SHIVAMOGGA | MALENADUTODAY NEWS | ಮಲೆನಾಡು ಟುಡೆ | Apr 5, 2025
ಶಿವಮೊಗ್ಗ | ಈದ್ಗಾ ಮೈದನದಲ್ಲಿ ಹಾಕಿರುವ ಬ್ಯಾರಿಗೇಡ್ ಗಳನ್ನು ಜಿಲ್ಲಾಡಳಿತ ಏಪ್ರಿಲ್ 8ರ ಒಳಗಾಗಿ ತೆರವುಗೊಳಿಸದೇ ಇದ್ದರೆ ಬಿಜೆಪಿ ವತಿಯಿಂದ ಬೃಹತ್ ಹೋರಾಟ ಕೈಗೊಳ್ಳುತ್ತೇವೆ ಎಂದು ಶಿವಮೊಗ್ಗ ಶಾಸಕರಾದ ಎಸ್ ಎನ್ ಚನ್ನಬಸಪ್ಪ ಎಚ್ಚರಿಸಿದರು.
ಇಂದು ನಗರದ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ಶಿವಮೊಗ್ಗ ನಗರದಲ್ಲಿ ಮಹಾನಗರ ಪಾಲಿಕೆಯ ಆಸ್ತಿಗಳನ್ನು ಲಪಟಾಯಿಸುವ ಕಾರ್ಯ ಸಾಕಷ್ಟು ವರ್ಷಗಳಿಂದ ನಡೆಯುತ್ತಾ ಬರುತ್ತಿದೆ. ಕೆಲವರು ಮುಟ್ಟಿದ್ದೆಲ್ಲಾ ನಮ್ಮದು ಎನ್ನುವ ದಾದಾಗಿರಿಯ ಮಾತುಗಳನ್ನು ಆಡುತ್ತಿದ್ದಾರೆ. ವಕ್ಫ್ ನ ಆಶ್ರಯದ ಜೊತೆಗೆ ತನ್ನ ಲ್ಯಾಂಡ್ ಮಾಫಿಯಾ ವನ್ನು ದೊಡ್ಡದು ಮಾಡಿಕೊಳ್ಳುವ ಪ್ರಯತ್ನ ಕೆಲ ಮುಸಲ್ಮಾನರು ಮಾಡುತ್ತಿದ್ದಾರೆ. ವಕ್ಫ್ ಕಮಿಟಿಯ ನೇತೃತ್ವದಲ್ಲಿ ಸಾರ್ವಜನಿಕರ ರೈತರ ಆಸ್ತಿಯನ್ನು ಹಿಂದೂ ದೇವಾಲಯವನ್ನು ಕಬಳಿಸುವ ಹುನ್ನಾರ ವಕ್ಫ್ ಮೂಲಕ ನಡೆಯುತ್ತಿದೆ. ಇದರ ನಡುವೆ ಶಿವಮೊಗ್ಗ ನಗರದಲ್ಲಿ ಮಹಾನಗರ ಪಾಲಿಕೆಯ ಆಸ್ತಿಯನ್ನು ವಕ್ಫ್ ಬೋರ್ಡ್ ಕಬಳಿಸುವ ಕೆಲಸ ನಡೆಯುತ್ತಿರುವುದು ವಿಪರ್ಯಾಸ. ಇಲ್ಲದ ನಕಲಿ ದಾಖಲೆ ಸೃಷ್ಟಿಸಿ ಇದು ನಮ್ಮ ನಮ್ಮ ಸ್ವತ್ತು ಎಂದು ಹೇಳಿ ಸಾರ್ವಜನಿಕಲ್ಲಿ ತಪ್ಪು ಸಂದೇಶವನ್ನು ನೀಡುತ್ತಿದ್ದಾರೆ. ಪಾರ್ಕ್ ಗೆ ಓಪನ್ ಪ್ಲೇಸ್ ಆಗಿ ಬಿಟ್ಟಿರುವ ಜಾಗವನ್ನೂ ಕಬಳಿಸಲು ಹೊರಟಿದ್ದಾರೆ. ಇದು ನಮ್ಮದು ಎಂದು ಹೇಳುತ್ತಿರುವುದು ಅವರ ಮಾನಸಿಕತೆಯನ್ನು ತೋರಿಸುತ್ತದೆ ಎಂದು ವಾಗ್ದಾಳಿ ನಡೆಸಿದರು.
ಈ ಹಿಂದೆ ಆ ಜಾಗದಲ್ಲಿ ಮುಸಲ್ಮಾನರಿಗೆ ಹಬ್ಬದ ಸಮಯದಲ್ಲಿ ನಮಾಜ್ ಮಾಡಲು ಎರಡು ಬಾರಿ ಅವಕಾಶ ಕೊಡುತ್ತಿದ್ದರು. ಹಬ್ಬ ಮುಗಿದ ಮೇಲೆ ಅವರ ಕೆಲಸ ಮಾಡಿ ಅವರು ಹೋಗುತ್ತಿದ್ದರು. ಆದರೆ ಈಗ ವಕ್ಫ್ ತಿದ್ದುಪಡಿ ಜಾರಿಯಾಗುತ್ತೆ ಎಂದು ಗೊತ್ತಾದ ಮೇಲೆ ದುರಾಲೋಚನೆ ಇಂದ ಈ ಕೆಲಸ ಮಾಡಿದ್ದಾರೆ. ಈ ಹಿಂದೆ ಜಿಲ್ಲಾಧಿಕಾರಿಗಳು ನಮಾಜ್ ಮಾಡಲು ಮಾತ್ರ ಅವಕಾಶವನ್ನು ಕಲ್ಪಿಸಿದ್ದರು. ಆ ಜಾಗವನ್ನು ನಿಮ್ಮ ಹಕ್ಕು ಎಂದು ಪ್ರತಿಪಾದನೆ ಮಾಡಲು ನಿಮಗೆ ಅವಕಾಶವಿಲ್ಲ ಎಂದು ಹೇಳಿದ್ದರು .ಆದರೆ ಈಗ ಬೇಲಿ ಹಾಕಿ ಈ ಜಾಗ ನಮ್ಮದು ಎಂದು ಹೇಳುತ್ತಿದ್ದಾರೆ. ಇಷ್ಟು ವರ್ಷ ಇಲ್ಲದಿರುವ ಮಾನಸಿಕತೆ ಈಗ ಬರಲು ಕಾರಣವೇನು ಎಂದು ತಿಳಿಯುತ್ತಿಲ್ಲ ಇದು ಅಕ್ಷಮ್ಯ ಅಪರಾದ ಕೃತ್ಯವಾಗಿದೆ ಎಂದರು.
ವರ್ಷಕ್ಕೆ ಎರಡು ಬಾರಿ ಮುಸಲ್ಮಾನರಿಗೆ ನಮಾಜ್ ಮಾಡಲು ಬಿಡುತ್ತಿದ್ದರು. ಇನ್ನು ಮುಂದೆ ಸಾರ್ವಜನಿಕರು ನಿಮಗೆ ಅಲ್ಲಿ ನಮಾಜ್ ಮಾಡಲು ಬಿಡುವುದಿಲ್ಲ. 2018 ರಲ್ಲಿ ಪಾರ್ಕಿನ ಜಾಗಕ್ಕೆ ಇಂದಿನ ಅಧಿಕಾರಿಗಳು ನಕಲಿ ಖಾತೆ ಮಾಡಿಕೊಟ್ಟಿದ್ದಾರೆ. ಅಂಥಹ ಅಧಿಕಾರಿಗಳ ಮೇಲೆ ಕೂಡಲೇ ಕ್ರಮ ತೆಗೆದುಕೊಳ್ಳಬೇಕು. ಸಾಮಾನ್ಯ ಜನರು ನಮಗೆ ಇರಲು ಮನೆಯಿಲ್ಲ ಮನೆಗೊಂದು ಖಾತೆ ಮಾಡಿಕೊಡಿ ಎಂದರೆ ಅಧಿಕಾರಿಗಳು ಕೊಡುವುದಿಲ್ಲ. ಖಾತೆ ಮಾಡಿ ಕೊಡಬೇಕೆಂದರೆ ಹಿಂದಿನ ದಾಖಲೆಗಳನ್ನೆಲ್ಲ ಕೇಳುತ್ತಾರೆ. ಆದರೆ ಈ ಜಾಗದಲ್ಲಿ ಯಾವುದೇ ಮೂಲ ದಾಖಲೆಗಳನ್ನು ಕೇಳದೆ ಹೇಗೆ ಖಾತೆ ಮಾಡಿಕೊಟ್ಟರು ಎಂಬುದು ತಿಳಿಯುತ್ತಿಲ್ಲ. ಇದೆಲ್ಲದರ ಬಗ್ಗೆ ಬೃಹತ್ ಹೋರಾಟ ಮಾಡುವ ಅವಶ್ಯಕತೆ ಇದೆ. ಮೈದಾನದಲ್ಲಿರುವ ಬ್ಯಾರಿಗೇಡ್ ತೆರವಿಗೆ ಏಪ್ರಿಲ್ 8 ತಾರೀಕಿನ ವರೆಗೆ ಗಡುವು ನೀಡುತ್ತೇವೆ. ಅದನ್ನು ತೆರವುಗೊಳಿಸಿ ಸಾರ್ವಜನಿಕ ಉಪಯೋಗಕ್ಕೆ ಅನುವು ಮಾಡಿಕೊಡದೆ ಇದ್ದರೆ ಜಿಲ್ಲಾಡಳಿತದ ವಿರುದ್ಧ 9 ನೇ ತಾರೀಕು ಬೃಹತ್ ಹೋರಾಟ ಕೈಗೊಳ್ಳುತ್ತೇವೆ ಎಂದರು.
SUMMARY | Shivamogga MLA S N Channabasappa warned that if the district administration does not remove the barricades put up at the Idgah maidan by April 8, the BJP will launch a massive agitation
KEYWORDS | Shivamogga, S N Channabasappa, barricades,