Monday, 16 Jun 2025
Subscribe
Malenadu Today
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
  • 🔥
  • SHIVAMOGGA NEWS TODAY
  • STATE NEWS
  • POLITICS
  • NATIONAL NEWS
  • ARECANUT RATE
  • INFORMATION NEWS
  • DISTRICT
  • Uncategorized
  • JP STORY
  • RAIN NEWS LIVE
Font ResizerAa
Malenadu TodayMalenadu Today
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Search
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Have an existing account? Sign In
Follow US
© 2022 Foxiz News Network. Ruby Design Company. All Rights Reserved.
SHIMOGA NEWS LIVEUncategorized

shivamogga news 15-06-2025 / ಖ್ಯಾತ ಶಾಸನ ತಜ್ಞ ಇನ್ನಿಲ್ಲ/ ಬೀಡಿ ಇಲ್ಲ ಎಂದಿದ್ದಕ್ಕೆ ಬಸ್​ಸ್ಟ್ಯಾಂಡ್​ನಲ್ಲಿ ಈ ಘಟನೆ / ಇನ್​ಸ್ಟಾಗ್ರಾಂ ಲಿಂಕ್​ನಿಂದ 40 ಲಕ್ಷ ಮಾಯ!

Malenadu Today
Last updated: June 15, 2025 12:44 pm
Malenadu Today
Share
SHARE

shivamogga news 15-06-2025 ಶಿವಮೊಗ್ಗ: ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಬಳಿ ಆಟೋ ಚಾಲಕನ ಮೇಲೆ ಹಲ್ಲೆ, ಆಟೋ ಜಖಂ

ಶಿವಮೊಗ್ಗ: ನಗರದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಸಮೀಪ ತಡರಾತ್ರಿ ಕ್ಷುಲ್ಲಕ ಕಾರಣಕ್ಕೆ ಆಟೋ ಚಾಲಕರೊಬ್ಬರ ಮೇಲೆ ನಾಲ್ವರು ದುಷ್ಕರ್ಮಿಗಳು ಹಲ್ಲೆ ನಡೆಸಿದ್ದು, ಆಟೋದ ಗಾಜುಗಳನ್ನು ಕಲ್ಲಿನಿಂದ ಜಜ್ಜಿದ್ದಾರೆ.  ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಹಿಂಬದಿಯ ಗೇಟ್ ಬಳಿ ಪ್ರಯಾಣಿಕರಿಗಾಗಿ ಕಾಯುತ್ತಿದ್ದ ಆಟೋ ಚಾಲಕ ಅನ್ವರ್ ಬಾಷಾ ಅವರ ಮೇಲೆ ಹಲ್ಲೆ ನಡೆಸಲಾಗಿದೆ. ಬೈಕ್‌ನಲ್ಲಿ ಬಂದ ನಾಲ್ವರು ದುಷ್ಕರ್ಮಿಗಳು ಅನ್ವರ್ ಬಾಷಾ ಬಳಿ ಬೀಡಿ ಕೇಳಿದ್ದಾರೆ. ಬೀಡಿ ಇಲ್ಲ ಎಂದು ಹೇಳಿದ ತಕ್ಷಣ ಜಗಳ ಶುರುಮಾಡಿದ ಕಿಡಿಗೇಡಿಗಳು, ಅವರ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಅಲ್ಲದೆ, ಆಟೋದ ಗಾಜುಗಳನ್ನು ಒಡೆದು ಹಾಕಿದ್ದಾರೆ. “ಇನ್ನೊಮ್ಮೆ ಈ ನಿಲ್ದಾಣದಲ್ಲಿ ಕಾಣಿಸಿಕೊಂಡರೆ ಜೀವಕ್ಕೆ ಅಪಾಯ” ಎಂದು ಬೆದರಿಕೆ ಹಾಕಿದ್ದಾರೆ ಎಂದೂ ಅನ್ವರ್ ಬಾಷಾ ದೂರಿನಲ್ಲಿ ತಿಳಿಸಿದ್ದಾರೆ. ಹಲ್ಲೆಯಿಂದ ಗಾಯಗೊಂಡ ಅನ್ವರ್ ಬಾಷಾ ಅವರನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಘಟನೆ ಸಂಬಂಧ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.

Shivamogga news 15-06-2025 ಶಿವಮೊಗ್ಗ: ಷೇರು ಹೂಡಿಕೆ ಹೆಸರಿನಲ್ಲಿ ಶಿಕ್ಷಕಿಗೆ ₹40.85 ಲಕ್ಷ ವಂಚನೆ

ಶಿವಮೊಗ್ಗ: ಷೇರು ವ್ಯವಹಾರದಲ್ಲಿ ಹೂಡಿಕೆ ಮಾಡಿ ಅಧಿಕ ಲಾಭ ಗಳಿಸುವುದಾಗಿ ನಂಬಿಸಿ ಶಿವಮೊಗ್ಗ ಜಿಲ್ಲೆಯ ಶಿಕ್ಷಕಿಯೊಬ್ಬರಿಗೆ (ಹೆಸರು ಗೌಪ್ಯ) ಬರೋಬ್ಬರಿ ₹40.85 ಲಕ್ಷ ರೂಪಾಯಿ ವಂಚಿಸಿರುವ ಪ್ರಕರಣ ಬೆಳಕಿಗೆ ಬಂದಿದೆ. ವಂಚನೆಗೆ ಒಳಗಾದ ಶಿಕ್ಷಕಿಯ ಇನ್‌ಸ್ಟಾಗ್ರಾಂನಲ್ಲಿ “ಷೇರುಗಳಲ್ಲಿ ಹೂಡಿಕೆ ಕುರಿತು ಉಚಿತ ಸಲಹೆ” ಎಂಬ ಜಾಹೀರಾತು ನಂಬಿ ಅದನ್ನ ಕ್ಲಿಕ್ ಮಾಡಿದ್ದಾರೆ. ಆ ಬಳಿಕ ಶಿಕ್ಷಕಿಯ ಮೊಬೈಲ್ ಸಂಖ್ಯೆ ಒಂದು ವಾಟ್ಸಪ್ ಗ್ರೂಪ್‌ಗೆ ಸೇರ್ಪಡೆಯಾಗಿದೆ. ಆ ಗುಂಪಿನಲ್ಲಿ ಹಲವರು ಷೇರಿನಲ್ಲಿ ಹೂಡಿಕೆ ಮಾಡಿ ದೊಡ್ಡ ಲಾಭ ಗಳಿಸಿರುವ ಕುರಿತು ಮಾಹಿತಿಗಳನ್ನು ಹಂಚಿಕೊಳ್ಳುತ್ತಿದ್ದರು.

- Advertisement -

ಮಲೆನಾಡು ಟುಡೆ ವಾಟ್ಸಾಪ್ ಗ್ರೂಪ್​ ಸೇರಲು ಇಲ್ಲಿ ಕ್ಲಿಕ್ ಮಾಡಿ

ಇದರಿಂದ ಪ್ರಭಾವಿತರಾದ ಶಿಕ್ಷಕಿಯು ವಾಟ್ಸಪ್ ಗ್ರೂಪ್‌ನ ಅಡ್ಮಿನ್‌ಗೆ ಸಂದೇಶ ಕಳುಹಿಸಿದ್ದಾರೆ, ವಾಟ್ಸಪ್​ನ ಅಡ್ಮಿನ್  ಒಂದು ಲಿಂಕ್ ಕಳುಹಿಸಿ, ಪ್ರತಿಷ್ಠಿತ ಬ್ರೋಕರೇಜ್ ಸಂಸ್ಥೆಯ ಹೆಸರಿನಲ್ಲಿ ಖಾತೆ ತೆರೆಯುವುದಾಗಿ ನಂಬಿಸಿದ್ದಾನೆ. ನಂತರ ಹಲವು ಷೇರುಗಳ ಮೇಲೆ ಹೂಡಿಕೆ ಮಾಡುವಂತೆ ತಿಳಿಸಿ, ವಿವಿಧ ಬ್ಯಾಂಕ್ ಖಾತೆಗಳಿಗೆ ಹಣವನ್ನು ವರ್ಗಾಯಿಸುವಂತೆ ಸೂಚಿಸಿದ್ದಾನೆ ಎಂದು ಆರೋಪಿಸಲಾಗಿದೆ. ವಂಚಕರ ಮಾತು ನಂಬಿದ ಶಿಕ್ಷಕಿ ಹಂತ ಹಂತವಾಗಿ ಸುಮಾರು 40.85 ಲಕ್ಷ ರೂಪಾಯಿಗಳನ್ನು ವರ್ಗಾಯಿಸಿದ್ದರು. ಆನಂತರ ಲಾಭಾಂಶ ಬರದ ಕಾರಣ ಅನುಮಾನ ಗೊಂಡು ವಿಚಾರಿಸಿದಾಗ ತಾವು ಮೋಸಹೋಗಿರುವುದು ಅವರಿಗೆ ಗೊತ್ತಾಗಿದೆ. ಈ ಸಂಬಂಧ ಶಿವಮೊಗ್ಗದ ಸಿ.ಇ.ಎನ್ (ಸೈಬರ್ ಎಕನಾಮಿಕ್ ನಾರ್ಕೋಟಿಕ್ಸ್) ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆ ಕೈಗೊಂಡಿದ್ದಾರೆ.

car decor

Shivamogga news 15-06-2025 ಖ್ಯಾತ ಶಾಸನತಜ್ಞ ಡಾ. ಜಗದೀಶ ಅಬಸಿಬಾಗಿಲವರ್​ ನಿಧನ

ಶಿವಮೊಗ್ಗ: ಪ್ರಖ್ಯಾತ ಇತಿಹಾಸಕಾರ, ಶಾಸನತಜ್ಞ ಮತ್ತು ಸಿವಿಲ್ ಇಂಜಿನಿಯರ್ ಡಾ. ಜಗದೀಶ ಅಬಸಿಬಾಗಿಲವರ್ (65) ಅವರು  ನಗರದ ಖಾಸಗಿ ಆಸ್ಪತ್ರೆಯಲ್ಲಿ ಹೃದಯಾಘಾತದಿಂದ ನಿಧನರಾದರು. ಅವರು ಪತ್ನಿ, ಇಬ್ಬರು ಪುತ್ರರು ಮತ್ತು ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ವೃತ್ತಿಯಿಂದ ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮದಲ್ಲಿ (ಕೆಎಸ್‌ಎಸ್‌ಐಡಿಸಿ) ಮುಖ್ಯ ಇಂಜಿನಿಯರ್ ಆಗಿ ಸೇವಾ ನಿವೃತ್ತಿ ಹೊಂದಿದ್ದ ಡಾ. ಜಗದೀಶ ಅವರು, ಪ್ರವೃತ್ತಿಯಿಂದ ಇತಿಹಾಸ ಮತ್ತು ಶಾಸನಶಾಸ್ತ್ರದಲ್ಲಿ ಅಪಾರ ಆಸಕ್ತಿ ಹೊಂದಿದ್ದರು. ಇಂಜಿನಿಯರ್ ಆಗಿದ್ದರೂ, ಬಾಹ್ಯವಾಗಿ ಇತಿಹಾಸದಲ್ಲಿ ಬಿ.ಎ., ಎಂ.ಎ. ಪದವಿ ಪಡೆದು, “ಮಧ್ಯ ಯುಗೀನ ಕರ್ನಾಟಕದಲ್ಲಿ ತೂಕ ಮತ್ತು ಅಳತೆ” ವಿಷಯದ ಕುರಿತು ಸಂಶೋಧನೆ ನಡೆಸಿ ಕುವೆಂಪು ವಿಶ್ವವಿದ್ಯಾಲಯದಿಂದ ಪಿಎಚ್.ಡಿ. ಪದವಿ ಪಡೆದಿದ್ದರು.

shivamogga news 15

ಕರ್ನಾಟಕ ಇತಿಹಾಸ ಅಕಾಡೆಮಿಯು ಸಂಶೋಧನಾ ಕ್ಷೇತ್ರಕ್ಕೆ ನೀಡುವ ಪ್ರತಿಷ್ಠಿತ ಸೂರ್ಯಕೀರ್ತಿ ಪ್ರಶಸ್ತಿಗೂ ಅವರು ಭಾಜನರಾಗಿದ್ದರು. ನೂರಾರು ವಿಚಾರ ಸಂಕಿರಣಗಳಲ್ಲಿ ವಿದ್ವತ್ಪೂರ್ಣ ಪ್ರಬಂಧಗಳನ್ನು ಮಂಡಿಸಿ, ಹೊಸ ವಿಷಯಗಳ ಮೇಲೆ ಬೆಳಕು ಚೆಲ್ಲಿದ್ದ ಡಾ. ಅಬಸಿಬಾಗಿಲ, ಅನೇಕ ಯುವ ಸಂಶೋಧಕರಿಗೆ ಶಾಸನಶಾಸ್ತ್ರದಲ್ಲಿ ಮಾರ್ಗದರ್ಶಕರಾಗಿದ್ದರು. ಭಾರತೀಯ ಇತಿಹಾಸ ಸಂಕಲನ ಸಮಿತಿಯ ಶಿವಮೊಗ್ಗ ಜಿಲ್ಲಾ ಘಟಕದ ನಿರ್ದೇಶಕರಲ್ಲೊಬ್ಬರಾಗಿಯೂ ಸೇವೆ ಸಲ್ಲಿಸಿದ್ದರು.

ಅವರ ನಿಧನವು ಇತಿಹಾಸ ಸಂಶೋಧನಾ ಕ್ಷೇತ್ರಕ್ಕೆ ತುಂಬಲಾರದ ನಷ್ಟ ಎಂದು ಭಾರತೀಯ ಇತಿಹಾಸ ಸಂಕಲನ ಸಮಿತಿಯ ಪದಾಧಿಕಾರಿಗಳಾದ ಡಾ. ಬಾಲಕೃಷ್ಣ ಹೆಗಡೆ, ನಿತಿನ್ ಓಲಿಕಾರ್ ಮತ್ತು ಅಜಯಕುಮಾರ್ ಶರ್ಮಾ ಸಂತಾಪ ವ್ಯಕ್ತಪಡಿಸಿದ್ದಾರೆ. ಮೃತರ ಅಂತ್ಯಕ್ರಿಯೆ ನಾಳೆ (ಜೂನ್ 16, 2025) ಬೆಳಿಗ್ಗೆ ಅವರ ಹುಟ್ಟೂರಾದ ರಟ್ಟಿಹಳ್ಳಿ ಸಮೀಪದ ಕೂಲಿಯಲ್ಲಿ ನಡೆಯಲಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ.

shivamogga news 15

 

malenadutoday add
TAGGED:shivamogga news 15
Share This Article
Facebook Whatsapp Whatsapp Telegram Threads Copy Link
Previous Article dc notice to kantara 1 ' dc notice to kantara 1 / ಹಿನ್ನೀರಿನಲ್ಲಿ ಕಾಂತಾರದ ನಿಗೂಢತೆ! / ನೋಟಿಸ್​ ಕೊಟ್ಟು ವಿಚಾರ ತಿಳಿಯಲು ಮುಂದಾದ ಡಿಸಿ
Next Article train information today news  train information today news 15-06-2025 / ತಾಳಗುಪ್ಪ, ಶಿವಮೊಗ್ಗ, ಮೈಸೂರು, ಬೆಂಗಳೂರು , ಅರಸೀಕೆರೆ ಟ್ರೈನ್​ ಸಂಚಾರದಲ್ಲಿ ಬದಲಾವಣೆ! ವಿವರ ಇಲ್ಲಿದೆ
Leave a Comment

Leave a Reply Cancel reply

Your email address will not be published. Required fields are marked *

Your Trusted Source for Accurate and Timely Updates!

Our commitment to accuracy, impartiality, and delivering breaking news as it happens has earned us the trust of a vast audience. Stay ahead with real-time updates on the latest events, trends.
FacebookLike
XFollow
InstagramFollow
LinkedInFollow
MediumFollow
QuoraFollow
- Advertisement -
Ad image

You Might Also Like

kantara chapter 1 shooting
SHIMOGA NEWS LIVE

Shivamogga news today 08-06-2025 / ಹಲ್ಲೆ, ವಂಚನೆ, ಶಾಸನ ಮತ್ತು 11 ಲಕ್ಷದ ಚಿನ್ನದ ಕಥೆ!ಶಿವಮೊಗ್ಗದಲ್ಲಿ ಏನೆಲ್ಲಾ ನಡೀತು!?

By Malenadu Today

ಹುಲಿ ಸಂರಕ್ಷಿತ ಪ್ರದೇಶಕ್ಕಾಗಿ ತಮ್ಮ ಸರ್ವಸ್ವವನ್ನೇ ತ್ಯಾಗ ಮಾಡಿದ ಸಂತ್ರಸ್ಥರ ನೆಲದಲ್ಲಿ ನಡೆಯಬೇಕಿತ್ತು ರಜತ ಮಹೋತ್ಸವ ಕಾರ್ಯಕ್ರಮ…ಯಾಕಂತಿರಾ..?

By 2
shivamogga sp today
SHIMOGA NEWS LIVE

shivamogga sp today / ದೊಡ್ಡಪೇಟೆ ಪೊಲೀಸರ ಕಾರ್ಯಾಚರಣೆ / 7 ಆಸಾಮಿಗಳು ಅರೆಸ್ಟ್​!

By Malenadu Today

ಆಗಸ್ಟ್‌ 21 ರಿಂದ ಆಗಸ್ಟ್ 31ರವರೆಗೆ ನೆಹರೂ ಕ್ರೀಡಾಂಗಣಕ್ಕೆ ಸಾರ್ವಜನಿಕರ ಪ್ರವೇಶ ನಿಷೇಧ

By 13
Malenadu Today
Facebook Twitter Youtube Rss Medium

About US

 

Malenadu Today Jana Manada Jeevanadi Daily News Media and kannada news channel and shimoga News , organisation that has been providing special reports of public news shivamogga . The purpose of MalenaduToday or Malnadtoday is to bring interesting news from Shimoga, Chikkamagaluru, Hassan, Davanagere, Haveri, Uttara Kannada and the wonders of Malnad, which are hitherto unknown to the people.

Top Categories
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Usefull Links
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA

© Malenadu Today kannada News. All Rights Reserved.

Welcome Back!

Sign in to your account

Username or Email Address
Password

Lost your password?

Not a member? Sign Up