ಸರ್ಕಾರಿ ನೌಕರರಿಗೆ, ಕಾಲೇಜು ಶಿಕ್ಷಕರಿಗೆ , ಕಚೇರಿ ಸಿಬ್ಬಂದಿಗೆ ಅವಶ್ಯಕ ಮಾಹಿತಿ! ಆಯುಕ್ತರ ಕಚೇರಿಯಿಂದ ಹೊರಬಿತ್ತು ಪ್ರಕಟಣೆ

This Article Written by / Malenadu Today / ಸೆಪ್ಟೆಂಬರ್ 26, 2023

KARNATAKA NEWS/ ONLINE / Malenadu today/ Sep 26, 2023 SHIVAMOGGA NEWS’ 

 

ಸರ್ಕಾರಿ ನೌಕರರಿಗೆ ಸಿಗುವ ನಗದು ರಹಿತ ಚಿಕಿತ್ಸಾ ಸೌಲಭ್ಯದ ಸಂಬಂಧ ನೌಕರರ ಕುಟುಂಬಸ್ಥರ ವಿವರವನ್ನ ಹೆಚ್​ಎಂಆರ್​ಎಸ್​ ತಂತ್ರಾಶದಲ್ಲಿ ಸೇರಿಸುವ ಕುರಿತು ಅವಕಾಶ ಕಲ್ಪಿಸಲಾಗಿದೆ. ಈ ಸಂಬಂಧ  ಕಾಲೇಜು ಶಿಕ್ಷಣ ಆಯುಕ್ತರ ಕಚೇರಿಯು ಪ್ರಕಟಣೆಯೊಂದನ್ನ ಹೊರಡಿಸಿದೆ. 

ರಾಜ್ಯ  ಸರ್ಕಾರಿ ನೌಕರರಿಗೆ ಹಾಗು ಅವರ ಅವಲಂಬಿತ  ಕುಟುಂಬದ ಸದಸ್ಯರಿಗೆ ನಗದು ರಹಿತ ಚಿಕಿತ್ಸಾ ಸೌಲಭ್ಯವನ್ನು ಒದಗಿಸಲು ನೂತನ ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆಯನ್ನು ಅನುಷ್ಠಾನಗೊಳಸುವ ಸಂಬಂಧ ಸರ್ಕಾರಿ ನೌಕರರಿಗೆ ಹಾಗೂ ಅವರ ಅವಲಂಬಿತರ ಸದಸ್ಯರನ್ನು ಯೋಜನೆಯಡಿಯಲ್ಲಿ ನೋಂದಾಯಿಸಲು   https://hrms.karnataka.gov.in  ಹಾಗೂ  ಮೊಬೈಲ್ https://hrmsenroll.karnataka.gov.in  ಮೂಲಕ ನೋಂದಾಯಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. 

ಈ ನಿಟ್ಟಿನಲ್ಲಿ  ಹಂತ ಹಂತವಾಗಿ ನೋಂದಾಯಿಸುವ ವಿಧಾನವನ್ನು ಸಹ  ವಿವರಿಸಲಾಗಿದ್ದು. ಅದರಂತೆ ಇಲಾಖಾ ವ್ಯಾಪ್ತಿಯ ಎಲ್ಲಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳು / ಕಛೇರಿಗಳ ನೌಕರರಿಗೆ ಹಾಗೂ ಅವರ ಅವಲಂಬಿತ ಕುಟುಂಬದ ಸದಸ್ಯರ ಅವಶ್ಯಕ ಮಾಹಿತಿಯನ್ನು ಡಿ.ಡಿ.ಓ ಹಂತದಲ್ಲಿ ಹೆಚ್.ಆರ್.ಎಂ.ಎಸ್ ತಂತ್ರಾಂಶದಲ್ಲಿ ಇಂಧೀಕರಿಸುವಂತೆ ಈ ಮೂಲಕ ಸೂಚಿಸಲಾಗಿದೆ.

Malenadu Today Shivamogga


ಇನ್ನಷ್ಟು ಸುದ್ದಿಗಳು 

  1. BREAKING NEWS / ಜೋಗದ ಸಮೀಪ ನೀರಿಗಿಳಿದಿದ್ದ ಓರ್ವ ಅಧಿಕಾರಿ ಮತ್ತು ಬ್ಯಾಂಕ್ ಉದ್ಯೋಗಿ ಸಾವು! ಕಾರ್ಗಲ್​ ಸ್ಟೇಷನ್ ವ್ಯಾಪ್ತಿಯಲ್ಲಿ ನಡೆದಿದ್ದೇನು?

  2. ಲೋಡ್ ಗಾಡಿಯಿಂದ ಬಿದ್ದ ಮರದ ತುಂಡು ಬಡಿದು ಬೈಕ್​ ಸವಾರನ ಸ್ಥಿತಿ ಗಂಭೀರ! ಹೀಗೂ ಆಗುತ್ತೆ ಹುಷಾರು ತಪ್ಪದಿರಿ ವಾಹನ ಸವಾರರೇ?

  3. ದೌರ್ಜನ್ಯ ಪ್ರಕರಣ ! ಶಿವಮೊಗ್ಗ ಡಿಸಿಯಿಂದ 15 ಸೂಚನೆ! ಯುವಕನ ಸಾವು, ಮರಳು, ಅಧಿಕಾರಿಗಳಿಂದ ಕಿರುಕುಳ ಬಗ್ಗೆ ಜಿಲ್ಲಾಧಿಕಾರಿ ಹೇಳಿದ್ದೇನು?


 

ಮುಂದಿನ ಸುದ್ದಿ ಒದಿ

Leave a Comment