SHIVAMOGGA | MALENADUTODAY NEWS | ಮಲೆನಾಡು ಟುಡೆ | Feb 24, 2025

ಶಿವಮೊಗ್ಗ | ಅಬ್ಬಲಗೆರೆಯ ನವ್ಯಶ್ರೀ ಈಶ್ವರವನ ಶಿವರಾತ್ರಿ ಉತ್ಸವದ ವಿಶೇಷ ಪರಿಸರ ಕುಂಭ, ಪುಯಾಗರಾಜ್ ಮಹಾ ಕುಂಭಮೇಳದ ತ್ರಿವೇಣಿ ಸಂಗಮದ ಪವಿತ್ರ ತೀರ್ಥದಿಂದ ಶಿವನಿಗೆ ಜಲಾಭಿಷೇಕ ಸೇರಿದಂತೆ ಪ್ರಕೃತಿ ಸಂರಕ್ಷಣೆ ಹಾಗೂ ಪರಿಸರ ಜಾಗೃತಿಯ ಶಿವಸಂಕಲ್ಪ ಕೈಗೊಳ್ಳುವ ಕಾರ್ಯಕ್ರಮವನ್ನ ಫೆಬ್ರವರಿ 26 ರಂದು ಆಯೋಜಿಸಲಾಗಿದೆ ಎಂದು ಈಶ್ವರವನದ ಮುಖ್ಯಸ್ಥ ನವ್ಯಶ್ರೀ ನಾಗೇಶ್ ತಿಳಿಸಿದರು.
ಸೋಮವಾರ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, 26 ರ ಬೆಳಗ್ಗೆ 10 ಗಂಟೆಗೆ ರೆಡ್ ಕ್ರಾಸ್ ಹಾಗೂ ರೋಟರಿ ಬ್ಲಡ್ ಬ್ಯಾಂಕ್ ನೇತೃತ್ವದಲ್ಲಿ ರಕ್ತದಾನ ಶಿಬಿರ ಆಯೋಜಿಸಿದ್ದು, ಚಂದನ ವಾಹಿನಿಯ ಥಟ್ ಅಂತ ಹೇಳಿ ಖ್ಯಾತಿಯ ವೈದ್ಯ ಡಾ. ನಾ.ಸೋಮಶೇಖರ್ ರಕ್ತದಾನ ಶಿಬಿರದ ಉದ್ಘಾಟನೆ ನೆರವೇರಿಸುವ ಮೂಲಕ ಶಿವರಾತ್ರಿ ಉತ್ಸವಕ್ಕೆ ಚಾಲನೆ ನೀಡಲಿದ್ದಾರೆ.

ನಂತರ 11 ಗಂಟೆಗೆ ಪರಿಸರಕ್ಕೆ ಸಂಬಂಧ ಪಟ್ಟ ವಿಷಯಗಳ ಕುರಿತು ರಸಪ್ರಶ್ನೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಡಾ. ನಾ.ಸೋಮಶೇಖರ್ ನಡೆಸಿಕೊಡಲಿದ್ದಾರೆ. ಇದರಲ್ಲಿ 5 ತಂಡಗಳಾಗಿ 15 ಜನ ಅಭ್ಯರ್ಥಿಗಳು ಭಾಗವಹಿಸಲಿದ್ದು, ವಿಜೇತರಿಗೆ ಪುಸ್ತಕವನ್ನು ಬಹುಮಾನವಾಗಿ ನೀಡಲಾಗುವುದು. ಸಂಜೆ 6 ಗಂಟೆಗೆ ವೇದಿಕೆ ಕಾರ್ಯಕ್ರಮ ನಡೆಯಲಿದ್ದು,ಪ್ರಕೃತಿ ಮತ್ತು ಆಧ್ಯಾತ್ಮ ವಿಷಯದ ಕುರಿತು ಡಾ.ವೀಣಾ ಬನ್ನಂಜೆ ಉಪನ್ಯಾಸ ನೀಡಲಿದ್ದಾರೆ ಎಂದರು.
ಇನ್ನು ಈ ಬಾರಿಯ ‘ನವ್ಯಶ್ರೀ ಈಶ್ವರವನ ಪ್ರಶಸ್ತಿಗಳಾದ ಪರಿಸರ ಪ್ರಶಸ್ತಿಯನ್ನು ಪರೋಪಕಾರಂ ತಂಡಕ್ಕೆ ಸಾಮಾಜಿಕ ಪ್ರಶಸ್ತಿಯನ್ನು ಮುಷ್ಟಿ ಅಕ್ಕಿ ಯೋಜನೆ ತಂಡಕ್ಕೆ , ವೈಯಕ್ತಿಕ ಸಾಧನೆ ಪ್ರಶಸ್ತಿಯನ್ನು ಪ್ರೊ. ಬಿ.ಎಂ.ಕುಮಾರಸ್ವಾಮಿ ರವರಿಗೆ ಸಂಜೆ ನಡೆಯುವ ಕಾರ್ಯಕ್ರಮದಲ್ಲಿ ನಗರ ಶಾಸಕ ಎಸ್.ಎನ್.ಚನ್ನಬಸಪ್ಪ ಅವರು ಪ್ರಶಸ್ತಿ ಪ್ರಧಾನ ಮಾಡಲಿದ್ದಾರೆ ಎಂದರು.
SUMMARY | Navyashree Nagesh, head of Ishwaravana, said that a special eco-kumbh of Navyashree Eswaravana Shivaratri festival at Abbalagere, jalabhishekam to Lord Shiva from the holy theertha of Triveni Sangama of Puyagaraj Maha Kumbh Mela will be held on Feb. 26.
KEYWORDS | Ishwaravana, Shivaratri, Abbalagere,