ಭೀಮೇಶ್ವರ ದೇವಸ್ಥಾನಕ್ಕೆ  ಎಸ್​ ಪಿ, ಡಿ,ಸಿ ವಿಸಿಟ್​​. ಹಿಂದೂ ಮಹಾಸಭಾ ಸದಸ್ಯರ ಜೊತೆ ಚರ್ಚೆ 

prathapa thirthahalli
Prathapa thirthahalli - content producer

Hindu mahasabha ganesh  ಶಿವಮೊಗ್ಗ : ನಾಳೆ ಹಿಂದೂ ಮಹಾಸಭಾ ಗಣಪತಿ ರಾಜಬೀದಿ ಉತ್ಸವ ನಡೆಯಲಿದೆ. ಈ ಹಿನ್ನೆಲೆ ಇಂದು ಶಿವಮೊಗ್ಗದ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಹಾಗೂ ಜಿಲ್ಲಾ ರಕ್ಷಣಾಧಿಕಾರಿ ಮಿಥುನ್​ ಕುಮಾರ್​ ಜಿ.ಕೆ ಇಂದು ಹಿಂದೂ ಮಹಾಸಭಾ ಗಣಪತಿ ಪ್ರತಿಸ್ಠಾಪಿಸಿದ ಸ್ಥಳಕ್ಕೆ  ತೆರಳಿ ನಮಸ್ಕಾರ ಸಲ್ಲಿಸಿದರು. ನಂತರ ಹಿಂದೂ ಮಹಾ ಸಭಾ ಸದಸ್ಯರ ಜೊತೆ  ಚರ್ಚೆಯನ್ನು ನಡೆಸಿದರು.  

ನಾಳೆ ಬೆಳಿಗ್ಗೆಯಿಂದಲೇ ಆರಂಭವಾಗುವ ಈ ಬೃಹತ್ ರಾಜಬೀದಿ ಉತ್ಸವದಲ್ಲಿ ಲಕ್ಷಾಂತರ ಭಕ್ತರು ಭಾಗವಹಿಸುವ ನಿರೀಕ್ಷೆಯಿದೆ. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ತಡೆಯಲು ಜಿಲ್ಲೆಯಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.

- Advertisement -

ಸಾರ್ವಜನಿಕರ ಮತ್ತು ವಾಹನಗಳ ಸುಗಮ ಸಂಚಾರಕ್ಕೆ ಅನುಕೂಲವಾಗುವಂತೆ ರಾಜಬೀದಿ ಉತ್ಸವದ ಮಾರ್ಗದಲ್ಲಿ ಸಂಚಾರ ವ್ಯವಸ್ಥೆಯಲ್ಲಿ ಬದಲಾವಣೆ ಮಾಡಲಾಗಿದೆ. ಅಲ್ಲದೆ, ಮುನ್ನೆಚ್ಚರಿಕೆ ಕ್ರಮವಾಗಿ ಜಿಲ್ಲೆಯಲ್ಲಿ ಮದ್ಯ ಮಾರಾಟವನ್ನು ನಿಷೇಧಿಸಿ ಆದೇಶ ಹೊರಡಿಸಲಾಗಿದೆ.

Hindu mahasabha ganesh 

Hindu mahasabha ganesh 

Malenadu Today

Share This Article