ಶಿವಮೊಗ್ಗದಲ್ಲಿ ನಡೆಯಬೇಕಿದ್ದ ಕಂಬಳ ರದ್ದು, ಕಾರಣವೇನು

ಹಂಚಿಕೊಳ್ಳಿ
WhatsApp Facebook X Telegram
ಶಿವಮೊಗ್ಗದಲ್ಲಿ ನಡೆಯಬೇಕಿದ್ದ ಕಂಬಳ ರದ್ದು, ಕಾರಣವೇನು

SHIVAMOGGA | MALENADUTODAY NEWS | ಮಲೆನಾಡು ಟುಡೆ |‌‌ Mar 31, 2025

ಶಿವಮೊಗ್ಗದಲ್ಲಿ ಇದೇ ಮೊದಲ ಬಾರಿಗೆ ಏಪ್ರಿಲ್‌ 19 ಹಾಗೂ 20 ಕ್ಕೆ ನಡೆಯಬೇಕಿದ್ದ ಕಂಬಳ ರದ್ದಾಗಿದೆ. ಕಂಬಳ ಕುರಿತು ಪ್ರಾಣಿ ದಯಾ ಸಂಘ ಕೋರ್ಟ್‌ ಮೊರೆ ಹೋಗಿರುವ ಕಾರಣ ಶಿವಮೊಗ್ಗದಲ್ಲಿ ಕಂಬಳವನ್ನು ರದ್ದುಪಡಿಸಲಾಗಿದೆ ಎನ್ನಲಾಗಿದೆ.

ಶಿವಮೊಗ್ಗದಲ್ಲಿ ಅದ್ದೂರಿಯಾಗಿ ಕಂಬಳವನ್ನು ನಡೆಸಲು ನಿರ್ಧರಿಸಲಾಗಿತ್ತು. ಅಷ್ಟೇ ಅಲ್ಲದೆ ಅದಕ್ಕೆ ಗುದ್ದಲಿ ಪೂಜೆಯನ್ನು ಸಹ ನೆರವೇರಿಸಲಾಗಿತ್ತು.  ಮಾಚೇನಹಳ್ಳಿಯಲ್ಲಿರುವ 16 ಎಕರೆ ಜಾಗದಲ್ಲಿ ಟ್ರ್ಯಾಕ್‌ನ್ನು ನಿರ್ಮಿಸಲು ಯೋಜಿಸಲಾಗಿತ್ತು. ಸುಮಾರು 6 ಕೋಟಿ ವೆಚ್ಚದಲ್ಲಿ ಈ ಕಂಬಳವನ್ನು ನಡೆಸಲು ತೀರ್ಮಾನಿಸಲಾಗಿತ್ತು. ಅದರೆ ಪ್ರಾಣಿ ದಯಾ ಸಂಘ ನೂರಾರು ಕಿಲೋಮೀಟರ್‌ ದೂರ ಕೋಣಗಳನ್ನು ಕರೆದುಕೊಂಡು ಹೋಗುವುದು ಸರಿಯಲ್ಲ, ಇದರಿಂದ ಪ್ರಾಣಿಗಳಿಗೆ ತೊಂದರೆಯಾಗುತ್ತದೆ ಎಂದು ಆಕ್ಷೇಪ ವ್ಯಕ್ತಪಡಿಸಿದೆ. ಆ ಹಿನ್ನಲೆ ಇದೀಗ ಜಿಲ್ಲಾ ಕಂಬಳ ಸಮಿತಿಗೆ ನ್ಯಾಯಾಲಯದಿಂದ ನೋಟೀಸ್‌ ಜಾರಿಯಾಗಿದೆ. ಆದ್ದರಿಂದ ಶಿವಮೊಗ್ಗದಲ್ಲಿ ನಡೆಸುವ ಕಂಬಳವನ್ನು ಏಪ್ರಿಲ್‌ 19 ರಂದು ಬೈಂದೂರಿನಲ್ಲಿ ನಡೆಸಲು ತೀರ್ಮಾನಿಸಲಾಗಿದೆ.  ಶಿವಮೊಗ್ಗದಲ್ಲಿ ಮೊದಲ ಬಾರಿಗೆ ಕಂಬಳ ಆಯೋಜಿಸಲಾಗಿದ್ದು, ಈ ಹಿನ್ನಲೆ ಕಂಬಳ ನೋಡಬೇಕೆಂದು ಕೊಂಡಿದ್ದ ಎಷ್ಟೋ ಜನರ ಆಸೆಗೆ ತಣ್ಣಿರು ಎರೆಚಿದಂತಾಗಿದೆ.

SUMMARY | Kambala has been cancelled in Shivamogga as the Animal Daya Sangha has approached the court over kambala.

KEYWORDS |  Kambala,  cancelled,  Shivamogga, 

ಹಂಚಿಕೊಳ್ಳಿ
WhatsApp Facebook X Telegram
131
ಲೇಖಕರ ಬಗ್ಗೆ

131

Malenadu Today Contributor