SHIVAMOGGA | MALENADUTODAY NEWS | ಮಲೆನಾಡು ಟುಡೆ | Mar 31, 2025
ಚಿಕ್ಕಮಗಳೂರು | ಹಸು ಕಟ್ಟಲು ತೆರಳಿದ್ದ ರೈತನ ಮೇಲೆ ಕಾಡಾನೆ ದಾಳಿ ನಡೆಸಿದ್ದು, ರೈತ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನಲ್ಲಿ ನಡೆದಿದೆ. ವೆಂಕಟೇಶ್ 58 ಮೃತ ರೈತ.
ರೈತ ವೆಂಕಟೇಶ ಕಳೆದ ರಾತ್ರಿ ಮನೆ ಮುಂದೆ ತೋಟದಲ್ಲಿ ಹಸು ಕಟ್ಟಲು ತೆರಳಿದ್ದರು. ಆ ವೇಳೆ ರೈತನಿಗೆ ಆನೆಯ ಉಸಿರಾಟದ ಶಬ್ದ ಕೇಳಿಸಿದೆ. ಆಗ ಬ್ಯಾಟರಿ ಬಿಟ್ಟು ನೋಡಿದಾಗ ತೋಟದಲ್ಲಿ ಒಂಟಿ ಸಕಲಲಗ ಕಾಣಿಸಿದೆ. ರೈತನನ್ನು ನೋಡಿದ ಆನೆ ಆತನನ್ನು ತನ್ನ ಸೊಡಿಲಿಗೆ ಸುತ್ತಿಕೊಂಡು ತೆಂಗಿನ ಮರಕ್ಕೆ ಹೊಡೆದಿದೆ. ಇದರ ಪರಿಣಾಮ ತೀವ್ರ ಗಾಯಗೊಂಡ ವೆಂಕಟೇಶ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಒಂಟಿ ಸಲಗದ ಕಾಟಕ್ಕೆ ಬೇಸತ್ತಿರೋ ಲಕ್ಕವಳ್ಳಿ ಹೋಬಳಿ ಜನ ನಮಗೆ ನೀವು ಕೊಡುವ ಪರಿಹಾರ ಜೀವವನ್ನು ವಾಪಾಸ್ಸು ತಂದು ಕೊಡುವುದಿಲ್ಲ. ದಯವಿಟ್ಟು ಆನೆಯನ್ನ ಸ್ಥಳಾಂತರಿಸಿ ಎಂದು ಅರಣ್ಯಾಧಿಕಾರಿಗಳಿಗೆ ಮನವಿ ಮಾಡಿದ್ದಾರೆ.
SUMMARY | A farmer died on the spot after a wild elephant attacked him when he had gone to tie a cow.
KEYWORDS | Chikkamagaluru, farmer, died, elephant attacked,