ರಸ್ತೆಬದಿಯಲ್ಲಿ ನಿಲ್ಲಿಸಿ ಹೋಗಿದ್ದ ಬೈಕ್ನ್ನು ಕಳ್ಳತನ ಮಾಡಿದ್ದ ಕಳ್ಳನನ್ನು ಶಿರಾಳಕೊಪ್ಪ ಪೊಲೀಸರು ಬಂಧಿಸಿದ್ದಾರೆ.
ಅಬ್ದುಲ್ ಖಾಧರ್ (20) ಬಂಧಿತ ಆರೋಪಿಯಾಗಿದ್ದಾನೆ.
shiralakoppa news : ಏನಿದು ಪ್ರಕರಣ
ಫೆಬ್ರವರಿ 21, 2025 ರಂದು ಶಿರಾಳಕೊಪ್ಪ ಟೌನ್ನ ಮಠದಗದ್ದೆಯ ನಿವಾಸಿಯೊಬ್ಬರು ತಮ್ಮ ಹಿರೋ ಸ್ಪ್ಲೆಂಡರ್ ಪ್ರೋ ಬೈಕ್ನ್ನು ರಸ್ತೆಬದಿಯಲ್ಲಿ ನಿಲ್ಲಿಸಿ ಹೋಗಿದ್ದರು. ಆಗ ಯಾರೋ ಕಳ್ಳರು ಅವರ ಬೈಕ್ನ್ನು ಕಳ್ಳತನ ಮಾಡಿಕೊಂಡು ಹೋಗಿದ್ದಾರೆ. ಈ ಹಿನ್ನಲೆ ಮಠದಗದ್ದೆಯ ನಿವಾಸಿ ಶಿರಾಳಕೊಪ್ಪ ಪೊಲೀಸ್ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದಾರೆ. ಈ ಹಿನ್ನಲಿ ಪೊಲೀಸರು ಕಳ್ಳರ ಪತ್ತೆಗಾಗಿ ತಂಡ ರಚಿಸಿ ಕಳ್ಳನನ್ನು ಪತ್ತೆಹಚ್ಚಿದ್ದಾರೆ ಆರೋಪಿತನಿಂದ ಅಂದಾಜು ಮೌಲ್ಯ 30,000/- ರೂಗಳ ಹಿರೋ ಸ್ಪ್ಲೆಂಡರ್ ಪ್ರೋ ಬೈಕನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
