ಭತ್ತಕ್ಕಾಗಿ ಅಣ್ಣತಮ್ಮನ ಫೈಟ್, 112 ಪಂಚಾಯ್ತಿ!ಅನುಮಾನಕ್ಕೆ ಕಾರಣವಾದ ಮಹಿಳೆ, ಹೊನ್ನಾಳಿ ರಸ್ತೆಯಲ್ಲಿ ಯುವಕನ ಸಾವು! ಇನ್ನಷ್ಟು ಸುದ್ದಿ

ಹಂಚಿಕೊಳ್ಳಿ
WhatsApp Facebook X Telegram
Shimoga
Shimoga

Shivamogga Round up ಶಿವಮೊಗ್ಗ  ಜಿಲ್ಲೆಯಲ್ಲಿ ನಡೆದ ಪ್ರಮುಖ ವಿದ್ಯಮಾನಗಳಲ್ಲಿ ರಸ್ತೆ ಅಪಘಾತ, ಅಧಿಕಾರಿಗಳ ದಿಢೀರ್ ದಾಳಿ ಮತ್ತು ಪೊಲೀಸ್ ಇಲಾಖೆ ಜನಸ್ನೇಹಿ ಕಾರ್ಯದ ಕುರಿತಾದ ಸಂಕ್ಷಿಪ್ತ ವರದಿ ನೀಡುವ ಶಿವಮೊಗ್ಗ ರೌಂಡ್ ಅಪ್​ ಸುದ್ದಿಗಳು ಇಲ್ಲಿದೆ.

ಬೈಕ್ ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಡಿಕ್ಕಿ

ಸ್ನೇಹಿತನೊಂದಿಗೆ ಗೋಬಿ ತಿಂದು ಬೈಕ್​ನಲ್ಲಿ ವಾಪಸಾಗುತ್ತಿದ್ದ 18 ವರ್ಷದ ದರ್ಶನ್ ಎಂಬುವವರು ಬೈಕ್ ನಿಯಂತ್ರಣ ತಪ್ಪಿದ ಪರಿಣಾಮ ವಿದ್ಯುತ್ ಕಂಬಕ್ಕೆ ಡಿಕ್ಕಿಯಾಗಿ ಮೃತಪಟ್ಟ ಘಟನೆ ತಾಲೂಕಿನ ಗೊಂದಿಚಟ್ನಹಳ್ಳಿ ಗ್ರಾಮದ ಬಳಿ ಸಂಭವಿಸಿದೆ. ಶಿವಮೊಗ್ಗ ಹೊನ್ನಾಳಿ ರಸ್ತೆಯಲ್ಲಿ ದರ್ಶನ್ ತನ್ನ ಸ್ನೇಹಿತನ ಜೊತೆಗೆ ತೆರಳುತ್ತಿದ್ದ. ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಅವರನ್ನ ಮೆಗ್ಗಾನ್ ಆಸ್ಪತ್ರೆಗೆ ಸಾಗಿಸಲಾಯಿತಾದರೂ, ಅಷ್ಟರಲ್ಲಿ ದರ್ಶನ್​ ಸಾವನ್ನಪ್ಪಿದ್ದರು ಎಂದು ವೈದ್ಯರು ಘೋಷಿಸಿದ್ದರು. ಇನ್ನೂ ಈ ಸಂಬಂಧ ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಧಿಕಾರಿಗಳ ದಾಳಿ: ಅವಧಿ ಮುಗಿದ ಆಹಾರ ಜಪ್ತಿ 

ಶಿವಮೊಗ್ಗ ಮಹಾನಗರ ಪಾಲಿಕೆ ವ್ಯಾಪ್ತಿಯ ವಾರ್ಡ್ ಸಂಖ್ಯೆ 14 ರ ಚಿಕ್ಕಲ್ ಗುಡ್ಡೇಕಲ್ ನಲ್ಲಿರುವ ಹೋಂ ಅಪ್ಲೈಯನ್ಸಸ್ ಮಳಿಗೆಯೊಂದರ ಮೇಲೆ ದಾಳಿ ನಡೆಸಿರುವ ಅಧಿಕಾರಿಗಳು ಅವಧಿ ಮುಗಿದ ಪ್ಯಾಕ್ಡ್ ಆಹಾರ ಪೊಟ್ಟಣಗಳು ಪತ್ತೆ ಹಚ್ಚಿದ್ದಾರೆ. ಅಪರ ಜಿಲ್ಲಾಧಿಕಾರಿ ಅಭಿಷೇಕ್ ನೇತೃತ್ವದಲ್ಲಿ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ, ತಹಶೀಲ್ದಾರ್ ಹಾಗೂ ಪಾಲಿಕೆ ಆರೋಗ್ಯಾಧಿಕಾರಿಗಳು ಈ ದಾಳಿ ನಡೆಸಿದ್ದಾರೆ.

112 ಸಹಾಯ!

ಎರಡು ಪ್ರತ್ಯೇಕ ಪ್ರಕರಣಗಳಲ್ಲಿ 112 ಪೊಲೀಸರು ತಮ್ಮ ಸಹಾಯ ಹಸ್ತ ಚಾಚಿ ಸಮಸ್ಯೆಗಳಿಗೆ ಸ್ಥಳದಲ್ಲಿಯೇ ಪರಿಹಾರ ಒದಗಿಸಿದ್ದಾರೆ. ಆನಂದಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದಿನಾಂಕ 24.01.2026 ರಂದು ಅಣ್ಣ ಮತ್ತು ತಮ್ಮಂದಿರ ನಡುವೆ ಭತ್ತದ ಹಂಚಿಕೆ ವಿಚಾರವಾಗಿ ಗಲಾಟೆ ನಡೆದಿದ್ದು, ಸ್ಥಳಕ್ಕೆ ತೆರಳಿದ ಇ ಆರ್ ವಿ ಸಿಬ್ಬಂದಿ ಜಗಳ ಬಿಡಿಸಿ ಇಬ್ಬರಿಗೂ ಬುದ್ಧಿವಾದ ಹೇಳಿದ್ದಾರೆ. ಹಾಗೆಯೇ ನ್ಯೂಟೌನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದಿನಾಂಕ 25.01.2026 ರಂದು ಕಳೆದ ಒಂದು ವಾರದಿಂದ ಅನುಮಾನಾಸ್ಪದವಾಗಿ ಓಡಾಡುತ್ತಿದ್ದ ಅಪರಿಚಿತ ಮಹಿಳೆಯ ಬಗ್ಗೆ ಸಾರ್ವಜನಿಕರು ಮಾಹಿತಿ ನೀಡಿದ್ದರು. ಈ ಹಿನ್ನೆಲೆಯಲ್ಲಿ ತಕ್ಷಣ ಸ್ಥಳಕ್ಕೆ ತೆರಳಿದ ಪೊಲೀಸರು ಮಹಿಳೆಯನ್ನು ವಿಚಾರಿಸಿ, ಆಕೆಯ ಪತಿಯನ್ನು ಸಂಪರ್ಕಿಸಿ ಸುರಕ್ಷಿತವಾಗಿ ಬಸ್ ಮೂಲಕ ಊರಿಗೆ ಕಳುಹಿಸಿಕೊಡುವ ವ್ಯವಸ್ಥೆ ಮಾಡಿದ್ದಾರೆ.

Shivamogga Round up
ಶಿವಮೊಗ್ಗ ರೌಂಡ್ ಅಪ್: ಬೈಕ್ ಅಪಘಾತದಲ್ಲಿ ಸಾವು, 3 ಲಾರಿ ಆಹಾರ ಜಪ್ತಿ, 112 ಪೊಲೀಸ್ ಸುದ್ದಿ , Shivamogga Round up: Bike Accident Death, 3 Lorries Expired Food Seized, 112 Police News

ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ದ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಸುದ್ದಿಗಳಿಂದ ಸ್ತಳೀಯ ವಿಶೇಷ ವಿಡಿಯೋ ಸುದ್ದಿಗಳನ್ನು ನೀವು ನೋಡಬಹುದು…ಇಲ್ಲಿದೆ ಅವುಗಳ ಲಿಂಕ್  Facebook whatsapp  , whatsapp chanel  instagram,  youtube,  telegram , ನಮ್ಮದು ಅಧಿಕೃತವಾದ ಮತ್ತು ಉತ್ಪ್ರೇಕ್ಷೆಗಳಲ್ಲಿದ ನೈಜ ಸುದ್ದಿಯ ಸಂಸ್ಥೆ. ನಮ್ಮ ಬಗ್ಗೆ  google business, ನಲ್ಲಿ ಮಾಹಿತಿ ಪಡೆಯಬಹುದು. ಅಲ್ಲದೆ   malenadu today epaper malenadutoday web ನಲ್ಲಿ ಆಯಾ ದಿನದ ಈ ಪೇಪರ್​ಗಳನ್ನು ಕ್ಲಿಕ್ ಮಾಡಿ ಓದಬಹುದು. 

Shivamogga Round up
ಶಿವಮೊಗ್ಗ ರೌಂಡ್ ಅಪ್: ಬೈಕ್ ಅಪಘಾತದಲ್ಲಿ ಸಾವು, 3 ಲಾರಿ ಆಹಾರ ಜಪ್ತಿ, 112 ಪೊಲೀಸ್ ಸುದ್ದಿ , Shivamogga Round up: Bike Accident Death, 3 Lorries Expired Food Seized, 112 Police News
ಶಿವಮೊಗ್ಗ ರೌಂಡ್ ಅಪ್: ಬೈಕ್ ಅಪಘಾತದಲ್ಲಿ ಸಾವು, 3 ಲಾರಿ ಆಹಾರ ಜಪ್ತಿ, 112 ಪೊಲೀಸ್ ಸುದ್ದಿ , Shivamogga Round up: Bike Accident Death, 3 Lorries Expired Food Seized, 112 Police News

ಹಂಚಿಕೊಳ್ಳಿ
WhatsApp Facebook X Telegram
ajjimane ganesh
ಲೇಖಕರ ಬಗ್ಗೆ

ajjimane ganesh

Malenadu Today Contributor