SHIVAMOGGA | MALENADUTODAY NEWS | ಮಲೆನಾಡು ಟುಡೆ | Mar 22, 2025

ಶಿವಮೊಗ್ಗ| ವಿಧಾನ ಮಂಡಲ ಅಧಿವೇಶನದಲ್ಲಿ ಇತ್ತೀಚೆಗೆ ಹನಿಟ್ರ್ಯಾಪ್ ವಿಷಯಗಳು ಹೆಚ್ಚಾಗಿ ಚರ್ಚೆಯಾಗುತ್ತಿದ್ದು, ಹನಿ ಟ್ರ್ಯಾಪ್ ಗೆ ಒಳಪಟ್ಟ 48 ಜನ ರಾಜಕೀಯ ಮುಖಂಡರುಗಳನ್ನು ಕೂಡಲೇ ವಿಚಾರಣೆಗೆ ಒಳಪಡಿಸಬೇಕೆಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಕಾರ್ಯದರ್ಶಿಗಳಾದ ಕೆ ದೇವೇಂದ್ರಪ್ಪ ರಾಜ್ಯಪಾಲರಿಗೆ ಪತ್ರ ಬರೆದಿದ್ದಾರೆ.
ಇಂದು ಈ ಕುರಿತು ಇಂದು ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ಕಳೆದು 15 ದಿನಗಳಿಂದ ವಿಧಾನ ಮಂಡಲ ಅಧಿವೇಶನದಲ್ಲಿ ಅಹಿತಕರ ಘಟನೆಗಳು ನಡೆಯುತ್ತಿವೆ. ಇದು ರಾಜ್ಯದ ನಾಗರಿಕ ಸಮಾಜಗಳು ತಲೆ ತಗ್ಗಿಸುವಂತಹ ಪರಿಸ್ಥಿತಿಯಾಗಿದೆ. ಜನಪ್ರತಿನಿಧಿಗಳು ಕೀಚಕರ ರೀತಿಯಲ್ಲಿ ವರ್ತಿಸುತ್ತಿದ್ದಾರೆ. ಈ ಕೂಡಲೇ ಈ ಪ್ರಕರಣದಲ್ಲಿ ಭಾಗವಹಿಸಿರುವ 48 ವ್ಯಕ್ತಿಗಳು ಯಾರೆಂದು ಬಹಿರಂಗಪಡಿಸಬೇಕು. ಈ ಟ್ರ್ಯಾಪ್ ಗೆ ಒಳಪಟ್ಟಂತಹ ವ್ಯಕ್ತಿಗಳನ್ನು ಕೂಡಲೇ ವಿಚಾರಣೆಗೆ ಒಳಪಡಿಸಬೇಕು.ಈ ಹನಿ ಟ್ರ್ಯಾಪ್ ನಲ್ಲಿ ಭಾಗವಹಿಸಿರುವ ಹೆಣ್ಣು ಮಕ್ಕಳು ಏನಾದರೂ ವಿವಿಧ ಆಸೆ ಅಮಿಷಗಳಿಗೆ ಲೈಂಗಿಕ ದೌರ್ಜನ್ಯಕ್ಕೆ ಒಳಪಟ್ಟಿದರೆ ಅಂತ ಹೆಣ್ಣು ಮಕ್ಕಳನ್ನು ವಿಚಾರಣೆಗೊಳಪಡಿಸಿ. ಆ ಹೆಣ್ಣು ಮಕ್ಕಳಿಗೆ ಸೂಕ್ತ ರಕ್ಷಣೆ ಕೊಡಬೇಕು. ಹಾಗೂ ಅದರಲ್ಲಿ ಭಾಗವಹಿಸಿದ ಗಣ್ಯ ವ್ಯಕ್ತಿಗಳನ್ನು ಈ ಕೂಡಲೇ ಬಂಧಿಸಿ ಕಾನೂನು ಕ್ರಮ ಕೈಗೊಳ್ಳಬೇಕು. ಅದೇ ರೀತಿ ಗಣ್ಯ ವ್ಯಕ್ತಿಗಳು ಏನಾದರೂ ಆ ಹೆಣ್ಣು ಮಕ್ಕಳಿಂದ ಲೈಂಗಿಕ ದೌರ್ಜನ್ಯದ ಹೆಸರಿನಲ್ಲಿ ಹನಿಟ್ರಾಪ್ ಮಾಡಿಕೊಂಡು ಗಣ್ಯ ವ್ಯಕ್ತಿಗಳನ್ನು ಬ್ಲಾಕ್ ಮೇಲ್ ಮಾಡುತ್ತಿದ್ದರೆ ಯಾರೇ ಆದರೂ ಕೂಡ ಆ ಹೆಣ್ಣು ಮಕ್ಕಳನ್ನು ಕೂಡಲೇ ಬಂಧಿಸಿ ಅವರುಗಳ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು. ರಾಜಣ್ಣ ವಿಧಾನಮಂಡಲದಲ್ಲಿ ಇಂತಹ ಹೇಳಿಕೆಯನ್ನು ನೀಡಿದ್ದರಿಂದ ನಮ್ಮಂತಹ ಲಕ್ಷಾಂತರ ಕಾರ್ಯಕರ್ತರಿಗೆ ಇಂತಹ ಪಕ್ಷ ಬೇಕಿತ್ತಾ ಎಂಬ ಮುಜುಗರ ಉಂಟಾಗಿದೆ. ಈ ಎಲ್ಲಾ ಪ್ರಕರಣವು ಸತ್ಯಂಶ ಹೊರಬರಬೇಕಾದರೆ ಇದರ ಮಂಡಲ ಅಧಿವೇಶನದಲ್ಲಿ ದಾಖಲಾಗಿರುವ ಈ ಪ್ರಕರಣವನ್ನು ಈ ಕೂಡಲೇ ಈ ಕೂಡಲೇ ಸರ್ಕಾರದ ಎಸ್ಐಟಿ ಸಂಸ್ಥೆಗೆ ತನಿಖೆಗೆ ಒಳಪಡಿಸಬೇಕು ಎಂದರು.

ಶಾಸಕ ಮುನಿರತ್ನರವರನ್ನು ಮಂಪರು ಪರೀಕ್ಷೆಗೆ ಒಳಪಡಿಸಿ
ವಿಧಾನಮಂಡಲ ಅಧಿವೇಶನದಲ್ಲಿ ಆರ್ ಆರ್ ನಗರ ಶಾಸಕ ಮುನಿರತ್ನಂ ಅವರು ಹೇಳಿಕೆ ಕೊಡುತ್ತಿರುವುದು ರಾಜ್ಯದ ಸಾರ್ವಜನಿಕರಲ್ಲಿ ಗೊಂದಲವನ್ನು ಉಂಟುಮಾಡುತ್ತಿದೆ. ನನ್ನ ಜೀವಕ್ಕೆ ಸಂಚು ಉಂಟಾಗುತ್ತಿದೆ ಎಂದು ಹೇಳಿಕೆ ನೀಡುವ ಮೂಲಕ ಉನ್ನತ ಕುಟುಂಬದ ಹಾಗೂ ರಾಜ್ಯ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾದ ಡಿಕೆ ಶಿವಕುಮಾರ್ ಅವರ ಘನತೆಗೆ ದಕ್ಕೆ ಉಂಟುಮಾಡುತ್ತಿದ್ದಾರೆ. ಕೆಲಸಕ್ಕೆ ಬೇಕಾದಾಗ ಡಿಕೆ ಶಿವಕುಮಾರ್ ಅವರನ್ನು ಹೊಗಳುವುದು. ಬೇಡವಾದಾಗ ಅವರನ್ನು ತೆಗಳುವುದು ಒಳ್ಳೆಯದಲ್ಲ. ಮುನಿರತ್ನ ರವರ ಇಂತಹ ಹೇಳಿಕೆಗಳನ್ನು ಪಕ್ಷದ ಚೌಕಟ್ಟಿನಲ್ಲಿ ಸಹಿಸಲಾಗುವುದಿಲ್ಲ. ಮುನಿರತ್ನಂ ರವರ ಕುಟುಂಬ ಹಿನ್ನಲೆ ಹಾಗೂ ಗೂಂಡಾ ಪ್ರೌವೃತ್ತಿ ಹಿಂಸಾತ್ಮಕ ಹಿನ್ನಲೆಯವರದಾಗಿದ್ದು ಅವರ ಹಿನ್ನೆಲೆಯನ್ನು ಮೊದಲು ಪರಿಗಣಿಸಿ ನಂತರ ಹೇಳಿಕೆ ಕೊಡುವುದು ಉತ್ತಮ ಎಂದು ನಾವು ಪರಿಗಣಿಸುತ್ತೇವೆ. ಇವರ ಹೇಳಿಕೆಯನ್ನು ರಾಜ್ಯ ಸರ್ಕಾರವು ಪರಿಗಣಿಸಿ ಕೂಡಲೇ ಇವರನ್ನು ಮಂಪರ್ ಪರೀಕ್ಷೆ ಒಳಪಡಿಸಿ ಇವರಿಂದ ವಾಸ್ತವಂಶವನ್ನು ಸಂಗ್ರಹಿಸಿ ಇಂತಹ ಹೇಳಿಕೆಯಿಂದ ಮುಂದಾಗುವಂತಹ ಇವರ ದುರಾಲೋಚನೆಯನ್ನು ತಡೆಗಟ್ಟಬೇಕೆಂದು ತಮ್ಮಲ್ಲಿ ಮನವಿ ಮಾಡಿಕೊಳ್ಳುತ್ತೇವೆ ಎಂದರು.
SUMMARY | The issues of honey trap have been the subject of much discussion in the assembly session recently and the 48 political leaders who have been subjected to honey trap should be questioned immediately.
KEYWORDS | honey trap, assembly session, political news,