ಬೆಳಗ್ಗೆ ಬೆಳಗ್ಗೆ ಹುಷಾರ್! ಬೈಕ್​ನಲ್ಲಿ ಬೆನ್ನಟ್ಟಿ ನಡೆಸ್ತಾರೆ ಕ್ರೈಂ ! ಚಿಕ್ಕಲ್​ನಲ್ಲಿ ಏನು ನಡೆಯಿತು ಗೊತ್ತಾ?

KARNATAKA NEWS/ ONLINE / Malenadu today/ Jul 15, 2023 SHIVAMOGGA NEWS

ಶಿವಮೊಗ್ಗ ನಗರದ ಚಿಕ್ಕಲ್​ ಬಳಿಯಲ್ಲಿ ವಾಕಿಂಗ್ ಹೋಗುತ್ತಿದ್ದ ಮಹಿಳೆಯ ಚಿನ್ನದ ಸರ ಕಿತ್ತುಕೊಂಡು ಹೋದ ಘಟನೆ ಬಗ್ಗೆವರದಿಯಾಗಿದೆ. 

ನಡೆದಿದ್ದೇನು ?

ಬೈಕ್ ನಲ್ಲಿ ಆಗಮಿಸಿದ ಇಬ್ಬರು ದುಷ್ಕರ್ಮಿಗಳು, ವಿಳಾಸ ಕೇಳುವ ನೆಪದಲ್ಲಿ ನಡೆದುಕೊಂಡು ಹೋಗುತ್ತಿದ್ದ ಮಹಿಳೆಯನ್ನ ತಡೆದಿದ್ದಾರೆ. ಮಾತನಾಡುತ್ತಲೇ ಮಹಿಳೆಯ ಕುತ್ತಿಗೆಗೆ ಕೈ ಹಾಕಿ, ಸರ ಕಿತ್ತಿದ್ದಾರೆ.  ಈ ವೇಳೆ ಮಹಿಳೆ ತಮ್ಮ ಸರವನ್ನು ಹಿಡಿದುಕೊಂಡಿದ್ದರಿಂದ,  ಅರ್ಧ ಸರ ಮಾತ್ರ ಕಳ್ಳರ ಕೈಗೆ ಬಂದಿದೆ. ಘಟನೆ ಬೆನ್ನಲ್ಲೆ ಮಹಿಳೆ ಕೂಗಿದ್ದರಿಂದ  ಕಳ್ಳರು ಅಲ್ಲಿಂದ ಎಸ್ಕೇಪ್​ ಆಗಿದ್ಧಾರೆ. 

 ಚಿಕ್ಕಲ್ ನಿವಾಸಿ ಲತಾ ಎಂಬವರು ಮನೆಯ ಸಮೀಪದ ಪಾರ್ಕ್ ಬಳಿ ವಾಕಿಂಗ್ ಮಾಡುತ್ತಿದ್ದರು. ಈ ವೇಳೆ ನಡೆದ ಘಟನೆಯ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.   50 ಗ್ರಾಂ ತೂಕದ ಮಾಂಗಲ್ಯ ಸರದಲ್ಲಿ ಸುಮಾರು 30 ಗ್ರಾಂ ಸರಗಳ್ಳರ ಪಾಲಾಗಿದೆ. ಇದರ ಮೌಲ್ಯ ಸುಮಾರು 1.50 ಲಕ್ಷ ರೂ.ಗಳೆಂದು ಅಂದಾಜಿಸಲಾಗಿದೆ.  ಈ ಸಂಬಂಧ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

 

 

Leave a Comment