MISSING/ ಇಬ್ಬರು ಮಕ್ಕಳ ಜೊತೆ ತಾಯಿ ಕಾಣೆ!/ ಒಡಿಶಾಕ್ಕೆ ಹೋದವ ಬರಲಿಲ್ಲ ಭದ್ರಾವತಿಗೆ ವಾಪಸ್!

KARNATAKA NEWS/ ONLINE / Malenadu today/ Oct 6, 2023 SHIVAMOGGA NEWS

ಭದ್ರಾವತಿ ತಾಲ್ಲೂಕಿನಲ್ಲಿ  ತಿಪ್ಲಾಪುರದ ವಾಸಿ ರುಕಿಯಾಬಾನು (33), ಇವರ ಮಕ್ಕಳಾದ ಮಹಮದ್ ರಿಯಾನ್ (19), ಮಹಮದ್ ಇಸ್ಮಾಯಿಲ್ (10) ಕಳೆದ ಅಕ್ಟೋಬರ್ 3ರಿಂದ ಕಾಣೆಯಾಗಿದ್ದಾಳೆ ಎಂದು ಅವರ ಪತಿ ಗ್ರಾಮಾಂತರ ಪೋಲಿಸ್ ಠಾಣೆಗೆ ದೂರು ನೀಡಿದ್ದಾರೆ.

ಈ ಸಂಬಂಧ  ಕಾಣೆಯಾಗಿರುವ ಇವರ ಬಗ್ಗೆ ಮಾಹಿತಿದೊರೆತಲ್ಲಿ ಭದ್ರಾವತಿ ಗ್ರಾಮಾಂತರ ಪೋಲಿಸ್ ಠಾಣೆ ದೂರವಾಣಿ ಸಂಖ್ಯೆ 08282266033 ಕ್ಕೆ ಮಾಹಿತಿ ನೀಡುವಂತೆ ಗ್ರಾಮಾಂತರ ಭದ್ರಾವತಿ ಗ್ರಾಮಾಂತರ ಪೋಲಿಸ್ ಠಾಣೆ ಪ್ರಕಟಣೆ ತಿಳಿಸಿದೆ.

ಇನ್ನೊಂದೆಡೆ ಭದ್ರಾವತಿಯ  ಮುಫಾ ಕಾಂಪೌಂಡ್ ನಿವಾಸಿ ಮೊಹಿದ್ದೀನ್(40) ಇವರು ಫೆಬ್ರವರಿ 7ರಂದು ಬೆಳಿಗ್ಗೆ ಗಂಟೆಗೆ ಒರಿಸ್ಸಾಕ್ಕೆ ಹೋಗಿ ಬರುವುದಾಗಿ ಹೇಳಿ ಹೋದವರು ಈವರೆಗೂ ಬಂದಿರುವುದಿಲ್ಲ. ಅವರು ಮನೆಯಿಂದ ಹೋಗುವಾಗ ಅವರ ಮೈ ಮೇಲೆ ಬಾದಾಮಿ ಬಣ್ಣದ ಶರ್ಟ್, ಕಪ್ಪುಬಣ್ಣದ-ಪ್ಯಾಂಟ್ ಧರಿಸಿ ರುತ್ತಾರೆ, 

ಎಣ್ಣೆಗೆಂಪು ಮೈಬಣ್ಣ ಸಾಧಾರಣ ಮೈ ಕಟ್ಟುಕೋಲಿಮುಖ,5.5 ಅಡಿಎತ್ತರವಿರುವಈ ವ್ಯಕ್ತಿಯ ಎಡಗೈನಲ್ಲಿ ಸಣ್ಣ ಸಣ್ಣ ಗಾಯದ ಗುರುತುಗಳಿರುತ್ತವೆ. ಎರಡೂ ಕಾಲಿನ ಮಂಡಿಯ ಕೆಳಗೆ ಪೆಟ್ಟು ಬಿದ್ದು ಗಾಯ ಗಳಿರುವ ಗುರುತುಗಳಿರುತ್ತವೆ.

ಈ ವ್ಯಕ್ತಿ ಕುರಿತಂತೆ ಯಾರಿಗಾದರೂ ಯಾವುದೇ ಮಾಹಿತಿ ಲಭ್ಯವಾದಲ್ಲಿ ಭದ್ರಾವತಿ  ರೈಲ್ವೇ ಸ್ಟೇಷನ್ ಸಮೀಪದ ಮುಫಾ ಕಾಂಪೌಂಡ್,ಹಳೇನಗರ, ನಿವಾಸಿ ನಬೀಸಾ ಕೋಂ ಲೇಟ್ ಎಂ.ಖಾದರ್,ಮೊಬೈಲ್ ಸಂಖ್ಯೆ 81236 37292 ಕ್ಕೆ ತಿಳಿಸುವಂತೆ ಪ್ರಕಟಣೆಯಲ್ಲಿ ಕೋರಿದ್ದಾರೆ.


ಇನ್ನಷ್ಟು ಸುದ್ದಿಗಳು 

  1.  R M MANJUNATH GOWDA ರವರ ಮನೆಗಳ ಮೇಲೆ ED ದಾಳಿಗೆ ಕಾರಣವೇನು? ಏನಿದು ಪ್ರಕರಣ?

  2. ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ ಮೈಸೂರು ಮಹತ್ವದ ಪ್ರಕಟಣೆ! ಶಿವಮೊಗ್ಗದಲ್ಲಿಯೇ ನೋಂದಣಿ ಮಾಡಿಕೊಳ್ಳಿ

  3. ಶಿವಮೊಗ್ಗ ಮತ್ತೆ ಆಗುತ್ತಾ ಪವರ್ ಸೆಂಟರ್! ನವರಾತ್ರಿ ನಂತರ ಏನಾಗುತ್ತೆ? ರಾಜ್ಯ ರಾಜಕಾರಣದ ಕುತೂಹಲದ ಸುದ್ದಿ


 

Leave a Comment