ಹಬ್ಬಕ್ಕೆ 2000 ಬಸ್‌ ವ್ಯವಸ್ಥೆ ಕಲ್ಪಿಸಿದ KSRTC | ಪಿಕಪ್‌ ಪಾಯಿಂಟ್‌ ಎಲ್ಲಿ? ಯಾವೆಲ್ಲಾ ಊರಿಗಿದೆ ಸ್ಪೆಷಲ್‌ ಬಸ್‌!?

ಹಂಚಿಕೊಳ್ಳಿ
WhatsApp Facebook X Telegram
ಹಬ್ಬಕ್ಕೆ 2000 ಬಸ್‌ ವ್ಯವಸ್ಥೆ ಕಲ್ಪಿಸಿದ KSRTC | ಪಿಕಪ್‌ ಪಾಯಿಂಟ್‌ ಎಲ್ಲಿ? ಯಾವೆಲ್ಲಾ ಊರಿಗಿದೆ ಸ್ಪೆಷಲ್‌ ಬಸ್‌!?

SHIVAMOGGA| MALENADUTODAY NEWS | ಮಲೆನಾಡು ಟುಡೆ  Mar 27, 2025 ‌‌ ‌‌

ಪ್ರತಿವರ್ಷದಂತೆ ಕೆಎಸ್‌ಆರ್‌ಟಿಸಿ ಯುಗಾದಿ ಹಾಗೂ ರಂಜಾನ್‌ ಹಬ್ಬದ ಪ್ರಯುಕ್ತ ಹೆಚ್ಚುವರಿ ಬಸ್‌ಗಳನ್ನು ರಸ್ತೆಗಿಳಿಸುತ್ತಿದೆ. ಈ ಸಲ ಸುಮಾರು 2000 ವಿಶೇಷ ಬಸ್‌ಗಳನ್ನು KSRTC ಹಬ್ಬಕ್ಕಾಗಿ ವಿವಿಧ ಊರುಗಳಿಗೆ ಸಂಚಾರಕ್ಕೆ ಅನುವು ಮಾಡಿಕೊಟ್ಟಿದೆ. 

ಮಾರ್ಚ್‌ 28 ರಿಂದ 30 ರವರೆಗೆ ಬೆಂಗಳೂರಿನಿಂದ ವಿವಿಧ ಪ್ರದೇಶಗಳಿಗೆ ಹಾಗೂ ಮಾರ್ಚ್‌ 31ರಂದು ವಿವಿಧೆಡೆಯಿಂದ ಬೆಂಗಳೂರಿಗೆ ವಿಶೇಷ ಬಸ್‌ಗಳು ಸಂಚಾರ ನಡೆಸಲಿದೆ. ಬೆಂಗಳೂರಿನ ಕೆಂಪೇಗೌಡ ಬಸ್ ನಿಲ್ದಾಣ, ಮೈಸೂರು ರಸ್ತೆ ಬಸ್ ನಿಲ್ದಾಣ ಮತ್ತು ಶಾಂತಿನಗರದ ಬಿಎಂಟಿಸಿ ಬಸ್ ನಿಲ್ದಾಣಗಳಿಂದ ಈ ಬಸ್‌ಗಳನ್ನು ಪಿಕಪ್‌ ಮಾಡಿಕೊಳ್ಳಬಹುದಾಗಿದೆ. 

ಎಲ್ಲೆಲ್ಲಿಗೆ ವಿಶೇಷ ಬಸ್‌ ವ್ಯವಸ್ಥೆ

ಧರ್ಮಸ್ಥಳ, ಕುಕ್ಕೆ ಸುಬ್ರಮಣ್ಯ, ಶಿವಮೊಗ್ಗ, ಹಾಸನ, ಮಂಗಳೂರು, ಕುಂದಾಪುರ, ಶೃಂಗೇರಿ, ಹೊರನಾಡು, ದಾವಣಗೆರೆ, ಹುಬ್ಬಳ್ಳಿ, ಧಾರವಾಡ, ಬೆಳಗಾವಿ, ವಿಜಯಪುರ, ಗೋಕರ್ಣ, ಶಿರಸಿ, ಕಾರವಾರ, ರಾಯಚೂರು, ಕಲಬುರಗಿ, ಬಳ್ಳಾರಿ, ಕೊಪ್ಪಳ, ಯಾದಗಿರಿ, ಬೀದರ್, ಮೈಸೂರು, ಹುಣಸೂರು, ಪಿರಿಯಾಪಟ್ಟಣ, ವಿರಾಜಪೇಟೆ, ಕುಶಾಲನಗರ, ಮಡಿಕೇರಿ ಹಾಗೂ ಹೊರರಾಜ್ಯಗಳ ಮಧುರೈ, ಕುಂಭಕೋಣಂ, ಚೆನ್ನೈ, ಕೊಯಮತ್ತೂರು, ತಿರುಚ್ಚಿ, ಪಾಲಕ್ಕಾಡ್, ತ್ರಿಶ್ಶೂರ್, ಎರ್ನಾಕುಲಂ, ತಿರುಪತಿ, ವಿಜಯವಾಡ ಸಹಿತ ವಿವಿಧೆಡೆ ವಿಶೇಷ ಬಸ್‌ಗಳು ಸಂಚರಿಸಲಿವೆ. 

Dharmasthala, Kukke Subramanya, Shimoga, Hassan, Mangalore, Kundapur, Sringeri, Horanadu, Davangere, Hubli, Dharwad, Belgaum, Vijayapura, Gokarna, Sirsi, Karwar, Raichur, Kalaburagi, Bellary, Koppal, Yadgir, Bidar, Mysore, Hunsur, Periyapatna, Virajpet, Kushalnagar, Madikeri, Madurai, Kumbakonam, Chennai, Coimbatore, Trichy, Palakkad, Thrissur, Ernakulam, Tirupati, Vijayawada

ಹಂಚಿಕೊಳ್ಳಿ
WhatsApp Facebook X Telegram
13
ಲೇಖಕರ ಬಗ್ಗೆ

13

Malenadu Today Contributor