಾಗ, ಕಲಬುರಗಿ ನಗರ.

ಬೆಳ್ಳಿಯಪ್ಪ ಕೆ.ಯು: ಐಜಿಪಿ ಕಚೇರಿ (ಪಶ್ಚಿಮ ವಲಯ) ದಿಂದ ಕಾರ್ಕಳಕ್ಕೆ ಆಗಿದ್ದ ವರ್ಗಾವಣೆ ಮಾರ್ಪಡಿಸಿ, ಉಡುಪಿ ಉಪ ವಿಭಾಗಕ್ಕೆ ನೇಮಕ.

ಗಣೇಶ ಎಂ ಹೆಗಡೆ: ಬಂಟ್ವಾಳ ಉಪವಿಭಾಗಕ್ಕೆ ಆಗಿದ್ದ ವರ್ಗಾವಣೆ ರದ್ದು, ಆಂತರಿಕ ಭದ್ರತಾ ವಿಭಾಗ (ISD) ಬೆಂಗಳೂರಿನಲ್ಲೇ ಮುಂದುವರಿಕೆ.

ರವೀಶ್ ನಾಯಕ್: ಸಿಸಿಪಿಎಸ್ ಮಂಗಳೂರು ನಗರ ಇಂದ ಮಂಗಳೂರು ಕೇಂದ್ರ ಉಪ ವಿಭಾಗಕ್ಕೆ ವರ್ಗಾವಣೆ.

Malenadu Today
Karnataka DySP Transfer List 2026:

ಪ್ರತಾಪ್ ಸಿಂಗ್ ಥೋರಾಟ್: ಮಂಗಳೂರು ಕೇಂದ್ರ ಉಪ ವಿಭಾಗದಿಂದ ರಾಜ್ಯ ಗುಪ್ತವಾರ್ತೆ.

ಪ್ರವೀಣ್ ಎಂ: ಮಾಗಡಿ ಉಪವಿಭಾಗದಿಂದ ರಾಜ್ಯ ಗುಪ್ತವಾರ್ತೆಗೆ ಆಗಿದ್ದ ವರ್ಗಾವಣೆ ಮಾರ್ಪಡಿಸಿ, ಕರ್ನಾಟಕ ಲೋಕಾಯುಕ್ತಕ್ಕೆ ನೇಮಕ.

ಗಂಗಾಧರ್ ಬಿ.ಎಂ: ಬೆಳಗಾವಿ ಗ್ರಾಮಾಂತರ ಉಪ ವಿಭಾಗದಿಂದ ರಾಜ್ಯ ಗುಪ್ತವಾರ್ತೆ.

ಅರುಣ್ ನಾಗೇಗೌಡ: ಪುತ್ತೂರು ಉಪವಿಭಾಗದಿಂದ ರಾಜ್ಯ ಗುಪ್ತವಾರ್ತೆಗೆ ಆಗಿದ್ದ ವರ್ಗಾವಣೆ ಮಾರ್ಪಡಿಸಿ, ಚಿತ್ರದುರ್ಗ ಉಪ ವಿಭಾಗಕ್ಕೆ ನೇಮಕ.

ದಿನಕರ್ ಪಿ.ಕೆ: ಚಿತ್ರದುರ್ಗ ಉಪ ವಿಭಾಗದಿಂದ ರಾಜ್ಯ ಗುಪ್ತವಾರ್ತೆ.

ಕೃಷ್ಣಮೂರ್ತಿ ಕೆ: ಸಿಸಿಪಿಎಸ್ (CCPS) ಶಿವಮೊಗ್ಗ ಜಿಲ್ಲೆಯಿಂದ ಐಜಿಪಿ ಕಚೇರಿ, ಪೂರ್ವ ವಲಯ, ದಾವಣಗೆರೆ.

ಕೃಷ್ಣಪ್ಪ ವಿ: ಮಳವಳ್ಳಿ ಉಪವಿಭಾಗದಿಂದ ಲೋಕಾಯುಕ್ತಕ್ಕೆ ಆಗಿದ್ದ ವರ್ಗಾವಣೆ ಮಾರ್ಪಡಿಸಿ, ಕೋಲಾರ ಉಪ ವಿಭಾಗಕ್ಕೆ ನೇಮಕ.

ಮೊಹಮ್ಮದ್ ಹುಮಾಯೂನ್ ನಾಗೆ: ಕೋಲಾರ ಉಪ ವಿಭಾಗದಿಂದ ಎಸಿಪಿ, ಇಲಾಖಾ ವಿಚಾರಣೆ (DE), ಬೆಂಗಳೂರು ನಗರ.

ಶಿವಮೊಗ್ಗದ ಗಾರ್ಡನ್​ ಏರಿಯಾದಲ್ಲಿರುವ ಕ್ಲಬ್​ವೊಂದರ ಮೇಲೆ ದೊಡ್ಡಪೇಟೆ ಪೊಲೀಸರ ರೇಡ್

ಶಿವಾನಂದ ಹೆಚ್ ಚಲುವಾದಿ: ಹಲಸೂರುಗೇಟ್ ಉಪವಿಭಾಗದಿಂದ ಹುಬ್ಬಳ್ಳಿ ಉತ್ತರ ಉಪ ವಿಭಾಗಕ್ಕೆ ವರ್ಗಾವಣೆ.

ಶಿವಪ್ರಕಾಶ ರಾಜೇಂದ್ರ ನಾಯಕ್: ಹುಬ್ಬಳ್ಳಿ ಉತ್ತರ ಉಪ ವಿಭಾಗದಿಂದ ಪಿ.ಟಿ.ಸಿ ನಾಗೇನಹಳ್ಳಿ, ಕಲಬುರಗಿ.

ಶೀಲವಂತ ಹೊಸಮನಿ: ಕರ್ನಾಟಕ ಲೋಕಾಯುಕ್ತದಿಂದ ಸಿಸಿಪಿಎಸ್, ಯಾದಗಿರಿ ಜಿಲ್ಲೆ.

ಗೋವಿಂದರಾಜು ವಿ: ಸಿಸಿಬಿ ಬೆಂಗಳೂರು ನಗರ ಇಂದ ಬಳ್ಳಾರಿ ನಗರ ಉಪ ವಿಭಾಗ.

ಚಂದ್ರಕಾಂತ ನಂದಾರೆಡ್ಡಿ: ಬಳ್ಳಾರಿ ನಗರ ಉಪ ವಿಭಾಗದಿಂದ ರಾಜ್ಯ ಗುಪ್ತವಾರ್ತೆ.

Malenadu Today
Karnataka DySP Transfer List 2026:

ಅಶ್ವತ್ ನಾರಾಯಣ ಸಿ.ಕೆ: ಕೆಎಸ್‌ಹೆಚ್‌ಆರ್‌ಸಿ ಇಂದ ಐಎಸ್‌ಡಿಗೆ ಆಗಿದ್ದ ವರ್ಗಾವಣೆ ಮಾರ್ಪಡಿಸಿ, ನಗರ ವಿಶೇಷ ಕೋಷ (CSB), ಬೆಂಗಳೂರಿಗೆ ನೇಮಕ.

ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ದ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಸುದ್ದಿಗಳಿಂದ ಸ್ತಳೀಯ ವಿಶೇಷ ವಿಡಿಯೋ ಸುದ್ದಿಗಳನ್ನು ನೀವು ನೋಡಬಹುದು…ಇಲ್ಲಿದೆ ಅವುಗಳ ಲಿಂಕ್  Facebook whatsapp  , whatsapp chanel  instagram,  youtube,  telegram , ನಮ್ಮದು ಅಧಿಕೃತವಾದ ಮತ್ತು ಉತ್ಪ್ರೇಕ್ಷೆಗಳಲ್ಲಿದ ನೈಜ ಸುದ್ದಿಯ ಸಂಸ್ಥೆ. ನಮ್ಮ ಬಗ್ಗೆ  google business, ನಲ್ಲಿ ಮಾಹಿತಿ ಪಡೆಯಬಹುದು. ಅಲ್ಲದೆ   malenadu today epaper malenadutoday web ನಲ್ಲಿ ಆಯಾ ದಿನದ ಈ ಪೇಪರ್​ಗಳನ್ನು ಕ್ಲಿಕ್ ಮಾಡಿ ಓದಬಹುದು. 

Malenadu Today

ಶಿವಮೊಗ್ಗದಲ್ಲಿ 91000! ಉಳಿದ ಕಡೆ ಎಷ್ಟಿದೆ ಅಡಕೆ ದರ! ಅಡಿಕೆ ರೇಟು ಓದಿ

Karnataka DySP Transfer List 2026: Shivamogga DySP Krishnamurthy Transferred – Malenadu Today ರಾಜ್ಯ ಪೊಲೀಸ್ ಇಲಾಖೆಯಲ್ಲಿ ಮಹತ್ವದ ಬದಲಾವಣೆ: 22 ಡಿವೈಎಸ್‌ಪಿಗಳ ವರ್ಗಾವಣೆ.ಯಾರಿಗೆ ಯಾವ ಸ್ಥಳ? ಸಂಪೂರ್ಣ ಪಟ್ಟಿ ಇಲ್ಲಿದೆ.
SUNCONTROL_FINAL-scaled
ಶಿವಮೊಗ್ಗ ಏರ್‌ಪೋರ್ಟ್ ಕಚೇರಿ ಉದ್ಘಾಟನೆ ಶಿವಮೊಗ್ಗ ಎಸ್​ಪಿ ನೈಟ್ ರೌಂಡ್ಸ್​ ಶಿವಮೊಗ್ಗಕ್ಕೆ ಬಂದ ಅಲೋಕ್​ ಕುಮಾರ್​ ಮಲೆನಾಡಲ್ಲಿ ಇಷ್ಟೆಲ್ಲಾ ಆಯ್ತು